ಬೆಂಗಳೂರು: ಡಿ.31ರ ರಾತ್ರಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಯುವತಿಯರನ್ನು ಹಿಂದಿನಿಂದ ಸ್ಪರ್ಶಿಸಿ ದೌರ್ಜನ್ಯ ಎಸಗಿದ ಘಟನೆ ಬಗ್ಗೆ ಅಶೋಕನಗರ ಠಾಣೆ ಇನ್ಸ್ಪೆಕ್ಟರ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಅತೀಕ್ (20) ಮತ್ತು ಶಿವಕುಮಾರ್ (30) ಬಂಧಿತರು.
ಚಪ್ಪಲಿ ಸೇವೆಯೂ ನಡೆಯಿತು
ಲಕ್ಷಾಂತರ ಮಂದಿಯಿದ್ದ ಗುಂಪಿನಲ್ಲಿ ಬಂಧಿತರು ಯುವತಿಯೊಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದರು. ತಕ್ಷಣ ಆ ಯುವತಿಯೇ ಆತನಿಗೆ ಚಪ್ಪಲಿ ಸೇವೆ ಮಾಡಿದ್ದರು. ಒಂದು ಕ್ಷಣ ಅಲ್ಲೇ ನಿಂತರೆ ತನ್ನ ಮುಖ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿಡುತ್ತದೆ ಎನ್ನುವ ಅಪಾಯ ಅರಿತ ಕಿಡಿಗೇಡಿಗಳು ಅಲ್ಲಿಂದ ಕಾಲ್ಕಿತ್ತಿದ್ದರು. ಆದರೆ ಪೊಲೀಸರು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಇಬ್ಬರೂ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಕಾಲಿಗೆ ಬಿದ್ದ ಯುವತಿ
ಯುವತಿಯರ ಮೇಲೇ ಕಣ್ಣು ನೆಟ್ಟಿರುತ್ತಿದ್ದವರಿಗೇನೂ ಕಡಿಮೆ ಇರಲಿಲ್ಲ. ಯಾರಾದರೂ ಯುವತಿ ತೂರಾಡುತ್ತಿದ್ದರೆ ಅದನ್ನು ಮೊಬೈಲ್ನಲ್ಲಿ ಸೆರೆಹಿಡಿಯಲು ಕಾಮುಕ ಮನಸ್ಥಿತಿಯ ಯುವಕರು ಹಾತೊರೆಯುತ್ತಿದ್ದರು. ಇಂಥಾ ಕಾಮುಕರ ಮೊಬೈಲ್ ಕಣ್ಣಿಗೆ ಸಿಕ್ಕ ಯುವತಿಯೊಬ್ಬಳ ವಿಡಿಯೋ ವೈರಲ್ ಆಗಿದೆ. ಗೆಳೆತಿಯ ಜತೆ ಹೋಗುತ್ತಿದ್ದ ಆಕೆಯನ್ನು ಹಿಂಬದಿಯಿಂದ ಕಿಡಿಗೇಡಿಯೊಬ್ಬ ಸ್ಪರ್ಶಿಸಿದ್ದ. ಯುವತಿ ಆತನ ಕೈ ಹಿಡಿದು ಎಳೆದು ಒಂದೆರಡು ಗೂಸಾ ಕೊಡುತ್ತಿದ್ದಂತೆ ಪರಾರಿಯಾದ. ಇದಾದ ಬಳಿಕ ಗೂಸಾ ಕೊಟ್ಟ ಯುವತಿಯೇ ಸ್ಥಳದಲ್ಲಿದ್ದ ಪೊಲೀಸ್ ಪೇದೆಯೊಬ್ಬರ ಕಾಲಿಗೆ ಬೀಳುತ್ತಿರುವ ದೃಶ್ಯ ಕೂಡ ವೈರಲ್ ಆಗಿದೆ.
ತೂರಾಡುವವರ ಆಕರ್ಷಣೆ
ಚರ್ಚ್ ಶೀಟ್ನಲ್ಲಿ 12 ಗಂಟೆಗೆ ಸರಿಯಾಗಿ 'ವೆಲ್ಕಮ್- 2020' ಎಂದು ಮುಗಿಲು ಮುಟ್ಟುವ ಘೋಷಣೆ ಕೇಳುತ್ತಿದ್ದಂತೆ ಎರಡು ಜೋಡಿ ಪ್ರೇಮಿಗಳು ಲಿಪ್ಲಾಕ್ ಮಾಡಿಕೊಂಡು ಚುಂಬಿಸುವ ಮೂಲಕ ತಮ್ಮ ಪಾಲಿನ ಹೊಸ ವರ್ಷವನ್ನು ಸ್ವಾಗತಿಸಿದರು. ಸುತ್ತಲಿದ್ದ ಬಹುತೇಕ ಮಂದಿ ಈ ದೃಶ್ಯವನ್ನು ನೋಡಿಯೂ ತಮಗೂ ಅದಕ್ಕೂ ಸಂಬಂಧ ಇಲ್ಲದವರಂತೆ ತಮ್ಮ ಪಾಲಿನ ಸಂಭ್ರಮದಲ್ಲಿ ಮುಳುಗಿದ್ದರೆ, ಕೆಲವರು ಮಾತ್ರ ಈ ಜೋಡಿಯನ್ನು ನೋಡುತ್ತಾ ನಿಂತು ಬಿಟ್ಟರು. ಪೊಲೀಸರು ಬಂದು ಅವರನ್ನು ಅಲ್ಲಿಂದ ಕಳುಹಿಸುವವರೆಗೂ ನೋಡುತ್ತಲೇ ಇದ್ದರು.
ಇದೇ ರಸ್ತೆಯಲ್ಲಿ ಮೋಜಿನ ನೃತ್ಯದ ನಡುವೆ ಯುವಕರು 'ದಂ ಮಾರೋ ದಂ' ಎನ್ನುತ್ತಾ ಸಿಗರೇಟ್ ಸೇದಿ ಆಕಾಶಕ್ಕೆ ಹೊಗೆ ಬಿಡುತ್ತಾ ಇದನ್ನೇ ತಮ್ಮ ತಾಕತ್ತು ಎನ್ನುವಂತೆ ಸಂಭ್ರಮಿಸಿದರು. ಪೊಲೀಸರು ಬಂದು ಕಾಲಿನ ಮೇಲೆ ಲಾಠಿ ರುಚಿ ತೋರಿಸುತ್ತಿದ್ದಂತೆ ಹೊಗೆ ಉಗುಳುತ್ತಿದ್ದವನ ಮುಖ ಕೆಂಪಾಯಿತು.
ಮಲಗಿದ್ದವರನ್ನು ಬಡಿದೆಬ್ಬಿಸಿದರು:
ಕುಡಿದು ತೂರಾಡುತ್ತಿದ್ದ ಯುವಕರು, ಕುಡಿದು ರಸ್ತೆಯಲ್ಲೇ, ಮಳಿಗೆಗಳ ಕಟ್ಟೆಯ ಮೇಲೇ ಮಲಗಿದ್ದ ಯುವಕರ ಸಂಖ್ಯೆಯೂ ಸಾಕಷ್ಟಿತ್ತು. ಆದರೂ ಅಲ್ಲಲ್ಲಿ ಒಬ್ಬಿಬ್ಬರು ಯುವತಿಯರು ಕುಡಿದು ತೂರಾಡುವ ದೃಶ್ಯಗಳು ಮಾತ್ರ ಎಲ್ಲರ ಆಸಕ್ತಿ ಕೆರಳಿಸುತ್ತಿದ್ದವು. ಬ್ರಿಗೇಡ್ ಜಂಕ್ಷನ್ನಲ್ಲಿಯೇ ರಸ್ತೆ ಬದಿ ಯುವತಿಯೊಬ್ಬರು ನಿದ್ದೆಗೆ ಜಾರಿ ಬಿಟ್ಟಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಮಹಿಳಾ ಪೊಲೀಸರು ಆಕೆಯನ್ನು ಎಬ್ಬಿಸಿ ತಾವೇ ಕ್ಯಾಬ್ ಬುಕ್ ಮಾಡಿ ಮನೆಗೆ ಕಳುಹಿಸಿಕೊಟ್ಟರು.
ಇದೇ ರೀತಿ ಸುಮಾರು 20ಕ್ಕೂ ಅಧಿಕ ಸಂಖ್ಯೆಯ ಯುವತಿಯರು ಕಿಕ್ ಹೆಚ್ಚಾಗಿ ತೂರಾಡ ತೊಡಗಿದರು. ಈ ಯುವತಿಯರ ಮೇಲೆ ಕಾಮುಕರ ಕಣ್ಣು ಬೀಳುವ ಮೊದಲೇ ಅವರನ್ನೆಲ್ಲಾ ಹಿಡಿದು ಇಂಥವರಿಗಾಗಿಯೇ ಮೊದಲೇ ಸಿದ್ಧಪಡಿಸಿದ್ದ 'ಐಲ್ಯಾಂಡ್' ಗೆ ಕರೆತರಲಾಯಿತು. ಬಳಿಕ ಅವರವರ ಸ್ನೇಹಿತರನ್ನು ಹುಡುಕಿಸಿ, ಮನೆಯ ವಿಳಾಸ ಪಡೆದು ತಾವಾಗೇ ಅವರನ್ನೆಲ್ಲಾ ಕಳುಹಿಸಿಕೊಟ್ಟರು. ಇನ್ನು, ಪ್ರೇಮಿಗಳು ತಾವು ಎಲ್ಲಿ ಕಾರು ನಿಲ್ಲಿಸಿದ್ದೇವೆ ಎನ್ನುವುದನ್ನೇ ಮರೆತು ಅತ್ತಿತ್ತ ಅಲ್ಲಾಡುತ್ತಿದ್ದರು. ಅವರ ಕಾರುಗಳನ್ನು ಹುಡುಕಲು ಪೊಲೀಸರೇ ನೆರವಾದರು.
ಬಟ್ಟೆ ಹರಿದುಕೊಂಡ ಮಂಗಳಮುಖಿಯರು
ಎಂ.ಜಿ.ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿದ್ದ ಇಬ್ಬರು ಮಂಗಳಮುಖಿಯರು ಯುವಕರ ಕೆನ್ನೆಗೆ ಮುತ್ತು ಕೊಡುತ್ತಾ, ಕಾಸು ಕೇಳುತ್ತಾ ಕಾಟ ಕೊಡುತ್ತಿದ್ದರು. ಅವರಿಗೆ ಅಲ್ಲಿಂದ ತೆರಳುವಂತೆ ಪೊಲೀಸರು ಎಚ್ಚರಿಸುತ್ತಿದ್ದಂತೆಯೇ ಅವರು ತಮ್ಮ ಬಟ್ಟೆ ಹರಿದುಕೊಂಡು ಅರೆಬೆತ್ತಲೆಯಾಗಿ ಅಸಭ್ಯವಾಗಿ ವರ್ತಿಸಿದರು. ಮಹಿಳಾ ಸಿಬ್ಬಂದಿ ಅವರನ್ನು ಸ್ಥಳದಿಂದ ಎಳೆದು ದೂರಕ್ಕೆ ಬಿಟ್ಟು ಬಂದರು. ಈ ವೇಳೆ ಮಂಗಳಮುಖಿಯರು ಪೊಲೀಸರ ಜತೆಗೂ ಅನುಚಿತವಾಗಿ ವರ್ತಿಸಿದ್ದಾರೆ.
ಸೆಲ್ಫಿಗಾಗಿ ಟೆರೇಸ್ ಏರಿದ
ವಿಪರೀತ ಹುರುಪಿನಲ್ಲಿದ್ದ ಯುವಕನೊಬ್ಬ ಅಮಲನ್ನು ತಡೆದುಕೊಳ್ಳಲಾಗದೆ ಎಂ.ಜಿ.ರಸ್ತೆಯಲ್ಲಿದ್ದ ಬಹುಮಹಡಿ ಕಟ್ಟಡ ಏರಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ. ಇದು ಸ್ಥಳದಲ್ಲಿಕೆಲಕಾಲ ಆತಂಕ ಸೃಷ್ಟಿಸಿತ್ತು. ಸಾರ್ವಜನಿಕರು ಕೆಳಗೆ ಇಳಿಯುವಂತೆ ಕೂಗಿಕೊಂಡರೂ ಇಳಿಯಲಿಲ್ಲ. ಪೊಲೀಸರೂ ಸೂಚಿಸಿದರೂ ಕ್ಯಾರೆ ಎನ್ನಲಿಲ್ಲ. ನಂತರ ಕಟ್ಟಡದಲ್ಲಿದ್ದ ಇತರೆ ಯುವಕರು ಆತನನ್ನು ಅಲ್ಲಿಂದ ಕೆಳಗಿಳಿಸಿದರು.
ಬ್ಯಾಗ್ ತಂದ ಆತಂಕ
ಎಲ್ಲರೂ ಬಿಂದಾಸ್ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾಗ ಚರ್ಚ್ ಶೀಟ್ನಲ್ಲಿಅನಾಥವಾಗಿ ಬಿದ್ದಿದ್ದ ಬ್ಯಾಗ್ವೊಂದು ಪೊಲೀಸರ ಆತಂಕಕ್ಕೂ ಕಾರಣವಾಯಿತು. ಈ ಅನುಮಾನಾಸ್ಪದ ಬ್ಯಾಗ್ ಇರುವ ಜಾಗಕ್ಕೆ ಯಾರನ್ನೂ ಹೋಗಲು ಬಿಡದೆ ಆ ಮಾರ್ಗವನ್ನು ಬಂದ್ ಮಾಡಿದ ಪೊಲೀಸರು ಬ್ಯಾಗನ್ನು ಪರೀಕ್ಷಿಸಿದರು. ಅದರಲ್ಲಿ ಖಾಲಿ ಟಿಫನ್ ಬಾಕ್ಸ್ ಮಾತ್ರ ಇತ್ತು ಎನ್ನುವುದು ಗೊತ್ತಾಗುತ್ತಿದ್ದಂತೆ ಪೊಲೀಸರು ನಿಟ್ಟುಸಿರು ಬಿಟ್ಟರು.
ಚಪ್ಪಲಿ ಸೇವೆಯೂ ನಡೆಯಿತು
ಲಕ್ಷಾಂತರ ಮಂದಿಯಿದ್ದ ಗುಂಪಿನಲ್ಲಿ ಬಂಧಿತರು ಯುವತಿಯೊಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದರು. ತಕ್ಷಣ ಆ ಯುವತಿಯೇ ಆತನಿಗೆ ಚಪ್ಪಲಿ ಸೇವೆ ಮಾಡಿದ್ದರು. ಒಂದು ಕ್ಷಣ ಅಲ್ಲೇ ನಿಂತರೆ ತನ್ನ ಮುಖ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿಡುತ್ತದೆ ಎನ್ನುವ ಅಪಾಯ ಅರಿತ ಕಿಡಿಗೇಡಿಗಳು ಅಲ್ಲಿಂದ ಕಾಲ್ಕಿತ್ತಿದ್ದರು. ಆದರೆ ಪೊಲೀಸರು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಇಬ್ಬರೂ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಕಾಲಿಗೆ ಬಿದ್ದ ಯುವತಿ
ಯುವತಿಯರ ಮೇಲೇ ಕಣ್ಣು ನೆಟ್ಟಿರುತ್ತಿದ್ದವರಿಗೇನೂ ಕಡಿಮೆ ಇರಲಿಲ್ಲ. ಯಾರಾದರೂ ಯುವತಿ ತೂರಾಡುತ್ತಿದ್ದರೆ ಅದನ್ನು ಮೊಬೈಲ್ನಲ್ಲಿ ಸೆರೆಹಿಡಿಯಲು ಕಾಮುಕ ಮನಸ್ಥಿತಿಯ ಯುವಕರು ಹಾತೊರೆಯುತ್ತಿದ್ದರು. ಇಂಥಾ ಕಾಮುಕರ ಮೊಬೈಲ್ ಕಣ್ಣಿಗೆ ಸಿಕ್ಕ ಯುವತಿಯೊಬ್ಬಳ ವಿಡಿಯೋ ವೈರಲ್ ಆಗಿದೆ. ಗೆಳೆತಿಯ ಜತೆ ಹೋಗುತ್ತಿದ್ದ ಆಕೆಯನ್ನು ಹಿಂಬದಿಯಿಂದ ಕಿಡಿಗೇಡಿಯೊಬ್ಬ ಸ್ಪರ್ಶಿಸಿದ್ದ. ಯುವತಿ ಆತನ ಕೈ ಹಿಡಿದು ಎಳೆದು ಒಂದೆರಡು ಗೂಸಾ ಕೊಡುತ್ತಿದ್ದಂತೆ ಪರಾರಿಯಾದ. ಇದಾದ ಬಳಿಕ ಗೂಸಾ ಕೊಟ್ಟ ಯುವತಿಯೇ ಸ್ಥಳದಲ್ಲಿದ್ದ ಪೊಲೀಸ್ ಪೇದೆಯೊಬ್ಬರ ಕಾಲಿಗೆ ಬೀಳುತ್ತಿರುವ ದೃಶ್ಯ ಕೂಡ ವೈರಲ್ ಆಗಿದೆ.
ತೂರಾಡುವವರ ಆಕರ್ಷಣೆ
ಚರ್ಚ್ ಶೀಟ್ನಲ್ಲಿ 12 ಗಂಟೆಗೆ ಸರಿಯಾಗಿ 'ವೆಲ್ಕಮ್- 2020' ಎಂದು ಮುಗಿಲು ಮುಟ್ಟುವ ಘೋಷಣೆ ಕೇಳುತ್ತಿದ್ದಂತೆ ಎರಡು ಜೋಡಿ ಪ್ರೇಮಿಗಳು ಲಿಪ್ಲಾಕ್ ಮಾಡಿಕೊಂಡು ಚುಂಬಿಸುವ ಮೂಲಕ ತಮ್ಮ ಪಾಲಿನ ಹೊಸ ವರ್ಷವನ್ನು ಸ್ವಾಗತಿಸಿದರು. ಸುತ್ತಲಿದ್ದ ಬಹುತೇಕ ಮಂದಿ ಈ ದೃಶ್ಯವನ್ನು ನೋಡಿಯೂ ತಮಗೂ ಅದಕ್ಕೂ ಸಂಬಂಧ ಇಲ್ಲದವರಂತೆ ತಮ್ಮ ಪಾಲಿನ ಸಂಭ್ರಮದಲ್ಲಿ ಮುಳುಗಿದ್ದರೆ, ಕೆಲವರು ಮಾತ್ರ ಈ ಜೋಡಿಯನ್ನು ನೋಡುತ್ತಾ ನಿಂತು ಬಿಟ್ಟರು. ಪೊಲೀಸರು ಬಂದು ಅವರನ್ನು ಅಲ್ಲಿಂದ ಕಳುಹಿಸುವವರೆಗೂ ನೋಡುತ್ತಲೇ ಇದ್ದರು.
ಇದೇ ರಸ್ತೆಯಲ್ಲಿ ಮೋಜಿನ ನೃತ್ಯದ ನಡುವೆ ಯುವಕರು 'ದಂ ಮಾರೋ ದಂ' ಎನ್ನುತ್ತಾ ಸಿಗರೇಟ್ ಸೇದಿ ಆಕಾಶಕ್ಕೆ ಹೊಗೆ ಬಿಡುತ್ತಾ ಇದನ್ನೇ ತಮ್ಮ ತಾಕತ್ತು ಎನ್ನುವಂತೆ ಸಂಭ್ರಮಿಸಿದರು. ಪೊಲೀಸರು ಬಂದು ಕಾಲಿನ ಮೇಲೆ ಲಾಠಿ ರುಚಿ ತೋರಿಸುತ್ತಿದ್ದಂತೆ ಹೊಗೆ ಉಗುಳುತ್ತಿದ್ದವನ ಮುಖ ಕೆಂಪಾಯಿತು.
ಮಲಗಿದ್ದವರನ್ನು ಬಡಿದೆಬ್ಬಿಸಿದರು:
ಕುಡಿದು ತೂರಾಡುತ್ತಿದ್ದ ಯುವಕರು, ಕುಡಿದು ರಸ್ತೆಯಲ್ಲೇ, ಮಳಿಗೆಗಳ ಕಟ್ಟೆಯ ಮೇಲೇ ಮಲಗಿದ್ದ ಯುವಕರ ಸಂಖ್ಯೆಯೂ ಸಾಕಷ್ಟಿತ್ತು. ಆದರೂ ಅಲ್ಲಲ್ಲಿ ಒಬ್ಬಿಬ್ಬರು ಯುವತಿಯರು ಕುಡಿದು ತೂರಾಡುವ ದೃಶ್ಯಗಳು ಮಾತ್ರ ಎಲ್ಲರ ಆಸಕ್ತಿ ಕೆರಳಿಸುತ್ತಿದ್ದವು. ಬ್ರಿಗೇಡ್ ಜಂಕ್ಷನ್ನಲ್ಲಿಯೇ ರಸ್ತೆ ಬದಿ ಯುವತಿಯೊಬ್ಬರು ನಿದ್ದೆಗೆ ಜಾರಿ ಬಿಟ್ಟಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಮಹಿಳಾ ಪೊಲೀಸರು ಆಕೆಯನ್ನು ಎಬ್ಬಿಸಿ ತಾವೇ ಕ್ಯಾಬ್ ಬುಕ್ ಮಾಡಿ ಮನೆಗೆ ಕಳುಹಿಸಿಕೊಟ್ಟರು.
ಇದೇ ರೀತಿ ಸುಮಾರು 20ಕ್ಕೂ ಅಧಿಕ ಸಂಖ್ಯೆಯ ಯುವತಿಯರು ಕಿಕ್ ಹೆಚ್ಚಾಗಿ ತೂರಾಡ ತೊಡಗಿದರು. ಈ ಯುವತಿಯರ ಮೇಲೆ ಕಾಮುಕರ ಕಣ್ಣು ಬೀಳುವ ಮೊದಲೇ ಅವರನ್ನೆಲ್ಲಾ ಹಿಡಿದು ಇಂಥವರಿಗಾಗಿಯೇ ಮೊದಲೇ ಸಿದ್ಧಪಡಿಸಿದ್ದ 'ಐಲ್ಯಾಂಡ್' ಗೆ ಕರೆತರಲಾಯಿತು. ಬಳಿಕ ಅವರವರ ಸ್ನೇಹಿತರನ್ನು ಹುಡುಕಿಸಿ, ಮನೆಯ ವಿಳಾಸ ಪಡೆದು ತಾವಾಗೇ ಅವರನ್ನೆಲ್ಲಾ ಕಳುಹಿಸಿಕೊಟ್ಟರು. ಇನ್ನು, ಪ್ರೇಮಿಗಳು ತಾವು ಎಲ್ಲಿ ಕಾರು ನಿಲ್ಲಿಸಿದ್ದೇವೆ ಎನ್ನುವುದನ್ನೇ ಮರೆತು ಅತ್ತಿತ್ತ ಅಲ್ಲಾಡುತ್ತಿದ್ದರು. ಅವರ ಕಾರುಗಳನ್ನು ಹುಡುಕಲು ಪೊಲೀಸರೇ ನೆರವಾದರು.
ಬಟ್ಟೆ ಹರಿದುಕೊಂಡ ಮಂಗಳಮುಖಿಯರು
ಎಂ.ಜಿ.ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿದ್ದ ಇಬ್ಬರು ಮಂಗಳಮುಖಿಯರು ಯುವಕರ ಕೆನ್ನೆಗೆ ಮುತ್ತು ಕೊಡುತ್ತಾ, ಕಾಸು ಕೇಳುತ್ತಾ ಕಾಟ ಕೊಡುತ್ತಿದ್ದರು. ಅವರಿಗೆ ಅಲ್ಲಿಂದ ತೆರಳುವಂತೆ ಪೊಲೀಸರು ಎಚ್ಚರಿಸುತ್ತಿದ್ದಂತೆಯೇ ಅವರು ತಮ್ಮ ಬಟ್ಟೆ ಹರಿದುಕೊಂಡು ಅರೆಬೆತ್ತಲೆಯಾಗಿ ಅಸಭ್ಯವಾಗಿ ವರ್ತಿಸಿದರು. ಮಹಿಳಾ ಸಿಬ್ಬಂದಿ ಅವರನ್ನು ಸ್ಥಳದಿಂದ ಎಳೆದು ದೂರಕ್ಕೆ ಬಿಟ್ಟು ಬಂದರು. ಈ ವೇಳೆ ಮಂಗಳಮುಖಿಯರು ಪೊಲೀಸರ ಜತೆಗೂ ಅನುಚಿತವಾಗಿ ವರ್ತಿಸಿದ್ದಾರೆ.
ಸೆಲ್ಫಿಗಾಗಿ ಟೆರೇಸ್ ಏರಿದ
ವಿಪರೀತ ಹುರುಪಿನಲ್ಲಿದ್ದ ಯುವಕನೊಬ್ಬ ಅಮಲನ್ನು ತಡೆದುಕೊಳ್ಳಲಾಗದೆ ಎಂ.ಜಿ.ರಸ್ತೆಯಲ್ಲಿದ್ದ ಬಹುಮಹಡಿ ಕಟ್ಟಡ ಏರಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ. ಇದು ಸ್ಥಳದಲ್ಲಿಕೆಲಕಾಲ ಆತಂಕ ಸೃಷ್ಟಿಸಿತ್ತು. ಸಾರ್ವಜನಿಕರು ಕೆಳಗೆ ಇಳಿಯುವಂತೆ ಕೂಗಿಕೊಂಡರೂ ಇಳಿಯಲಿಲ್ಲ. ಪೊಲೀಸರೂ ಸೂಚಿಸಿದರೂ ಕ್ಯಾರೆ ಎನ್ನಲಿಲ್ಲ. ನಂತರ ಕಟ್ಟಡದಲ್ಲಿದ್ದ ಇತರೆ ಯುವಕರು ಆತನನ್ನು ಅಲ್ಲಿಂದ ಕೆಳಗಿಳಿಸಿದರು.
ಬ್ಯಾಗ್ ತಂದ ಆತಂಕ
ಎಲ್ಲರೂ ಬಿಂದಾಸ್ ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾಗ ಚರ್ಚ್ ಶೀಟ್ನಲ್ಲಿಅನಾಥವಾಗಿ ಬಿದ್ದಿದ್ದ ಬ್ಯಾಗ್ವೊಂದು ಪೊಲೀಸರ ಆತಂಕಕ್ಕೂ ಕಾರಣವಾಯಿತು. ಈ ಅನುಮಾನಾಸ್ಪದ ಬ್ಯಾಗ್ ಇರುವ ಜಾಗಕ್ಕೆ ಯಾರನ್ನೂ ಹೋಗಲು ಬಿಡದೆ ಆ ಮಾರ್ಗವನ್ನು ಬಂದ್ ಮಾಡಿದ ಪೊಲೀಸರು ಬ್ಯಾಗನ್ನು ಪರೀಕ್ಷಿಸಿದರು. ಅದರಲ್ಲಿ ಖಾಲಿ ಟಿಫನ್ ಬಾಕ್ಸ್ ಮಾತ್ರ ಇತ್ತು ಎನ್ನುವುದು ಗೊತ್ತಾಗುತ್ತಿದ್ದಂತೆ ಪೊಲೀಸರು ನಿಟ್ಟುಸಿರು ಬಿಟ್ಟರು.