ಆ್ಯಪ್ನಗರ

ಬೈಕ್ ತೆಗೀರಿ ಅಂದಿದ್ದೇ ತಪ್ಪಾಯ್ತು!: ಕಾರ್‌ ಗಾಜನ್ನೇ ಒಡೆದು ಹಾಕಿದ ದುಷ್ಕರ್ಮಿಗಳು

ಬೆಂಗಳೂರಲ್ಲಿ ರಾತ್ರಿ ವೇಳೆ ವಾಹನ ಚಲಾಯಿಸಬೇಕು ಅಂದ್ರೆ ಬಹಳ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ವೃದ್ಧರು, ಮಹಿಳೆಯರು ಕಾರ್ ಚಲಾಯಿಸುತ್ತಿದ್ದರೆ ದುಷ್ಕರ್ಮಿಗಳಿಗೆ ಹಬ್ಬ! ನಡುರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ತೆಗೆಯಿರಿ ಅಂದಿದ್ದಕ್ಕೇ ಸಿಟ್ಟಿಗೆದ್ದ ಪುಂಡ ಯುವಕರು ದಾಂಧಲೆ ಎಬ್ಬಿಸಿಬಿಟ್ಟಿದ್ದಾರೆ.

Bangalore Mirror Bureau 25 Sep 2019, 3:37 pm
Vijaya Karnataka Web head
ಬೆಂಗಳೂರು: ರಸ್ತೆಯ ಮಧ್ಯದಲ್ಲೇ ನಿಲ್ಲಿಸಿದ್ದ ಬೈಕ್ ತೆಗೆಯಿರಿ ಎಂದು ಹೇಳಿದ್ದಕ್ಕೆ, ಕಾರ್‌ನ ಗಾಜನ್ನೇ ಒಡೆದುಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾರು ಚಲಾಯಿಸುತ್ತಿದ್ದ 67 ವರ್ಷದ ವೃದ್ಧರೊಬ್ಬರು ಘಟನೆಯಿಂದಾಗಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಕೋಡಿಹಳ್ಳಿ ಮುಖ್ಯರಸ್ತೆಯಲ್ಲೇ ಈ ಘಟನೆ ನಡೆದಿದೆ.

ಬೆಂಗಳೂರಲ್ಲಿ ಸದ್ಯಕ್ಕೆ ನಿಲ್ಲೋದಿಲ್ಲ ಮಳೆ: ಗುಂಡಿಮಯ, ಜಲಭರಿತ, ಕಸಭರಿತ ರಸ್ತೆಗೆ ಸುಸ್ವಾಗತ!

ಮಧ್ಯರಾತ್ರಿ ನಡುರಸ್ತೆಯಲ್ಲಿ ಏನಾಯ್ತು?

ಛಲ್ಲಘಟ್ಟ ನಿವಾಸಿ ಕೆ. ಹೆಚ್. ವಿಜಯ್ ಕುಮಾರ್ ತಿಪ್ಪಸಂದ್ರದಿಂದ ಕೋಡಿಹಳ್ಳಿ ಮುಖ್ಯರಸ್ತೆ ಮಾರ್ಗವಾಗಿ ತಮ್ಮ ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ರಸ್ತೆಯ ಮಧ್ಯದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಇಬ್ಬರು ಯುವಕರು ಹರಟೆ ಹೊಡೆಯುತ್ತಿದ್ದರು. ಹೀಗಾಗಿ, ಕಾರ್‌ನಲ್ಲಿದ್ದ ವಿಜಯ್ ಕುಮಾರ್ ಹಾರನ್ ಹಾಕಿದರು. ಆದ್ರೆ, ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕಾರ್‌ನ ವಿಂಡೋ ಇಳಿಸಿ ಜಾಗ ಬಿಡುವಂತೆ ವೃದ್ಧರು ಕೇಳಿಕೊಂಡರು. 10 ನಿಮಿಷ ಕಾಯಿರಿ ಅಥವಾ ಯೂ ಟರ್ನ್ ತೆಗೆದುಕೊಂಡು ಬೇರೆ ರಸ್ತೆಯಿಂದ ಸುತ್ತು ಹಾಕಿಕೊಂಡು ಬನ್ನಿ ಎಂದು ದ್ವಿಚಕ್ರ ವಾಹನದಲ್ಲಿದ್ದ ಯುವಕರು ಹೇಳಿದರು. ದಿಕ್ಕು ತೋಚದಂತಾದ ವಿಜಯ್ ಕುಮಾರ್, ಕೆಲ ಕಾಲ ಕಾಯುತ್ತಾ ನಿಂತರು.

ಕೆಲ ಸಮಯದ ಬಳಿಕ ಬೈಕ್ ಹೊರಟಿತು. ಹಿಂದೆಯೇ ವಿಜಯ್ ಕುಮಾರ್ ತಮ್ಮ ಕಾರು ಚಾಲನೆ ಮಾಡುತ್ತಿದ್ದರು. ಆದ್ರೆ, ಬೈಕ್ ಸವಾರ ಅಡ್ಡಾದಿಡ್ಡಿ ಓಡಿಸುತ್ತಿದ್ದ. ಆಗಾಗ ನಿಧಾನವಾಗಿ ಓಡಿಸುತ್ತಿದ್ದ. ಈ ವೇಳೆ, ತಮಗೆ ತೊಂದರೆ ಕೊಡಬೇಡ ಎಂದು ಬೈಕ್ ಸವಾರನಿಗೆ ವೃದ್ಧ ವಿಜಯ್ ಕುಮಾರ್ ಮನವಿ ಮಾಡಿಕೊಂಡರು. ನಾನು ಮುಂದೆ ಹೊರಟುಹೋಗ್ತೇನೆ ಬಿಟ್ಟುಬಿಡಿ ಎಂದರು. ಸಿಟ್ಟಿಗೆದ್ದ ಬೈಕ್ ಸವಾರರು ಕಾರ್‌ಗೆ ಅಡ್ಡಲಾಗಿ ನಡುರಸ್ತೆಯಲ್ಲಿ ತಮ್ಮ ಬೈಕ್ ನಿಲ್ಲಿಸಿದರು.

ಬೈಕ್‌ನಿಂದ ಇಳಿದು ಇಬ್ಬರೂ ಯುವಕರು ಕಾರ್‌ ಬಳಿ ಬರುತ್ತಿದ್ದ ಹಾಗೆಯೇ ಅಪಾಯದ ಮುನ್ಸೂಚನೆ ಅರಿತ ವಿಜಯ್ ಕುಮಾರ್, ಕಾರಿನ ಬಾಗಿಲು-ಕಿಟಕಿ ತೆಗೆಯದೇ ಸುಮ್ಮನಿದ್ದರು. ಆದರೆ, ಯುವಕರು ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿದ್ದರು. ಒಬ್ಬ ಯುವಕ ಬಾನೆಟ್‌ ಮೇಲೆ ಗುದ್ದುತ್ತಿದ್ದರೆ, ಮತ್ತೊಬ್ಬ ಹಿಂಬದಿ ಬಾಗಿಲಿನ ಗಾಜಿನ ಮೇಲೆ ಹೆಲ್ಮೆಟ್‌ನಿಂದ ಬಾರಿಸುತ್ತಿದ್ದ. ಹಿಂಬದಿಯ ಗಾಜು ಪುಡಿಪುಡಿಯಾಗುವವರೆಗೂ ಹೆಲ್ಮೆಟ್‌ನಿಂದ ಯುವಕ ಕುಟ್ಟುತ್ತಲೇ ಇದ್ದ. ರಸ್ತೆಯಲ್ಲಿ ಜನ ಸೇರಲು ಆರಂಭಿಸುತ್ತಿದ್ದಂತೆಯೇ ಇಬ್ಬರೂ ಎಸ್ಕೇಪ್ ಆಗಿಬಿಟ್ಟರು. ಮಾನಸಿಕವಾಗಿ ಆಘಾತಕ್ಕೊಳಗಾದ ವೃದ್ಧ ವಿಜಯ್ ಕುಮಾರ್, ಸಾರ್ವಜನಿಕರ ನೆರವಿನಿಂದಾಗಿ ಪೊಲೀಸ್ ಠಾಣೆ ತಲುಪಿದರು.

‘ನನಗೇ ದಂಡ ಹಾಕ್ತೀಯಾ’? ಬೆಳಗ್ಗೆ ನ್ಯೂಸ್ ನೋಡು ಎಂದು ಪೇದೆಯನ್ನೇ ಲೂಟಿ ಮಾಡಿದ ಕಳ್ಳ!

ವಿಜಯ್ ಕುಮಾರ್ ಅವರಿದ್ದ ವಾಹನ ತಮಿಳುನಾಡು ನೋಂದಣಿ ಹೊಂದಿದ್ದ ಕಾರಣ, ಅದರ ಲಾಭವನ್ನು ಕಿಡಿಗೇಡಿ ಯುವಕರು ಪಡೆದಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಜೆ. ಬಿ.ನಗರ ಪೊಲೀಸರು, ಪುಂಡ ಯುವಕರಿಗಾಗಿ ಬಲೆ ಬೀಸಿದ್ದಾರೆ.

20ರ ಯುವತಿ ಮೇಲೆ 62ರ ವೃದ್ಧನಿಂದ ರೇಪ್: ತೋಟದ ಪಾಲಾಯ್ತು ಪಾಪದ ಕೂಸು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ