ಬೆಂಗಳೂರು: ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಐವರು ಮಕ್ಕಳ ಪೊಲೀಸ್ ಅಧಿಕಾರಿ ಆಗಬೇಕು ಎಂಬ ಕನಸನ್ನು ರಾಜಧಾನಿ ಬೆಂಗಳೂರು ನಗರ ಪೊಲೀಸರು ನೆರವೇರಿಸಿದ್ದಾರೆ.
ಮೇಕ್ ಅ ವಿಷ್ ಫೌಂಡೇಶನ್ ವತಿಯಿಂದ ಐವರು ಮಕ್ಕಳನ್ನು ಪೊಲೀಸ್ ಆಯುಕ್ತರ ಕಚೇರಿಯ ಆಯುಕ್ತರ ಕುರ್ಚಿಯಲ್ಲಿ ಕೂರಿಸಲಾಯಿತು. ಪೋಲಿಸ್ ಸಮವಸ್ತ್ರದಲ್ಲಿ ಬಂದಿದ್ದ ಮಕ್ಕಳಿಗೆ ಮೊದಲು ಗಾರ್ಡ್ ಆಫ್ ಹಾನರ್ ನೀಡಲಾಯಿತು. ಸಮವಸ್ತ್ರದಲ್ಲಿ ಐವರು ಮಕ್ಕಳು ಪೊಲೀಸ್ ಆಯುಕ್ತರ ಚೇಂಬರ್ ನಲ್ಲಿ ಕುಳಿತು ತಮ್ಮ ಆಸೆಯನ್ನು ನೆರವೇರಿಸಿಕೊಂಡರು.
ಮಕ್ಕಳ ಕೈಗೆ ಲಾಠಿ, ಶಸ್ತ್ರಾಸ್ತ್ರ ಸಹ ನೀಡಲಾಗಿತ್ತು. ಕೈ ಕೋಳ, ವಯರ್ಲೆಸ್ ಅನ್ನು ಕೈಯಲ್ಲಿ ಹಿಡಿದು ಮಕ್ಕಳು ಖುಷಿಪಟ್ಟರು.
ಪ್ರಾಣಾಂತಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಐವರು ಮಕ್ಕಳು ಸಬ್ಇನ್ಸ್ಪೆಕ್ಟರ್ ಆಗಬೇಕು ಎಂಬ ಕನಸು ಹೊಂದಿದ್ದಾರೆ ಎಂದು ಮೇಕ್ ಎ ಫೌಂಡೇಶನ್ ಸಿಬ್ಬಂದಿ ಕೋರಿದರು. ಆದರೆ, ಸಬ್ಇನ್ಸ್ಪೆಕ್ಟರ್ ಏಕೆ ಆಯುಕ್ತರನ್ನೇ ಮಾಡೋಣ ಎಂದು ಹೇಳಿ ಮಕ್ಕಳ ಆಸೆಯನ್ನು ನೆರವೇರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ಜನರಿಗೆ ಹತ್ತಿರವಾಗಿ ಮಾನವೀಯತೆ, ಕಾಳಜಿಯನ್ನು ತೋರಿಸುವ ಉದ್ದೇಶದಿಂದ ಮಕ್ಕಳಿಗೆ ಈ ಅವಕಾಶ ನೀಡಲಾಯಿತು ಎಂದು ಭಾಸ್ಕರ್ ರಾವ್ ಹೇಳಿದರು.
ಅನಾರೋಗ್ಯ ಪೀಡಿತ 5 ಮಕ್ಕಳ ಪೊಲೀಸ್ ಅಧಿಕಾರಿ ಆಗಬೇಕೆಂಬ ಕನಸನ್ನು ರಾಜಧಾನಿ ಪೊಲೀಸರು ಈಡೇರಿಸಿರುವ ಕುರಿತು @BlrCityPolice ಟ್ವಿಟರ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿದ್ದು, ಪೊಲೀಸರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮೇಕ್ ಅ ವಿಷ್ ಫೌಂಡೇಶನ್ ವತಿಯಿಂದ ಐವರು ಮಕ್ಕಳನ್ನು ಪೊಲೀಸ್ ಆಯುಕ್ತರ ಕಚೇರಿಯ ಆಯುಕ್ತರ ಕುರ್ಚಿಯಲ್ಲಿ ಕೂರಿಸಲಾಯಿತು. ಪೋಲಿಸ್ ಸಮವಸ್ತ್ರದಲ್ಲಿ ಬಂದಿದ್ದ ಮಕ್ಕಳಿಗೆ ಮೊದಲು ಗಾರ್ಡ್ ಆಫ್ ಹಾನರ್ ನೀಡಲಾಯಿತು. ಸಮವಸ್ತ್ರದಲ್ಲಿ ಐವರು ಮಕ್ಕಳು ಪೊಲೀಸ್ ಆಯುಕ್ತರ ಚೇಂಬರ್ ನಲ್ಲಿ ಕುಳಿತು ತಮ್ಮ ಆಸೆಯನ್ನು ನೆರವೇರಿಸಿಕೊಂಡರು.
ಮಕ್ಕಳ ಕೈಗೆ ಲಾಠಿ, ಶಸ್ತ್ರಾಸ್ತ್ರ ಸಹ ನೀಡಲಾಗಿತ್ತು. ಕೈ ಕೋಳ, ವಯರ್ಲೆಸ್ ಅನ್ನು ಕೈಯಲ್ಲಿ ಹಿಡಿದು ಮಕ್ಕಳು ಖುಷಿಪಟ್ಟರು.
ಪ್ರಾಣಾಂತಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಐವರು ಮಕ್ಕಳು ಸಬ್ಇನ್ಸ್ಪೆಕ್ಟರ್ ಆಗಬೇಕು ಎಂಬ ಕನಸು ಹೊಂದಿದ್ದಾರೆ ಎಂದು ಮೇಕ್ ಎ ಫೌಂಡೇಶನ್ ಸಿಬ್ಬಂದಿ ಕೋರಿದರು. ಆದರೆ, ಸಬ್ಇನ್ಸ್ಪೆಕ್ಟರ್ ಏಕೆ ಆಯುಕ್ತರನ್ನೇ ಮಾಡೋಣ ಎಂದು ಹೇಳಿ ಮಕ್ಕಳ ಆಸೆಯನ್ನು ನೆರವೇರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ಜನರಿಗೆ ಹತ್ತಿರವಾಗಿ ಮಾನವೀಯತೆ, ಕಾಳಜಿಯನ್ನು ತೋರಿಸುವ ಉದ್ದೇಶದಿಂದ ಮಕ್ಕಳಿಗೆ ಈ ಅವಕಾಶ ನೀಡಲಾಯಿತು ಎಂದು ಭಾಸ್ಕರ್ ರಾವ್ ಹೇಳಿದರು.
ಅನಾರೋಗ್ಯ ಪೀಡಿತ 5 ಮಕ್ಕಳ ಪೊಲೀಸ್ ಅಧಿಕಾರಿ ಆಗಬೇಕೆಂಬ ಕನಸನ್ನು ರಾಜಧಾನಿ ಪೊಲೀಸರು ಈಡೇರಿಸಿರುವ ಕುರಿತು @BlrCityPolice ಟ್ವಿಟರ್ ಪೇಜ್ನಲ್ಲಿ ಹಂಚಿಕೊಳ್ಳಲಾಗಿದ್ದು, ಪೊಲೀಸರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.