ಆ್ಯಪ್ನಗರ

ಸಿಬ್ಬಂದಿಗೆ ಕೊರೊನಾ ದೃಢ ಹಿನ್ನೆಲೆ ಬೆಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿ ಸೀಲ್‌ಡೌನ್‌ !

ಊರೆಲ್ಲಾ ಸುತ್ತುತ್ತಿದ್ದ ಕೊರೊನಾ ಈಗ ಬೆಂಗಳೂರು ಕಮೀಷನರ್‌ ಕಚೇರಿಗೂ ಲಗ್ಗೆ ಇಟ್ಟಿದೆ. ಭಯೋತ್ಪಾದಕ ನಿಗ್ರಹ ದಳದ ಸಿಬ್ಬಂದಿಯೊಬ್ಬರಿಗೆ ಶುಕ್ರವಾರ ಕೊರೊನಾ ಪಾಸಿಟಿವ್‌ ದೃಢಪಟ್ಟ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Vijaya Karnataka Web 27 Jun 2020, 9:15 am
ಬೆಂಗಳೂರು: ಕೊರೊನಾ ಸೋಂಕು ಇದೀಗ ನಗರ ಪೊಲೀಸ್‌ ಕಮಿಷನರ್‌ ಕಚೇರಿಗೂ ವ್ಯಾಪಿಸಿದ್ದರಿಂದ ಜೂ.29 ರವರೆಗೂ ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಆಯುಕ್ತರ ಕಚೇರಿಯ ಮೂರನೇ ಮಹಡಿಯಲ್ಲಿ ಕರ್ತವ್ಯದಲ್ಲಿದ್ದ ಭಯೋತ್ಪಾದಕ ನಿಗ್ರಹ ದಳದ ಸಿಬ್ಬಂದಿಯೊಬ್ಬರಿಗೆ ಶುಕ್ರವಾರ ಕೊರೊನಾ ಪಾಸಿಟಿವ್‌ ಇರುವುದು ದೃಢಪಟ್ಟಿದೆ. ಆಡಳಿತ ವಿಭಾಗ ಸೇರಿ ಇಬ್ಬರು ಡಿಸಿಪಿ ಕಚೇರಿ ಕೂಡ ಮೂರನೇ ಮಹಡಿಯಲ್ಲೇ ಇದೆ. ಅಲ್ಲದೆ, ಸೋಂಕಿತ ಸಿಬ್ಬಂದಿ ಸಿಸಿಬಿಯ ಎಸಿಪಿ ವೇಣುಗೋಪಾಲ್‌ ಅವರ ಜತೆಗೆ ಭೂಗತ ಪಾತಕಿ ರವಿಪೂಜಾರಿಯ ವಿಚಾರಣೆ ತಂಡದಲ್ಲೂ ಕೆಲಸ ನಿರ್ವಹಿಸುತ್ತಿದ್ದರು.
Vijaya Karnataka Web commissioner-of-police-infantry-road-bangalore-police-afcijr


ಹಲವು ಹಿರಿಯ ಅಧಿಕಾರಿಗಳು ಸಂಪರ್ಕ!
ಕಳೆದ ಒಂದು ವಾರದಿಂದ ನಿರಂತರವಾಗಿ ಎಫ್‌ಎಸ್‌ಎಲ್‌ ಕಟ್ಟಡದಲ್ಲಿ ರವಿ ಪೂಜಾರಿಯ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಬಳಿಕ ಆ ವರದಿ ಒಪ್ಪಿಸಲು ಸಿಬ್ಬಂದಿ ಡಿಸಿಪಿ ರವಿಕುಮಾರ್‌ ಮತ್ತು ಅಪರಾಧ ವಿಭಾಗದ ಮುಖ್ಯಸ್ಥ ಸಂದೀಪ್‌ ಪಾಟೀಲ್‌ ಅವರ ಕಚೇರಿಗೂ ಪದೇಪದೆ ಭೇಟಿ ನೀಡಿದ್ದರು.

ಶುಕ್ರವಾರ ಕಮಿಷನರ್‌ ಕಚೇರಿಯಲ್ಲಿ ನಡೆದ ಮಾದಕವಸ್ತು ವಿರೋಧಿ ದಿನ ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು. ಬಳಿಕ ಇಲ್ಲಿನ ಅಧಿಕಾರಿಗಳು ಡಿಜಿ-ಐಜಿಪಿ ಕಚೇರಿಗೂ ತೆರಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಆಯ್ದ ಪತ್ರಕರ್ತರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸದ್ಯ ಇಡೀ ಕಮಿಷನರ್‌ ಕಚೇರಿಯನ್ನು ಜೂ.29 ರವರೆಗೂ ಬಂದ್‌ ಮಾಡಲಾಗಿದೆ. ಅಲ್ಲಿಯವರೆಗೂ ಅಧಿಕಾರಿ ಮತ್ತು ಸಿಬ್ಬಂದಿ ಕಮಿಷನರ್‌ ಕಚೇರಿಗೆ ಬರುವ ಅಗತ್ಯವಿಲ್ಲ ಎಂದು ಸೂಚನೆ ಕೂಡ ನೀಡಲಾಗಿದೆ.

ಹೋಂ ಕ್ವಾರಂಟೈನ್‌‌ ಉಲ್ಲಂಘಿಸಿದವರಿಗೆ ಸಾಂಸ್ಥಿಕ ಕ್ವಾರಂಟೈನ್‌ನ ಶಿಕ್ಷೆ, ಕಠಿಣ ಕಾನೂನು ಕ್ರಮ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ