ಆ್ಯಪ್ನಗರ

ಸ್ವಚ್ಛವಾಯಿತು ಬೆಂಗಳೂರಿನ ಅಟ್ಟೂರು ಪಾರ್ಕ್

ಪಾಲಿಕೆಯ ಅಟ್ಟೂರು ವಾರ್ಡ್‌ ವ್ಯಾಪ್ತಿಯ ಯಲಹಂಕ ಉಪನಗರ 4 ನೇ ಹಂತದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದ ಉದ್ಯಾನವನ ನಿರ್ವಹಣೆ ಇಲ್ಲದೆ ವಿಷಜಂತುಗಳ ಆವಾಸ ಸ್ಥಾನವಾಗಿತ್ತು. ಈ ಬಗ್ಗೆ ವಿಜಯ ಕರ್ನಾಟಕ ವರದಿ ಮಾಡಿತ್ತು.

Vijaya Karnataka 19 Jul 2019, 10:08 am
ಯಲಹಂಕ: ವಿಜಯ ಕರ್ನಾಟಕ ವರದಿಯ ಬೆನ್ನಲ್ಲೇ ಅಟ್ಟೂರು ವಾರ್ಡ್‌ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪದ ಪಾರ್ಕ್‌ ಅನ್ನು ಬಿಬಿಎಂಪಿ ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ.
Vijaya Karnataka Web park


ವಿಜಯ ಕರ್ನಾಟಕದ ಗುರುವಾರದ ಸಂಚಿಕೆಯಲ್ಲಿ 'ನಿರ್ವಹಣೆ ಕೊರತೆ: ಸೊರಗಿದ ಪಾರ್ಕ್' ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಇದರ ಬೆನ್ನಲ್ಲೇ ಪಾರ್ಕ್‌ನಲ್ಲಿ ಬಿದ್ದಿದ್ದ ಎಲೆ, ಕೊಂಬೆಗಳನ್ನು ಗುಡಿಸಿ ಸ್ವಚ್ಛಗೊಳಿಸಲಾಗಿದೆ. ನಾಲ್ಕು ಟ್ರಾಕ್ಟರ್‌ನಷ್ಟು ಕಸವನ್ನು ಬೇರೆಡೆಗೆ ಸಾಗಿಸಲಾಯಿತು.

ಬಿಬಿಎಂಪಿ ಯಲಹಂಕ ವಲಯ ತೋಟಗಾರಿಕೆ ವಿಭಾಗದ ಇನ್ಸ್‌ಪೆಕ್ಟರ್‌ ಮಲ್ಯಾದ್ರಿ ಪಿ.ಎಮ್‌. ''ಪಾರ್ಕ್‌ನಲ್ಲಿ ಬಿದ್ದಿದ್ದ ಎಲ್ಲ ಕಸವನ್ನು ಹೊರತೆಗೆಯಲಾಗಿದೆ. ಇನ್ನು ಮುಂದೆ ವಾರಕ್ಕೊಮ್ಮೆ ಸ್ವಚ್ಛಗೊಳಿಸಲು ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ'' ಎಂದರು.

ಎಲೆ, ಕೊಂಬೆಗಳನ್ನು ತೆರವುಗೊಳಿಸದೆ ಪಾರ್ಕ್‌ನಲ್ಲಿ ಕಾಲಿಡಲು ಅಂಜಿವ ಪರಿಸ್ಥಿತಿ ನಿರ್ಮಾಣವಾಗಿದೆ ಹಾಗೂ ವಿಷಜಂತುಗಳ ಕಾಟ ಹೆಚ್ಚಾಗಿದೆ ಎಂದು ವರದಿಯಲ್ಲಿ ಗಮನಸೆಳೆಯಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ