ಆ್ಯಪ್ನಗರ

'ಭ್ರಷ್ಟಾಚಾರ ಮಾಡಿಲ್ಲ, ಬ್ಲೂ ಫಿಲ್ಮ್‌ ನೋಡಿಲ್ಲ, ಆದ್ರೂ ಜೈಲಿಗೆ ಹಾಕಿದ್ರು'! ಡಿಕೆಶಿ ಕಿಡಿ ನುಡಿ

ಇವರಿಗೆ ಜನ್ಮ ಕೊಟ್ಟಿದ್ದು ಕಾಂಗ್ರೆಸ್‌ ಪಕ್ಷ. ಆದ್ರೆ, ಈಗ ತಾಯಿಗೆ ದ್ರೋಹ ಬಗೆದು ಬಿಜೆಪಿ ಸೇರಿದ್ದಾರೆ ಎಂದ ಡಿಕೆಶಿ, ನಾವು ಅವರಿಗೆ ಏನು ಕಡಿಮೆ ಮಾಡಿದ್ವಿ, ಇನ್ನೆಷ್ಟು ಕೊಡಬೇಕು ಎಂದು ಪ್ರಶ್ನಿಸಿದರು.

Vijaya Karnataka Web 3 Dec 2019, 8:07 pm

ಕೆಂಗೇರಿ ಉಪನಗರ (ಬೆಂಗಳೂರು): ನಾನು ಯಾವುದೇ ಲಂಚ ತೆಗೆದುಕೊಂಡಿಲ್ಲ, ನೀಲಿಚಿತ್ರ ನೋಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಆದರೂ ಬಿಜೆಪಿಯವರು ಷಡ್ಯಂತ್ರ ಮಾಡಿ ನನ್ನನ್ನು ಜೈಲಿಗೆ ಹಾಕಿದರು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಕಿಡಿಕಾರಿದರು.
Vijaya Karnataka Web ಭ್ರಷ್ಟಾಚಾರ ಮಾಡಿಲ್ಲ, ಬ್ಲೂ ಫಿಲ್ಮ್‌ ನೋಡಿಲ್ಲ, ಆದ್ರೂ ಜೈಲಿಗೆ ಹಾಕಿದ್ರು! ಡಿಕೆಶಿ ಕಿಡಿ ನುಡಿ


ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಡಿಕೆಶಿ, ನನ್ನ ಸಂಕಷ್ಟದ ಸಮಯದಲ್ಲಿ ನೀವೆಲ್ಲಾ ನನ್ನ ಜೊತೆಯಿದ್ದು ನನಗೆ ಆತ್ಮಸ್ಥೈರ್ಯ ತುಂಬಿದ್ದೀರಿ ಎಂದು ಧನ್ಯವಾದ ಅರ್ಪಿಸಿದರು. ನಿಮ್ಮ ಋುಣ ತೀರಿಸುವ ಭಾಗ್ಯವನ್ನು ಕೊಡಪ್ಪ ದೇವರೇ ಎಂದು ಪ್ರಾರ್ಥಿಸುವೆ ಎಂದರು.

ಯಾರಾದರೂ ಜನಪ್ರತಿನಿಧಿ ಸತ್ತಾಗ ಮಾತ್ರ ಉಪ ಚುನಾವಣೆ ಬರುತ್ತಿತ್ತು, ಈಗ ಪರಿಸ್ಥಿತಿ ಬದಲಾಗಿದೆ ಎಂದ ಡಿಕೆಶಿ, ಇದೇ ವೇಳೆ ಎಸ್‌ಟಿ ಸೋಮಶೇಖರ್ ವಿರುದ್ಧ ಹರಿಹಾಯ್ದರು. ನಿನ್ನ ಸಮಾಧಿ ನೀನೇ ಕಟ್ಟಿಕೊಳ್ತಿದ್ದೀಯ ಎಂದು ಸೋಮಶೇಖರ್‌ಗೆ ಹೇಳಿದ್ದೆ, ಆದರೂ ಆತ ನನ್ನ ಮಾತು ಕೇಳದೆ ಬಿಜೆಪಿಗೆ ಹೋದ ಎಂದರು.

‘ಪಕ್ಷಕ್ಕೆ ದ್ರೋಹ ಎಸಗಿದವರು ಮೀರ್‌ ಸಾದಿಕ್‌ಗಳು’: ಎಂಟಿಬಿ ವಿರುದ್ಧ ಖರ್ಗೆ, ಡಿಕೆಶಿ ವಾಗ್ದಾಳಿ

ಸೋಮಶೇಖರ್‌ ಮತ್ತು ಮುನಿರತ್ನ ಬಂದು ಕ್ಯಾಂಟೀನ್‌ ಮಾಡೋಣ ಅಂದರು. ಅದಕ್ಕೆ ಇಂದಿರಾ ಕ್ಯಾಂಟೀನ್‌ ಎಂದು ಹೆಸರಿಡೋಣ ಎಂದರು. ಇವರಿಗೆ ಜನ್ಮ ಕೊಟ್ಟಿದ್ದು ಕಾಂಗ್ರೆಸ್‌ ಪಕ್ಷ. ಆದ್ರೆ, ಈಗ ತಾಯಿಗೆ ದ್ರೋಹ ಬಗೆದು ಬಿಜೆಪಿ ಸೇರಿದ್ದಾರೆ ಎಂದ ಡಿಕೆಶಿ, ನಾವು ಅವರಿಗೆ ಏನು ಕಡಿಮೆ ಮಾಡಿದ್ವಿ, ಇನ್ನೆಷ್ಟು ಕೊಡಬೇಕು ಎಂದು ಪ್ರಶ್ನಿಸಿದರು.

ಬಿಜೆಪಿ ನೋಟು ತೆಗೆದುಕೊಂಡು ಕಾಂಗ್ರೆಸ್‌ಗೆ ವೋಟು ಹಾಕಿ ಎಂದು ಕರೆಕೊಟ್ಟ ಡಿಕೆಶಿ, ನಮಗೆ ಅಧಿಕಾರ ಸಿಗದಿದ್ದರೂ ಪರವಾಗಿಲ್ಲ. ಎಲ್ಲಾ 15 ಜನರನ್ನೂ ಸೋಲಿಸಿ ಅವರಿಗೆ ಪಾಠ ಕಲಿಸಿ ಎಂದರು.

'ತಿಹಾರ್‌ ಜೈಲಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಡಿಕೆಶಿ'! ಬಿಸಿ ಪಾಟೀಲ್‌ ತಿರುಗೇಟು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ