ಆ್ಯಪ್ನಗರ

ಬಿಬಿಎಂಪಿ ಉಪ ಚುನಾವಣೆ: ಇಂದು ಫಲಿತಾಂಶ

Vijaya Karnataka 31 May 2019, 5:00 am
ಬೆಂಗಳೂರು : ಬಿಬಿಎಂಪಿಯ ಸಗಾಯಪುರಂ ಮತ್ತು ಕಾವೇರಿಪುರ ವಾರ್ಡ್‌ಗಳ ಉಪ ಚುನಾವಣೆಯ ಫಲಿತಾಂಶವು ಶುಕ್ರವಾರ ಬೆಳಗ್ಗೆ ಹೊರಬೀಳಲಿದೆ. ಎರಡು ಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ಮತ ಎಣಿಕೆ ನಡೆಯಲಿದ್ದು, 17 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
Vijaya Karnataka Web bbmp by election result today
ಬಿಬಿಎಂಪಿ ಉಪ ಚುನಾವಣೆ: ಇಂದು ಫಲಿತಾಂಶ


ಉಪ ಮೇಯರ್‌ ರಮೀಳಾ ಉಮಾಶಂಕರ್‌ ಮತ್ತು ಸದಸ್ಯ ವಿ.ಏಳುಮಲೈ ನಿಧನದಿಂದ ತೆರವಾದ ಸ್ಥಾನಗಳಿಗೆ ಬುಧವಾರ ಉಪ ಚುನಾವಣೆ ನಡೆಯಿತು. ಸಗಾಯಪುರಂ ವಾರ್ಡ್‌ನಲ್ಲಿ ಶೇ 44.82 ಮತ್ತು ಕಾವೇರಿಪುರದಲ್ಲಿ ಕೇವಲ 39.54ರಷ್ಟು ಮತದಾನ ಪ್ರಮಾಣ ದಾಖಲಾಯಿತು. ಎರಡೂ ವಾರ್ಡ್‌ಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ ಪಾಲಿಕೆಯು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬಿಗಿ ಪೊಲೀಸ್‌ ಬಂದೋಬಸ್ತ್‌ ಸಹ ಮಾಡಲಾಗುತ್ತಿದೆ.

ಮತ ಎಣಿಕೆಗಾಗಿ ಕಾವೇರಿಪುರವ ವಾರ್ಡ್‌ನಲ್ಲಿ 5 ಟೇಬಲ್‌ಗಳ ವ್ಯವಸ್ಥೆ ಮಾಡಿದ್ದು, 9 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಹಾಗೆಯೇ, ಸಗಾಯಪುರಂ ವಾರ್ಡ್‌ನಲ್ಲೂ 5 ಟೇಬಲ್‌ ವ್ಯವಸ್ಥೆ ಇರಲಿದ್ದು, 7 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಬೆಳಗ್ಗೆ 9.30 ಗಂಟೆ ವೇಳೆಗೆ ಅಂತಿಮ ಫಲಿತಾಂಶ ಹೊರಬೀಳಲಿದೆ.

ಕಾವೇರಿಪುರ ವಾರ್ಡ್‌ನಲ್ಲಿ ಬಿಜೆಪಿಯ ಸಿ.ಪಲ್ಲವಿ ಮತ್ತು ಜೆಡಿಎಸ್‌ನ ಎನ್‌.ಸುಶೀಲಾ ನಡುವೆ ಗೆಲುವಿಗಾಗಿ ತೀವ್ರ ಹಣಾಹಣಿ ನಡೆದಿದೆ. ಸಗಾಯಪುರಂ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಪಳನಿಅಮ್ಮಾಳ್‌, ಬಿಜೆಪಿಯ ಜೇಯರೀಮ್‌ ಮತ್ತು ಪಕ್ಷೇತರ ಅಭ್ಯರ್ಥಿ ಮಾರಿಮುತ್ತು ನಡುವೆ ತ್ರಿಕೋನ ಸ್ಪರ್ಧೆ ಇದೆ.


ಮತ ಎಣಿಕೆ ಕೇಂದ್ರಗಳು ಎಲ್ಲೆಲ್ಲಿ:


ಸಗಾಯಪುರಂ ವಾರ್ಡ್‌: ಬಿಬಿಎಂಪಿ ಬಾಲಕಿಯರ ಪದವಿ ಪೂರ್ವ ಕಾಲೇಜು, ರಾಬರ್ಟ್‌ಸನ್‌ ರಸ್ತೆ, ಕ್ಲೀವ್‌ಲ್ಯಾಂಡ್‌ ಟೌನ್‌, ಫ್ರೇಜರ್‌ಟೌನ್‌

ಕಾವೇರಿಪುರ ವಾರ್ಡ್‌: ಸರ್ವೋದಯ ನ್ಯಾಷನಲ್‌ ಪಬ್ಲಿಕ್‌ ಶಾಲೆ, 10ನೇ ಮುಖ್ಯರಸ್ತೆ, ಬಿನ್ನಿ ಲೇಔಟ್‌, ನಾಗರಬಾವಿ ಮುಖ್ಯರಸ್ತೆ, ವಿಜಯನಗರ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ