ಆ್ಯಪ್ನಗರ

ರಾಮಮೂರ್ತಿನಗರದಲ್ಲಿ ಮರ ಬಿದ್ದು ಗಾಯಗೊಂಡ ಬಾಲಕಿ ಚಿಕಿತ್ಸಾ ವೆಚ್ಚ ಭರಿಸಲಿರುವ ಪಾಲಿಕೆ

ಅರಳಿಮರದ ಒಣಗಿದ ರೆಂಬೆ ತೆರವಿಗೆ ವಾರದ ಹಿಂದೆಯೇ ಬಿಬಿಎಂಪಿ ಮುಂದಾಗಿತ್ತು. ಆದರೆ ಅದಕ್ಕೆ ಸ್ಥಳೀಯರು ಅಡ್ಡಿ ಪಡಿಸಿದ್ದರು ಎಂದು ಬಿಬಿಎಂಪಿ ಕಮಿಷನರ್‌ ಹೇಳಿದ್ದಾರೆ. ಅಂದೇ ಒಣ ಕೊಂಬೆ-ರೆಂಬೆಗಳನ್ನು ತೆರವು ಮಾಡಿದ್ದರೆ ಬಾಲಕಿಗೆ ಯಾವುದೇ ಅಪಾಯವಾಗುತ್ತಿರಲಿಲ್ಲ.

Vijaya Karnataka Web 13 Mar 2020, 10:46 am
ಬೆಂಗಳೂರು: ರಾಮಮೂರ್ತಿನಗರದ ಕೌದೇನಹಳ್ಳಿ ಬಳಿ ಒಣಗಿದ ರೆಂಬೆ ಬಿದ್ದು ತೀವ್ರವಾಗಿ ಗಾಯಗೊಂಡಿರುವ ಬಾಲಕಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿಯಿಂದಲೇ ಭರಿಸಲಾಗುವುದು ಎಂದು ಮೇಯರ್‌ ಎಂ.ಗೌತಮ್‌ಕುಮಾರ್‌ ಭರವಸೆ ನೀಡಿದರು.
Vijaya Karnataka Web Bangalore Dangerous Tree and Dry branches


ಎಚ್‌ಎಎಲ್‌ ರಸ್ತೆಯಲ್ಲಿರುವ ಮಣಿಪಾಲ್‌ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿರುವ ಬಾಲಕಿ ತ್ರಿಷಾ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಈ ರೀತಿಯ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆಯ ಅರಣ್ಯ ಮತ್ತು ತೋಟಗಾರಿಕಾ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಪಾಯದ ಸ್ಥಿತಿಯಲ್ಲಿರುವ ಹಾಗೂ ಒಣಗಿದ ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು,'' ಎಂದು ತಿಳಿಸಿದರು.

ರೆಂಬೆ ತೆರವಿಗೆ ಸ್ಥಳೀಯರಿಂದ ಅಡ್ಡಿ
ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಮಾತನಾಡಿ, ''ಕೌದೇನಹಳ್ಳಿಯ ಅಶ್ವತ್ಥ ಕಟ್ಟೆಯಲ್ಲಿನ ಅರಳಿಮರದ ರೆಂಬೆಯು ಒಣಗಿರುವುದನ್ನು ಗಮನಿಸಿ ಅರಣ್ಯ ವಿಭಾಗದ ಅಧಿಕಾರಿಗಳು ವಾರದ ಹಿಂದೆಯೇ ತೆರವುಗೊಳಿಸಲು ಮುಂದಾಗಿದ್ದರು. ಆದರೆ, ಸ್ಥಳೀಯರು ತೆರವಿಗೆ ಅವಕಾಶ ನೀಡಿರಲಿಲ್ಲ,'' ಎಂದು ಹೇಳಿದರು.

ಬೆಂಗ್ಳೂರಿನ ಅಪಾಯದಂಚಿನ ಕೊಂಬೆಗಳ ತೆರವಿಗೆ ತಿಂಗಳಿಗೆ 66 ಲಕ್ಷ ಖರ್ಚಾಗುತ್ತಿದ್ರೂ ಅನಾಹುತ ತಪ್ತಿಲ್ಲ!

ಬಾಲಕಿ ಕುಟುಂಬಕ್ಕೆ 1 ಲಕ್ಷ ಪರಿಹಾರ: ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷೆ, ಸ್ಥಳೀಯ ಕಾರ್ಪೋರೇಟರ್‌ ಪದ್ಮಾವತಿ ಶ್ರೀನಿವಾಸ್‌ ಅವರು ಗಾಯಗೊಂಡಿರುವ ಬಾಲಕಿಯ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ನೀಡಿದರು.

ಬೆಂಗಳೂರಲ್ಲಿ ಮರ, ಒಣಗಿದ ರೆಂಬೆ-ಕೊಂಬೆ ಬಿದ್ದು ನಡೆದ ಅನಾಹುತಗಳ ಪಟ್ಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ