ಆ್ಯಪ್ನಗರ

ಬೈಯಪ್ಪನಹಳ್ಳಿ ಪೊಲೀಸರ ಮಿಂಚಿನ ಕಾರ್ಯಾಚರಣೆ..! ಒಂದೇ ದಿನದಲ್ಲಿ ಕಳ್ಳರ ಬಂಧನ

ಬೈಯಪ್ಪನಹಳ್ಳಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಕಳ್ಳತನ ನಡೆದು ಕೇವಲ 24 ಗಂಟೆಯಲ್ಲಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ಮಲ್ಲೇಶ್‌ಪಾಳ್ಯದ ಅಡುಗೆ ಎಣ್ಣೆಯಲ್ಲಿ 1.30 ಲಕ್ಷ ರೂ.ಗಳನ್ನು ಕಳ್ಳರು ದೋಚಿದ್ದರು. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Vijaya Karnataka Web 4 Jun 2020, 5:05 pm
ಬೆಂಗಳೂರು: ಕಳ್ಳತನ ನಡೆದು ಕೇವಲ 24 ಗಂಟೆಯೊಳಗಡೆ ಆರೋಪಿಗಳನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಾದ ಮನೀಶ್ ನಾಯರ್, ಅರವಿಂದ್, ನರೇಶ್‌ನನ್ನು ಬಂಧಿಸಿದ್ದಾರೆ.
Vijaya Karnataka Web police
ಸಾಂದರ್ಭಿಕ ಚಿತ್ರ


ಬೈಯಪ್ಪನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮಲ್ಲೇಶ್‌ಪಾಳ್ಯದಲ್ಲಿ ಬುಧವಾರ ಮಧ್ಯಾಹ್ನ ಅಡುಗೆ ಎಣ್ಣೆ ಅಂಗಡಿಯಲ್ಲಿ ಕಳ್ಳತನ ನಡೆದಿತ್ತು. ಬ್ಲಾಕ್ ಕಲರ್ ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ಖದೀಮರು ಅಂಗಡಿಯಲ್ಲಿದ್ದ 1.30 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದರು.

ಮನೀಶ್ ಅಂಗಡಿಯ ಬಾಗಿಲು ಮುಚ್ಚಿ ಹೊರಗಡೆ ನಿಂತು ಯಾರಾದರೂ ಬರುತ್ತಾರೇನೋ ಎಂದು ಕಾಯುತ್ತಿದ್ದ. ಒಳಗಡೆ ಆರೋಪಿಗಳಾದ ಅರವಿಂದ್ ಹಾಗೂ ನರೇಶ್ ಅಂಗಡಿ ಮಾಲೀಕ ಗಣಪತಿ ಕೈ ಕಾಲು ಕಟ್ಟಿ ಹಣ ದೋಚಿ ಎಸ್ಕೇಪ್‌ ಆಗಿದ್ದರು.

ಪಾಳಿ ಬದಲಿಸಿದ ದರೋಡೆಕೋರರು, ರಾತ್ರಿ ಬದಲು ನಸುಕಿನ ವೇಳೆಯಲ್ಲಿ ಸುಲಿಗೆ

ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಘಟನೆ ಸಂಬಂಧ ಬುಧವಾರ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ ಇನ್ಸ್‌ಪೆಕ್ಟರ್‌ ಮೊಹಮ್ಮದ್‌ ರಫಿ ನೇತೃತ್ವದ ತಂಡ ಗುರುವಾರ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ