ಆ್ಯಪ್ನಗರ

ಕಡಲೆಕಾಯಿ ಪರಿಷೆಯಲ್ಲಿ ಭಿಕ್ಷೆ ಬೇಡಿದ್ದ ಪೇದೆ ಮಂಡಕ್ಕಿ ಅಮಾನತು

ಕಡಲೆಕಾಯಿ ಪರಿಷೆಯಲ್ಲಿ ಕಡಲೆಕಾಯಿ ಭಿಕ್ಷೆ ಬೇಡಿದ್ದ ಪೊಲೀಸ್‌ ಪೇದೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

Vijaya Karnataka Web 15 Nov 2017, 4:32 pm
ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುತ್ತಿರುವ ಕಡಲೆಕಾಯಿ ಪರಿಷೆಯಲ್ಲಿ ಕಡಲೆಕಾಯಿಯನ್ನು ಭಿಕ್ಷೆ ಬೇಡಿ ಪಡೆಯುತ್ತಿದ್ದ ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ.
Vijaya Karnataka Web bangalore police constable suspended
ಕಡಲೆಕಾಯಿ ಪರಿಷೆಯಲ್ಲಿ ಭಿಕ್ಷೆ ಬೇಡಿದ್ದ ಪೇದೆ ಮಂಡಕ್ಕಿ ಅಮಾನತು


ಪರಿಷೆ ಸಂದರ್ಭದಲ್ಲಿ ಪೊಲೀಸ್‌ ಪೇದೆ ಮಂಡಕ್ಕಿಯನ್ನು ಭದ್ರತೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ರಾತ್ರಿಯಾಗುತ್ತಿದ್ದಂತೆ ಮಂಡಕ್ಕಿ ಎಲ್ಲ ಕಡಲೆಕಾಯಿ ಅಂಗಡಿಗಳ ತೆರಳಿ ಕವರ್‌ನಲ್ಲಿ ಕಡಲೆಕಾಯಿಯನ್ನು ಭಿಕ್ಷೆ ಬೇಡಿ ವಸೂಲಿ ಮಾಡುತ್ತಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಮಾಧ್ಯಮಗಳಲ್ಲಿಯೂ ಈ ಸುದ್ದಿ ಪ್ರಸಾರವಾಗಿತ್ತು. ಕರ್ತವ್ಯದಲ್ಲಿ ತೀವ್ರತರ ಲೋಪ ಎಸಗಿರುವುದು ಕಂಡುಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ವಿಭಾಗದ ಪೊಲೀಸ್‌ ಅಧಿಕಾರಿ ತಿಮ್ಮಣ್ಣನವರ್‌ ಅವರು ಪೊಲೀಸ್‌ ಪೇದೆ ಮಂಡಕ್ಕಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Bangalore: Police Constable Suspended

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ