ಆ್ಯಪ್ನಗರ

ಮೈಕ್ ಕಿತ್ತುಕೊಳ್ಳುವ ನಾಟಕ ಸಾಕು: ಸಂಸದ ಓವೈಸಿಗೆ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ತಿರುಗೇಟು

ಬೆಂಗಳೂರು: ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂಬ ಘೋಷಣೆ ಕೂಗಿದ ಬಳಿಕ ಆಕೆಯ ಕೈಯಿಂದ ಮೈಕ್‌ ಕಿತ್ತುಕೊಳ್ಳುವ ನಾಟಕ ಸಾಕು ಎಂದು ಹೈದರಾಬಾದ್‌ ಸಂಸದ ಓವೈಸಿ ಅಸಾದುದ್ದೀನ್‌ಗೆ ನಗರ ಪೊಲೀಸ್‌ ಕಮಿಷನರ್‌ ಭಾಸ್ಕರ್‌ರಾವ್‌ ಕುಟುಕಿದರು. ಗುರುವಾರ ಫ್ರೀಡಂಪಾರ್ಕ್‌ನಲ್ಲಿ ನಡೆದ ಘಟನೆ ಬಗ್ಗೆ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ರೀತಿ ಪ್ರತಿಕ್ರಿಯಿಸಿದರು. ‘‘ಘೋಷಣೆ ಕೂಗುವ ಮೊದಲೇ ಈ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು. ಘೋಷಣೆ ಕೂಗಿದ ಬಳಿಕ ಮೈಕ್‌ ಕಿತ್ತುಕೊಳ್ಳುವುದರಿಂದ ಏನು ಪ್ರಯೋಜನ?’’ ಎಂದು ಪ್ರಶ್ನಿಸಿದರು.

Vijaya Karnataka Web 21 Feb 2020, 8:56 pm
ಬೆಂಗಳೂರು: ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂಬ ಘೋಷಣೆ ಕೂಗಿದ ಬಳಿಕ ಆಕೆಯ ಕೈಯಿಂದ ಮೈಕ್‌ ಕಿತ್ತುಕೊಳ್ಳುವ ನಾಟಕ ಸಾಕು ಎಂದು ಹೈದರಾಬಾದ್‌ ಸಂಸದ ಓವೈಸಿ ಅಸಾದುದ್ದೀನ್‌ಗೆ ನಗರ ಪೊಲೀಸ್‌ ಕಮಿಷನರ್‌ ಭಾಸ್ಕರ್‌ರಾವ್‌ ಕುಟುಕಿದರು. ಗುರುವಾರ ಫ್ರೀಡಂಪಾರ್ಕ್‌ನಲ್ಲಿ ನಡೆದ ಘಟನೆ ಬಗ್ಗೆ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ರೀತಿ ಪ್ರತಿಕ್ರಿಯಿಸಿದರು. ‘‘ಘೋಷಣೆ ಕೂಗುವ ಮೊದಲೇ ಈ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು. ಘೋಷಣೆ ಕೂಗಿದ ಬಳಿಕ ಮೈಕ್‌ ಕಿತ್ತುಕೊಳ್ಳುವುದರಿಂದ ಏನು ಪ್ರಯೋಜನ?’’ ಎಂದು ಪ್ರಶ್ನಿಸಿದರು.
Vijaya Karnataka Web bangalore police commissioner bhaskar rao criticised mp owaisi
ಮೈಕ್ ಕಿತ್ತುಕೊಳ್ಳುವ ನಾಟಕ ಸಾಕು: ಸಂಸದ ಓವೈಸಿಗೆ ಪೊಲೀಸ್‌ ಕಮಿಷನರ್‌ ಭಾಸ್ಕರ್‌ ರಾವ್‌ ತಿರುಗೇಟು



​ಅಮೂಲ್ಯಳನ್ನು ಕಾರ್ಯಕ್ರಮಕ್ಕೆ ಆಹ್ವಾನಿದ್ದು ಯಾರು

‘‘ಅಮೂಲ್ಯಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು ಯಾರು ಎನ್ನುವ ತನಿಖೆ ಮುಂದುವರೆದಿದೆ. ಯಾವ ಉದ್ದೇಶದಿಂದ ತಾನು ಘೋಷಣೆ ಕೂಗಿದ್ದೆ ಎನ್ನುವುದನ್ನು ಆಕೆ ವಿಚಾರಣೆ ವೇಳೆ ತಿಳಿಸಿದ್ದಾಳೆ. ಈಕೆಯನ್ನು ಕಾರ್ಯಕ್ರಮಕ್ಕೆ ಕರೆಸಿದವರು ಯಾರು, ಅವರ ಉದ್ದೇಶ ಏನಿತ್ತು ಎನ್ನುವ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ ಎಂದರು. ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನಾ ಸಭೆ ಆಯೋಜಿಸಿದ್ದವರೇ ಅಮೂಲ್ಯಗೆ ಭಾಷಣ ಮಾಡಲು ಅವಕಾಶ ನೀಡಿದ್ದರು ಎಂಬ ಮಾಹಿತಿ ಇದೆ. ಅದೇ ಕಾರಣಕ್ಕೆ ಆಯೋಜಕರೂ ಆಗಿರುವ ಪಾಲಿಕೆ ಸದಸ್ಯ ಇಮ್ರಾನ್‌ ಪಾಷಾ ಸೇರಿದಂತೆ ಹಲವರನ್ನು ವಿಚಾರಣೆ ನಡೆಸುತ್ತಿದ್ದೇವೆ’’ ಎಂದು ತಿಳಿಸಿದರು.

​ಹೆಚ್ಚಿನ ಷರತ್ತು; ಭಾಷಣಕಾರರ ಪಟ್ಟಿ ನೀಡಲು ಸೂಚನೆ

‘‘ಸಿಎಎ ವಿರೋಧಿಸಿ ನಡೆಸುವ ಪ್ರತಿಭಟನೆಗಳಿಗೆ ಇನ್ನೂ ಹೆಚ್ಚಿನ ಷರತ್ತು ವಿಧಿಸಲಾಗುವುದು. ಕಾರ್ಯಕ್ರಮಕ್ಕೆ ಬರುವ ಮುಖ್ಯ ಅತಿಥಿಗಳ ವಿವರ, ಭಾಷಣಕಾರರ ವಿವರ, ವೇದಿಕೆಯಲ್ಲಿ ಯಾರು ಯಾರು ಕುಳಿತುಕೊಳ್ಳುತ್ತಾರೆ ಎನ್ನುವ ವಿವರಗಳನ್ನೂ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಮೊದಲೇ ಪಡೆದುಕೊಳ್ಳಲಾಗುವುದು’’ ಎಂದು ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹೇಳಿದರು.

​ನಾನೇ ದೂರುದಾರ ಎಂದ ಪಾಷಾ

ಅಮೂಲ್ಯ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಯಕ್ರಮದ ಆಯೋಜಕರೂ ಆಗಿರುವ ಪಾಲಿಕೆ ಸದಸ್ಯ ಇಮ್ರಾನ್‌ ಪಾಷಾ, ‘‘ನಾವು ಸಂಘಟನೆಯಿಂದ ಅಮೂಲ್ಯಳಿಗೆ ಯಾವುದೇ ಆಹ್ವಾನ ನೀಡಿರಲಿಲ್ಲ. ಘೋಷಣೆ ಕೂಗಿದ ಬಳಿಕ ಪೊಲೀಸರು ವೇದಿಕೆಗೆ ಬರುವ ಮೊದಲೇ ಆಕೆಯಿಂದ ಮೈಕ್‌ ಕಿತ್ತುಕೊಂಡು ಅದನ್ನು ಖಂಡಿಸಿ ಆಕೆಯನ್ನು ವೇದಿಕೆಯಿಂದ ಕೆಳಗೆ ಇಳಿಯುವಂತೆ ಒತ್ತಾಯಿಸಿದ್ದೂ ನಾವೇ. ಬಳಿಕ ಘಟನೆ ಬಗ್ಗೆ ತನಿಖೆ ಸೂಕ್ತ ತನಿಖೆ ನಡೆಸುವಂತೆ ನಡೆಸುವಂತೆ ಡಿಸಿಪಿಗೆ ನಾನೇ ದೂರು ನೀಡಿದ್ದೇನೆ. ಕಾರ್ಯಕ್ರಮಕ್ಕೆ ಅನುಮತಿ ಪಡೆಯಲು ಪೊಲೀಸ್‌ ಠಾಣೆಗೆ ಹೋದಾಗ ಅವರು ಭಾಷಣಕಾರರ ಪಟ್ಟಿ ಕೇಳಿದ್ದರು. ನಾವು ಪೊಲೀಸರಿಗೆ ನೀಡಿರುವ ಪಟ್ಟಿಯಲ್ಲೂಅಮೂಲ್ಯ ಹೆಸರಿಲ್ಲ. ಹೀಗಾಗಿ, ಆಕೆಯ ಭಾಷಣಕ್ಕೂ ನಮಗೂ ಸಂಬಂಧ ಇಲ್ಲ’’ ಎಂದು ಇಮ್ರಾನ್ ಪಾಷಾ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ