ಹೆಬ್ಟಾಳ: ಖಾಸಗಿ ವೈದ್ಯಕೀಯ ಸಂಸ್ಥೆ ನಿಯಂತ್ರಣ ಕಾಯ್ದೆ ಅನುಷ್ಠಾನದ ವಿರುದ್ಧ ವೈದ್ಯರ ಮುಷ್ಕರ ಮುಂದುವರಿದಿದ್ದು, ರೋಗಿಗಳು ಪರದಾಡುವಂತಾಯಿತು.
ವಾರ್ಡ್ ವ್ಯಾಪ್ತಿ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿವೈದ್ಯರಿಲ್ಲದೆ ಹೊರ ರೋಗಿಗಳು ಅಸಮಾಧಾನದಿಂದ ಹೊರನಡೆದರು. ಸಂಜಯನಗರ ರಾಜ್ಮಹಲ್ವಿಲಾಸ್ ಆಸ್ಪತ್ರೆಗೆ ಭೇಟಿ ನಿಡಿದ 85ರ ಹರೆಯದ ವೃದ್ಧೆ ಜ್ಯೋತಿ ಎಂಬುವರು ತಮ್ಮ ಮಗ ಮನೋಜ್ ಜತೆಯಲ್ಲಿರಕ್ತ ಪರೀಕ್ಷೆಗೆ ಬಂದು ಚಿಕಿತ್ಸೆ ಸಿಗದೆ ಹಿಂದಿರುಗಿದರು.
ತುರ್ತು ಸಂದರ್ಭದಲ್ಲಿಹೊರ ರೋಗಿಗಳನ್ನು ಒಳ ರೋಗಿಗಳಾಗಿ ಸ್ವೀಕರಿಸುತ್ತೇವೆ. ಆದರೆ ರೋಗಿಗಳ ಆರೋಗ್ಯದಲ್ಲಿಸ್ವಲ್ಪ ಪ್ರಮಾಣದಲ್ಲಿಏರುಪೇರು ಆದರೂ ಆಡಳಿತ ಮಂಡಳಿಯ ಮೇಲೆಯೇ ಆರೋಪ ಬರುತ್ತದೆ. ವೈದ್ಯರು ಮುಷ್ಕರದಿಂದ ನಾವೇನು ಮಾಡಲು ಸಾಧ್ಯ ಎಂಬುದೇ ಪ್ರಶ್ನೆಯಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಅಸಹಾಯಕತೆ ಪ್ರದರ್ಶಿಸಿದರು.
ವೈದ್ಯರ ಮುಷ್ಕರದಿಂದ ಸಂಜಯನಗರ ಬಿಬಿಎಂಪಿ ಆರೋಗ್ಯ ಕೇಂದ್ರಕ್ಕೆ ರೋಗಿಗಳ ಸಂಖ್ಯೆ ಏರಿತ್ತು. ಸಿಬ್ಬಂದಿಗಳು ಟೋಕನ್ ನೀಡುವುದರ ಮೂಲಕ ರೋಗಿಗಳನ್ನು ಸರದಿಯಲ್ಲಿಬರಲು ಸಲಹೆ ನೀಡುತ್ತಿದ್ದರು. ಮಕ್ಕಳ ಆರೋಗ್ಯ ತಪಾಸಣೆಗೆ ಗುರುವಾರ ಮೀಸಲಿರಿಸಿದರೂ ಸಾಮಾನ್ಯ ರೋಗಿಗಳನ್ನು ವೈದ್ಯಾಧಿಕಾರಿಗಳು ಪರಿಶೀಲಿಸಿದರು.
ವಾರ್ಡ್ ವ್ಯಾಪ್ತಿ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿವೈದ್ಯರಿಲ್ಲದೆ ಹೊರ ರೋಗಿಗಳು ಅಸಮಾಧಾನದಿಂದ ಹೊರನಡೆದರು. ಸಂಜಯನಗರ ರಾಜ್ಮಹಲ್ವಿಲಾಸ್ ಆಸ್ಪತ್ರೆಗೆ ಭೇಟಿ ನಿಡಿದ 85ರ ಹರೆಯದ ವೃದ್ಧೆ ಜ್ಯೋತಿ ಎಂಬುವರು ತಮ್ಮ ಮಗ ಮನೋಜ್ ಜತೆಯಲ್ಲಿರಕ್ತ ಪರೀಕ್ಷೆಗೆ ಬಂದು ಚಿಕಿತ್ಸೆ ಸಿಗದೆ ಹಿಂದಿರುಗಿದರು.
ತುರ್ತು ಸಂದರ್ಭದಲ್ಲಿಹೊರ ರೋಗಿಗಳನ್ನು ಒಳ ರೋಗಿಗಳಾಗಿ ಸ್ವೀಕರಿಸುತ್ತೇವೆ. ಆದರೆ ರೋಗಿಗಳ ಆರೋಗ್ಯದಲ್ಲಿಸ್ವಲ್ಪ ಪ್ರಮಾಣದಲ್ಲಿಏರುಪೇರು ಆದರೂ ಆಡಳಿತ ಮಂಡಳಿಯ ಮೇಲೆಯೇ ಆರೋಪ ಬರುತ್ತದೆ. ವೈದ್ಯರು ಮುಷ್ಕರದಿಂದ ನಾವೇನು ಮಾಡಲು ಸಾಧ್ಯ ಎಂಬುದೇ ಪ್ರಶ್ನೆಯಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಅಸಹಾಯಕತೆ ಪ್ರದರ್ಶಿಸಿದರು.
ವೈದ್ಯರ ಮುಷ್ಕರದಿಂದ ಸಂಜಯನಗರ ಬಿಬಿಎಂಪಿ ಆರೋಗ್ಯ ಕೇಂದ್ರಕ್ಕೆ ರೋಗಿಗಳ ಸಂಖ್ಯೆ ಏರಿತ್ತು. ಸಿಬ್ಬಂದಿಗಳು ಟೋಕನ್ ನೀಡುವುದರ ಮೂಲಕ ರೋಗಿಗಳನ್ನು ಸರದಿಯಲ್ಲಿಬರಲು ಸಲಹೆ ನೀಡುತ್ತಿದ್ದರು. ಮಕ್ಕಳ ಆರೋಗ್ಯ ತಪಾಸಣೆಗೆ ಗುರುವಾರ ಮೀಸಲಿರಿಸಿದರೂ ಸಾಮಾನ್ಯ ರೋಗಿಗಳನ್ನು ವೈದ್ಯಾಧಿಕಾರಿಗಳು ಪರಿಶೀಲಿಸಿದರು.