ಆ್ಯಪ್ನಗರ

680 ಕೋಟಿ ರೂ. ನಿಯಮಬಾಹಿರ ಬಿಲ್‌ ಪಾವತಿಸಿದ್ದ ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಗೋವಿಂದರಾಜ್‌ ಅಮಾನತು

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಜಂಟಿ ನಿರ್ದೇಶಕ, ಪಾಲಿಕೆಯ ಹಿಂದಿನ ಮುಖ್ಯ ಲೆಕ್ಕಾಧಿಕಾರಿ ಡಾ. ಆರ್‌.ಗೋವಿಂದರಾಜ್‌ ವಿರುದ್ಧ ಶಿಸ್ತು ಕ್ರಮ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Vijaya Karnataka Web 20 Oct 2020, 6:53 am
ಬೆಂಗಳೂರು: ನಿಯಮಗಳನ್ನು ಉಲ್ಲಂಘಿಸಿ ಗುತ್ತಿಗೆದಾರರಿಗೆ ನಿಯಮಬಾಹಿರವಾಗಿ 680.40 ಕೋಟಿ ರೂ. ಬಿಲ್‌ ಪಾವತಿ ಮಾಡಿದ್ದ ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಡಾ. ಆರ್‌.ಗೋವಿಂದರಾಜ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
Vijaya Karnataka Web BBMP


ನಿಯಮ ಉಲ್ಲಂಘಿಸಿ ಬಿಲ್‌ ಪಾವತಿಸುತ್ತಿರುವ ಬಗ್ಗೆ ಗುತ್ತಿಗೆದಾರರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಅ. 2ರಂದು ಮುಖ್ಯ ಲೆಕ್ಕಾಧಿಕಾರಿ ಕಚೇರಿಗೆ ಬೀಗಮುದ್ರೆ ಹಾಕಿಸಿದ್ದರು. ಮುಖ್ಯ ಲೆಕ್ಕಾಧಿಕಾರಿ ಗೋವಿಂದರಾಜ್‌ ಅವರನ್ನು ಅಂದೇ ಪಾಲಿಕೆ ಸೇವೆಯಿಂದ ಬಿಡುಗಡೆ ಮಾಡಿ ಮಾತೃ ಇಲಾಖೆಯಾದ ಆರ್ಥಿಕ ಇಲಾಖೆಗೆ ಕಳುಹಿಸಿದ್ದರು. ಬಳಿಕ ಪ್ರಕರಣದ ತನಿಖೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದ ಆಯುಕ್ತರು ಗೋವಿಂದರಾಜ್‌ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಮಾಡಲು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದರು.

ನಿಮ್ಮಲ್ಲಿ ಬಂಡೆಯಿರಬಹುದು, ಆದರೆ ನಮ್ಮಲ್ಲಿ ಬಂಡೆ ಒಡೆಯುವ ಡೈನಮೈಟ್‌ಗಳಿವೆ: ನಳಿನ್‌ ಕುಮಾರ್

ಈ ಹಿನ್ನೆಲೆಯಲ್ಲಿಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಜಿ.ಶಶಿಧರ್‌ ಅವರು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಜಂಟಿ ನಿರ್ದೇಶಕ, ಪಾಲಿಕೆಯ ಹಿಂದಿನ ಮುಖ್ಯ ಲೆಕ್ಕಾಧಿಕಾರಿ ಡಾ. ಆರ್‌.ಗೋವಿಂದರಾಜ್‌ ವಿರುದ್ಧ ಶಿಸ್ತು ಕ್ರಮ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪ್ರಮೋಷನ್‌ ಆಸೆಗಾಗಿ ನಕಲಿ ದಾಖಲಾತಿಗಳನ್ನು ಒದಗಿಸಿದ್ದವನ ವಿರುದ್ಧ ದೂರು ದಾಖಲು

ಗೋವಿಂದರಾಜ್ ಕರ್ಮಕಾಂಡದ ವಿವರ:

  • ರಸ್ತೆಗಳ ವಾರ್ಷಿಕ ನಿರ್ವಹಣೆಯಲ್ಲಿ ಜೇಷ್ಠತೆ ಉಲ್ಲಂಘಿಸಿ ನಿರ್ವಹಣೆ ಕಾಮಗಾರಿಗಳಲ್ಲದಿರುವ ಬಿಲ್‌ಗಳ ಪಾವತಿ- 21.38 ಕೋಟಿ ರೂ
  • ಪಾಲಿಕೆ ಅನುದಾನದ ಕಾಮಗಾರಿ ಬಿಲ್‌ಗಳನ್ನು ಸರಕಾರದ 'ರಾಜ್ಯ ಹಣಕಾಸು ಆಯೋಗದ ಅನುದಾನದ- ಮುಕ್ತ ನಿಧಿ' ಲೆಕ್ಕ ಶೀರ್ಷಿಕೆಯಡಿ ನಿಯಮಬಾಹಿರವಾಗಿ ಪಾವತಿ- 133.39 ಕೋಟಿ ರೂ.
  • ಪಾಲಿಕೆ ಅನುದಾನದ ಕಾಮಗಾರಿ ಬಿಲ್‌ಗಳನ್ನು ಸರಕಾರದ ಅನುದಾನದ ವಿಶೇಷ ಮೂಲಭೂತ ಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆಯ ಲೆಕ್ಕ ಶೀರ್ಷಿಕೆಯಡಿ- 12.26 ಕೋಟಿ ರೂ.
  • ಆನ್‌ಲೈನ್‌ ಮೂಲಕವೇ ಪಾವತಿ ಮಾಡಬೇಕಿರುವ ಕಾಮಗಾರಿ ಬಿಲ್‌ಗಳನ್ನು ನಿಯಮಬಾಹಿರವಾಗಿ ಎಒಸಿ ಬಿಡುಗಡೆ- 87.98 ಕೋಟಿ ರೂ.
  • ಉದ್ದೇಶಪೂರ್ವಕವಾಗಿ ಜಿಎಸ್‌ಟಿ ಬಗ್ಗೆ ತಪ್ಪು ಅಭಿಪ್ರಾಯ ನೀಡಿರುವುದರಿಂದ ಪಾಲಿಕೆಗೆ ಹೆಚ್ಚುವರಿ ಹೊರೆ ಉಂಟು ಮಾಡಿರುವುದು- 4.39 ಕೋಟಿ ರೂ.
  • 14ನೇ ಹಣಕಾಸು ಆಯೋಗದ ಅನುದಾನವನ್ನು ತಾತ್ಕಾಲಿಕವಾಗಿ ಮಾರ್ಗ ಪಲ್ಲಟ ಮಾಡಿರುವುದು- 421 ಕೋಟಿ ರೂ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ