ಆ್ಯಪ್ನಗರ

ಬಾಳೆಹಣ್ಣು ದರ ಇಳಿಕೆ, ಟೊಮೇಟೊ ದರ ತುಸು ಏರಿಕೆ

ಬಾಳೆಹಣ್ಣಿನ ದರ ಮತ್ತೆ ಇಳಿಕೆಯಾಗಿದೆ. ಏಲಕ್ಕಿ ಬಾಳೆ ಕೆ.ಜಿಗೆ 48 ರೂ. ಹಾಗೂ ಪಚ್ಚಬಾಳೆ 26 ರೂ.ಗೆ ಮಾರಾಟವಾಗುತ್ತಿದೆ.

Vijaya Karnataka 18 Dec 2018, 5:00 am
ಬೆಂಗಳೂರು: ಬಾಳೆಹಣ್ಣಿನ ದರ ಮತ್ತೆ ಇಳಿಕೆಯಾಗಿದೆ. ಏಲಕ್ಕಿ ಬಾಳೆ ಕೆ.ಜಿಗೆ 48 ರೂ. ಹಾಗೂ ಪಚ್ಚಬಾಳೆ 26 ರೂ.ಗೆ ಮಾರಾಟವಾಗುತ್ತಿದೆ.
Vijaya Karnataka Web BANANA


ಚನ್ನಪಟ್ಟಣ, ರಾಮನಗರ, ಚಿಕ್ಕಬಳ್ಳಾಪುರ ಮತ್ತಿತರ ಭಾಗಗಳಿಂದ ಬಾಳೆಹಣ್ಣನ್ನು ಯಥೇಚ್ಛವಾಗಿ ಬೆಳೆಯಲಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿವೆ. ಜತೆಗೆ ತಮಿಳುನಾಡಿನಿಂದಲೂ ಬಾಳೆಹಣ್ಣು ಆಗಮಿಸುತ್ತಿದೆ.

ಧರ್ನುಮಾಸ ಆರಂಭವಾಗಿರುವುದರಿಂದ ಶುಭ ಕಾರ್ಯಗಳು ಹೆಚ್ಚು ನಡೆಯುವುದಿಲ್ಲ. ಹೀಗಾಗಿ ಬಾಳೆಹಣ್ಣಿಗೆ ತುಸು ಬೇಡಿಕೆ ಕಡಿಮೆಯಾಗಿದ್ದು, ಬೆಲೆಗಳು ಇಳಿದಿವೆ. ವೈಕುಂಠ ಏಕಾದಶಿ ಬಿಟ್ಟರೆ, ಈ ತಿಂಗಳಲ್ಲಿ ವಿಶೇಷ ಆಚರಣೆಗಳು ಇಲ್ಲ. ಸಂಕ್ರಾಂತಿವರೆಗೂ ಇದೇ ದರ ಮುಂದುವರಿಯುವ ಸಾಧ್ಯತೆ ಇದೆ.

ಏಲಕ್ಕಿ ಬಾಳೆ ಕಳೆದ ಒಂದು ತಿಂಗಳ ಹಿಂದೆ ಕೆ.ಜಿ.ಗೆ 80 ರೂ. ದಾಟಿತ್ತು. ಇದೀಗ ಅರ್ಧದಷ್ಟು ಇಳಿಕೆಯಾಗಿದ್ದು, ಹಾಪ್‌ಕಾಮ್ಸ್‌ನಲ್ಲಿ ಒಂದು ಕೆ.ಜಿ. ಏಲಕ್ಕಿ ಬಾಳೆಗೆ 48 ರೂ. ಇದೆ. ಪಚ್ಚಬಾಳೆ ಕೂಡ 26 ರೂ. ಚಳಿಯ ವಾತಾವರಣದಿಂದಾಗಿ ಎಲ್ಲೆಡೆ ತರಕಾರಿ ಬೆಳೆಗಳು ಉತ್ತಮ ಇಳುವರಿ ನೀಡಿವೆ. ಹೀಗಾಗಿ ಹುರುಧಿಳಿಧಿಕಾಯಿ, ಮೂಲಂಗಿ, ಕೊತ್ತಂಬಧಿರಿಧಿಸೊಧಿಪ್ಪು, ಹಾಗಧಿಲಧಿಕಾಯಿ, ಬದಧಿನೆಧಿಕಾಧಿಯಿ, ಸೊಪ್ಪುಧಿಗಧಿಳು ಸೇರಿಧಿದಂತೆ ಕೆಲವು ತರಧಿಕಾಧಿರಿಧಿಗಳ ದರದಲ್ಲಿ ಇಳಿಕೆಯಾಗಿದೆ. ಆದರೆ ಟೊಮೇಟೊ ಬೆಳೆಗೆ ಬಿಂಗಿ ರೋಗ ಬಂದಿರುವುದರಿಂದ ಕೋಲಾರ ಮತ್ತಿತರ ಭಾಗಗಳಲ್ಲಿ ಬೆಳೆ ನಷ್ಟವಾಗಿದ್ದು, ಇಳುವರಿ ಕುಸಿದಿದೆ. ಹೀಗಾಗಿ ಟೊಮೇಟೊ ದರ 14 ರೂ. ಇದ್ದುದು ಇದೀಗ 20 ರೂ.ಗೆ ತಲುಪಿದೆ.

ತಮಿಳುನಾಡು-ಕರ್ನಾಟಕದ ಹಣ್ಣಿಗಿರುವ ವ್ಯತ್ಯಾಸ: ತಮಿಳುನಾಡು, ಆಂಧ್ರ, ಪುದುಚೇರಿಯಿಂದಲೂ ಬಾಳೆಹಣ್ಣು ಬೆಂಗಳೂರಿಗೆ ಬರುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬರುವುದು ತಮಿಳುನಾಡಿನ ಬಾಳೆ. ಇದರ ಸಿಪ್ಪೆ ತುಸು ಗಾಢವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ. ಜತೆಗೆ ಹಣ್ಣಾದ ಕೂಡಲೇ ಸಿಪ್ಪೆ ಬೇಗ ಕಪ್ಪಾಗುತ್ತದೆ. ಅಲ್ಲದೆ ತಮಿಳುನಾಡಿನ ಹಣ್ಣು ಹೆಚ್ಚು ಮಾಗಿದ್ದರೂ ಬಾಳೆಗೊನೆ/ಬಾಳೆಚಿಪ್ಪಿನಿಂದ ಉದುರುವುದಿಲ್ಲ. ಆದರೆ, ಈ ಹಣ್ಣು ರುಚಿ ಕಡಿಮೆಯಿರುತ್ತದೆ.

ಸ್ಥಳೀಯ ಏಲಕ್ಕಿ ಬಾಳೆಹಣ್ಣಿನ ಸಿಪ್ಪೆಯ ಬಣ್ಣ ತುಸು ತಿಳಿ ಹಳದಿಯನ್ನು ಹೊಂದಿರುತ್ತದೆ. ಮಾಗಿದ ಕೂಡಲೇ ಗೊನೆ ಮತ್ತು ಬಾಳೆಚಿಪ್ಪಿನಿಂದ ಹಣ್ಣು ಉದುರಲಾರಂಭಿಸುತ್ತದೆ. ಜತೆಗೆ ಸಿಪ್ಪೆಯೂ ತಾನಾಗಿಯೇ ಸುಲಿಯಲಾರಂಭಿಸುತ್ತದೆ. ಸ್ಥಳೀಯ ಹಣ್ಣು ಸಿಹಿಯೊಂದಿಗೆ ಹೆಚ್ಚು ರುಚಿಕರವಾಗಿರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ