ಆ್ಯಪ್ನಗರ

‘ಬೆಂಗಳೂರು ನಗರಕ್ಕೆ ಇಂದು 5 ಜನ ಪೊಲೀಸ್ ಆಯುಕ್ತರುಗಳು’

ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಐವರು ಮಕ್ಕಳ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಬೆಂಗಳೂರು ಪೊಲೀಸರು ನನಸಾಗಿಸಿದ್ದಾರೆ.

Vijaya Karnataka Web 9 Sep 2019, 2:32 pm
ಬೆಂಗಳೂರು: ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಐವರು ಮಕ್ಕಳ ಪೊಲೀಸ್ ಅಧಿಕಾರಿ ಆಗಬೇಕು ಎಂಬ ಕನಸನ್ನು ರಾಜಧಾನಿ ಬೆಂಗಳೂರು ನಗರ ಪೊಲೀಸರು ನೆರವೇರಿಸಿದ್ದಾರೆ.
Vijaya Karnataka Web bangalore police


ಮೇಕ್ ಅ ವಿಷ್ ಫೌಂಡೇಶನ್ ವತಿಯಿಂದ ಐವರು ಮಕ್ಕಳನ್ನು ಪೊಲೀಸ್ ಆಯುಕ್ತರ ಕಚೇರಿಯ ಆಯುಕ್ತರ ಕುರ್ಚಿಯಲ್ಲಿ ಕೂರಿಸಲಾಯಿತು. ಪೋಲಿಸ್ ಸಮವಸ್ತ್ರದಲ್ಲಿ ಬಂದಿದ್ದ ಮಕ್ಕಳಿಗೆ ಮೊದಲು ಗಾರ್ಡ್ ಆಫ್ ಹಾನರ್ ನೀಡಲಾಯಿತು. ಸಮವಸ್ತ್ರದಲ್ಲಿ ಐವರು ಮಕ್ಕಳು ಪೊಲೀಸ್ ಆಯುಕ್ತರ ಚೇಂಬರ್ ನಲ್ಲಿ ಕುಳಿತು ತಮ್ಮ ಆಸೆಯನ್ನು ನೆರವೇರಿಸಿಕೊಂಡರು.


ಮಕ್ಕಳ ಕೈಗೆ ಲಾಠಿ, ಶಸ್ತ್ರಾಸ್ತ್ರ ಸಹ ನೀಡಲಾಗಿತ್ತು. ಕೈ ಕೋಳ, ವಯರ್ಲೆಸ್ ಅನ್ನು ಕೈಯಲ್ಲಿ ಹಿಡಿದು ಮಕ್ಕಳು ಖುಷಿಪಟ್ಟರು.


ಪ್ರಾಣಾಂತಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಐವರು ಮಕ್ಕಳು ಸಬ್ಇನ್ಸ್ಪೆಕ್ಟರ್ ಆಗಬೇಕು ಎಂಬ ಕನಸು ಹೊಂದಿದ್ದಾರೆ ಎಂದು ಮೇಕ್ ಎ ಫೌಂಡೇಶನ್ ಸಿಬ್ಬಂದಿ ಕೋರಿದರು. ಆದರೆ, ಸಬ್ಇನ್ಸ್ಪೆಕ್ಟರ್ ಏಕೆ ಆಯುಕ್ತರನ್ನೇ ಮಾಡೋಣ ಎಂದು ಹೇಳಿ ಮಕ್ಕಳ ಆಸೆಯನ್ನು ನೆರವೇರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.

ಜನರಿಗೆ ಹತ್ತಿರವಾಗಿ ಮಾನವೀಯತೆ, ಕಾಳಜಿಯನ್ನು ತೋರಿಸುವ ಉದ್ದೇಶದಿಂದ ಮಕ್ಕಳಿಗೆ ಈ ಅವಕಾಶ ನೀಡಲಾಯಿತು ಎಂದು ಭಾಸ್ಕರ್ ರಾವ್ ಹೇಳಿದರು.


ಅನಾರೋಗ್ಯ ಪೀಡಿತ 5 ಮಕ್ಕಳ ಪೊಲೀಸ್ ಅಧಿಕಾರಿ ಆಗಬೇಕೆಂಬ ಕನಸನ್ನು ರಾಜಧಾನಿ ಪೊಲೀಸರು ಈಡೇರಿಸಿರುವ ಕುರಿತು @BlrCityPolice ಟ್ವಿಟರ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಪೊಲೀಸರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ