ವಿಕ ಸುದ್ದಿಲೋಕ ಬೆಂಗಳೂರು
ಆಷಾಢ ಮಾಸದ ಮೊದಲ ಶುಕ್ರವಾರ ಪ್ರಯುಕ್ತ ನಗರದ ಬನಶಂಕರಿ ಅಮ್ಮನವರ ದೇವಾಲಯಕ್ಕೆ ಒಂದೂವರೆ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಭಕ್ತರು ಆಗಮಿಸಿದ್ದರು.
ದೇವಾಲಯದಲ್ಲಿ ಮುಂಜಾನೆಯೇ ಆರಂಭವಾದ ಪೂಜಾ ಕೈಂಕರ್ಯಗಳು ರಾತ್ರಿ 10 ಗಂಟೆವರೆಗೂ ನಿರಂತರವಾಗಿ ನಡೆಯಿತು. ಬೆಳಗ್ಗೆ ಬನಶಂಕರಿ ದೇವಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ಪ್ರಾಕಾರೋತ್ಸವ ನಡೆಸಿ ನಂತರ ಮಹಾಮಂಗಳಾರತಿ ಮಾಡಲಾಯಿತು. ಇದೇ ವೇಳೆ ಅಮ್ಮನ ಗರ್ಭಗುಡಿ ಪಕ್ಕದಲ್ಲಿರುವ ಶಾಕಾಂಬರಿ ದೇವಿ, ದುರ್ಗಾ ಪರಮೇಶ್ವರಿ ಹಾಗೂ ಚೌಡೇಶ್ವರಿ ಉತ್ಸವ ಮೂರ್ತಿಗಳಿಗೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ರಾತ್ರಿ ದೇವಾಲಯದ ಆವರಣದಲ್ಲಿ ಚಿಕ್ಕ ರಥೋತ್ಸವ ನಡೆಯಿತು. ಈ ವೇಳೆ ನೆರೆದಿದ್ದ ಭಕ್ತರ ಅಮ್ಮನಿಗೆ ಜೈಕಾರ ಕೂಗಿದರು.
ಮುಜರಾಯಿ ಇಲಾಖೆ ಸಚಿವ ಪಿ. ಟಿ. ಪರಮೇಶ್ವರ ನಾಯಕ್ ಬೆಳಗ್ಗೆ ದೇವಾಲಯಕ್ಕೆ ಭೇಟಿ ನೀಡಿದರು. ಶಾಸಕಿ ಅನಿತಾ ಕುಮಾರಸ್ವಾಮಿ ಸಂಜೆ ವೇಳೆ ಆಗಮಿಸಿ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು. ನಗರ ಪಾಲಿಕೆ ಸದಸ್ಯರು, ನಾನಾ ಕ್ಷೇತ್ರದ ಪ್ರಮುಖರು ದೇವಿಯ ದರ್ಶನ ಪಡೆದರು. ಇಡೀ ದಿನ ದೇವಾಲಯದ ಆವರಣದಲ್ಲಿ ಹೆಜ್ಜೆ ಇಡಲಾರದಷ್ಟು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.
ಹರಕೆ ಸಲ್ಲಿಕೆ :
ದೇವಾಲಯಕ್ಕೆ ಆಗಮಿಸಿದ್ದ ಭಕ್ತರಲ್ಲಿ ಹಲವರು ದೇವಿಗೆ ಸೀರೆ, ಮಡಿಲಕ್ಕಿ, ಬಳೆ, ಅರಿಶಿನ ಕುಂಕುಮ ಅರ್ಪಿಸಿದರು. ಸಹಸ್ರಾರು ಮಂದಿ ದೇವಿಗೆ ನಿಂಬೆ ಹಣ್ಣಿನ ದೀಪ ಬೆಳಗಿ ಹರಕೆ ಸಮರ್ಪಿಸಿದರು. ಬೆಳಗ್ಗೆ 7ಗಂಟೆಗೆ ಆರಂಭವಾದ ಪ್ರಸಾದ ವಿತರಣೆ ಕಾರ್ಯ ರಾತ್ರಿ 9 ಗಂಟೆವರೆಗೂ ನಿರಂತರವಾಗಿ ಸಾಗಿತ್ತು.
ವಿಶೇಷ ದರ್ಶನದಿಂದ
2 ಲಕ್ಷದಷ್ಟು ಆದಾಯ
ಸಹಸ್ರಾರು ಮಂದಿ ದೇವಾಲಯದಲ್ಲಿ ವಿಶೇಷ ದರ್ಶನ ಪಡೆದರು. ಶುಕ್ರವಾರ ಒಂದೇ ದಿನ ವಿಶೇಷ ದರ್ಶನ ಚೀಟಿಯಿಂದ 2 ಲಕ್ಷ ರೂ.ಗೂ ಹೆಚ್ಚು ಹಣ ಸಂಗ್ರಹವಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ತಿಳಿಸಿದರು.
ಆಷಾಢ ಮಾಸದ ಮೊದಲ ಶುಕ್ರವಾರ ಪ್ರಯುಕ್ತ ನಗರದ ಬನಶಂಕರಿ ಅಮ್ಮನವರ ದೇವಾಲಯಕ್ಕೆ ಒಂದೂವರೆ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಭಕ್ತರು ಆಗಮಿಸಿದ್ದರು.
ದೇವಾಲಯದಲ್ಲಿ ಮುಂಜಾನೆಯೇ ಆರಂಭವಾದ ಪೂಜಾ ಕೈಂಕರ್ಯಗಳು ರಾತ್ರಿ 10 ಗಂಟೆವರೆಗೂ ನಿರಂತರವಾಗಿ ನಡೆಯಿತು. ಬೆಳಗ್ಗೆ ಬನಶಂಕರಿ ದೇವಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ಪ್ರಾಕಾರೋತ್ಸವ ನಡೆಸಿ ನಂತರ ಮಹಾಮಂಗಳಾರತಿ ಮಾಡಲಾಯಿತು. ಇದೇ ವೇಳೆ ಅಮ್ಮನ ಗರ್ಭಗುಡಿ ಪಕ್ಕದಲ್ಲಿರುವ ಶಾಕಾಂಬರಿ ದೇವಿ, ದುರ್ಗಾ ಪರಮೇಶ್ವರಿ ಹಾಗೂ ಚೌಡೇಶ್ವರಿ ಉತ್ಸವ ಮೂರ್ತಿಗಳಿಗೂ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ರಾತ್ರಿ ದೇವಾಲಯದ ಆವರಣದಲ್ಲಿ ಚಿಕ್ಕ ರಥೋತ್ಸವ ನಡೆಯಿತು. ಈ ವೇಳೆ ನೆರೆದಿದ್ದ ಭಕ್ತರ ಅಮ್ಮನಿಗೆ ಜೈಕಾರ ಕೂಗಿದರು.
ಮುಜರಾಯಿ ಇಲಾಖೆ ಸಚಿವ ಪಿ. ಟಿ. ಪರಮೇಶ್ವರ ನಾಯಕ್ ಬೆಳಗ್ಗೆ ದೇವಾಲಯಕ್ಕೆ ಭೇಟಿ ನೀಡಿದರು. ಶಾಸಕಿ ಅನಿತಾ ಕುಮಾರಸ್ವಾಮಿ ಸಂಜೆ ವೇಳೆ ಆಗಮಿಸಿ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು. ನಗರ ಪಾಲಿಕೆ ಸದಸ್ಯರು, ನಾನಾ ಕ್ಷೇತ್ರದ ಪ್ರಮುಖರು ದೇವಿಯ ದರ್ಶನ ಪಡೆದರು. ಇಡೀ ದಿನ ದೇವಾಲಯದ ಆವರಣದಲ್ಲಿ ಹೆಜ್ಜೆ ಇಡಲಾರದಷ್ಟು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.
ಹರಕೆ ಸಲ್ಲಿಕೆ :
ದೇವಾಲಯಕ್ಕೆ ಆಗಮಿಸಿದ್ದ ಭಕ್ತರಲ್ಲಿ ಹಲವರು ದೇವಿಗೆ ಸೀರೆ, ಮಡಿಲಕ್ಕಿ, ಬಳೆ, ಅರಿಶಿನ ಕುಂಕುಮ ಅರ್ಪಿಸಿದರು. ಸಹಸ್ರಾರು ಮಂದಿ ದೇವಿಗೆ ನಿಂಬೆ ಹಣ್ಣಿನ ದೀಪ ಬೆಳಗಿ ಹರಕೆ ಸಮರ್ಪಿಸಿದರು. ಬೆಳಗ್ಗೆ 7ಗಂಟೆಗೆ ಆರಂಭವಾದ ಪ್ರಸಾದ ವಿತರಣೆ ಕಾರ್ಯ ರಾತ್ರಿ 9 ಗಂಟೆವರೆಗೂ ನಿರಂತರವಾಗಿ ಸಾಗಿತ್ತು.
ವಿಶೇಷ ದರ್ಶನದಿಂದ
2 ಲಕ್ಷದಷ್ಟು ಆದಾಯ
ಸಹಸ್ರಾರು ಮಂದಿ ದೇವಾಲಯದಲ್ಲಿ ವಿಶೇಷ ದರ್ಶನ ಪಡೆದರು. ಶುಕ್ರವಾರ ಒಂದೇ ದಿನ ವಿಶೇಷ ದರ್ಶನ ಚೀಟಿಯಿಂದ 2 ಲಕ್ಷ ರೂ.ಗೂ ಹೆಚ್ಚು ಹಣ ಸಂಗ್ರಹವಾಗಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ತಿಳಿಸಿದರು.