ಆ್ಯಪ್ನಗರ

ಬಿಬಿಎಂಪಿ ಆರೋಗ್ಯ ಕೇಂದ್ರದತ್ತ ಮುಖ ಮಾಡಿದ ರೋಗಿಗಳು

ಖಾಸಗಿ ವೈದ್ಯಕೀಯ ಸಂಸ್ಥೆ ನಿಯಂತ್ರಣ ಕಾಯ್ದೆ ಅನುಷ್ಠಾನದ ವಿರುದ್ಧ ವೈದ್ಯರ ಮುಷ್ಕರ ಮುಂದುವರಿದಿದ್ದು, ರೋಗಿಗಳು ಪರದಾಡುವಂತಾಯಿತು.

Vijaya Karnataka 17 Nov 2017, 1:11 pm
ಹೆಬ್ಟಾಳ: ಖಾಸಗಿ ವೈದ್ಯಕೀಯ ಸಂಸ್ಥೆ ನಿಯಂತ್ರಣ ಕಾಯ್ದೆ ಅನುಷ್ಠಾನದ ವಿರುದ್ಧ ವೈದ್ಯರ ಮುಷ್ಕರ ಮುಂದುವರಿದಿದ್ದು, ರೋಗಿಗಳು ಪರದಾಡುವಂತಾಯಿತು.
Vijaya Karnataka Web bbmp health centre
ಬಿಬಿಎಂಪಿ ಆರೋಗ್ಯ ಕೇಂದ್ರದತ್ತ ಮುಖ ಮಾಡಿದ ರೋಗಿಗಳು


ವಾರ್ಡ್‌ ವ್ಯಾಪ್ತಿ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿವೈದ್ಯರಿಲ್ಲದೆ ಹೊರ ರೋಗಿಗಳು ಅಸಮಾಧಾನದಿಂದ ಹೊರನಡೆದರು. ಸಂಜಯನಗರ ರಾಜ್‌ಮಹಲ್‌ವಿಲಾಸ್‌ ಆಸ್ಪತ್ರೆಗೆ ಭೇಟಿ ನಿಡಿದ 85ರ ಹರೆಯದ ವೃದ್ಧೆ ಜ್ಯೋತಿ ಎಂಬುವರು ತಮ್ಮ ಮಗ ಮನೋಜ್‌ ಜತೆಯಲ್ಲಿರಕ್ತ ಪರೀಕ್ಷೆಗೆ ಬಂದು ಚಿಕಿತ್ಸೆ ಸಿಗದೆ ಹಿಂದಿರುಗಿದರು.

ತುರ್ತು ಸಂದರ್ಭದಲ್ಲಿಹೊರ ರೋಗಿಗಳನ್ನು ಒಳ ರೋಗಿಗಳಾಗಿ ಸ್ವೀಕರಿಸುತ್ತೇವೆ. ಆದರೆ ರೋಗಿಗಳ ಆರೋಗ್ಯದಲ್ಲಿಸ್ವಲ್ಪ ಪ್ರಮಾಣದಲ್ಲಿಏರುಪೇರು ಆದರೂ ಆಡಳಿತ ಮಂಡಳಿಯ ಮೇಲೆಯೇ ಆರೋಪ ಬರುತ್ತದೆ. ವೈದ್ಯರು ಮುಷ್ಕರದಿಂದ ನಾವೇನು ಮಾಡಲು ಸಾಧ್ಯ ಎಂಬುದೇ ಪ್ರಶ್ನೆಯಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಅಸಹಾಯಕತೆ ಪ್ರದರ್ಶಿಸಿದರು.

ವೈದ್ಯರ ಮುಷ್ಕರದಿಂದ ಸಂಜಯನಗರ ಬಿಬಿಎಂಪಿ ಆರೋಗ್ಯ ಕೇಂದ್ರಕ್ಕೆ ರೋಗಿಗಳ ಸಂಖ್ಯೆ ಏರಿತ್ತು. ಸಿಬ್ಬಂದಿಗಳು ಟೋಕನ್‌ ನೀಡುವುದರ ಮೂಲಕ ರೋಗಿಗಳನ್ನು ಸರದಿಯಲ್ಲಿಬರಲು ಸಲಹೆ ನೀಡುತ್ತಿದ್ದರು. ಮಕ್ಕಳ ಆರೋಗ್ಯ ತಪಾಸಣೆಗೆ ಗುರುವಾರ ಮೀಸಲಿರಿಸಿದರೂ ಸಾಮಾನ್ಯ ರೋಗಿಗಳನ್ನು ವೈದ್ಯಾಧಿಕಾರಿಗಳು ಪರಿಶೀಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ