ಆ್ಯಪ್ನಗರ

ಬನ್ನೇರುಘಟ್ಟ: ಬಿಎಂಟಿಸಿ ಡಿಪೋ ಮುಂದೆ ಪಾಲಿಕೆ ಅಧಿಕಾರಿಗಳ ಧರಣಿ

ತೆರಿಗೆ ಬಾಕಿ ಇರಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಡಿಪೋ-34ರ ಎದುರು ಪಾಲಿಕೆ ಅಧಿಕಾರಿಗಳು ಧರಣಿ ನಡೆಸಿದರು. ಬಿಎಂಟಿಸಿ ಡಿಪೋ ಜಾಗಕ್ಕೆ ಸಂಬಂಧಿಸಿದಂತೆ 4 ವರ್ಷಗಳಿಂದ ತೆರಿಗೆ ಕಟ್ಟಿಲ್ಲ. ಇದರಿಂದ ತೆರಿಗೆ ಬಾಕಿ 12 ಲಕ್ಷ ರೂ. ಗೆ ಬೆಳೆದ ಹಿನ್ನಲೆಯಲ್ಲಿ ಪಾಲಿಕೆ ಅಧಿಕಾರಿಗಳು ನಾಮ ಫಲಕಗಳನ್ನು ಹಿಡಿದು ಧರಣಿ ನಡೆಸಿದರು.

Vijaya Karnataka Web 11 Mar 2020, 7:39 am
ಬನ್ನೇರುಘಟ್ಟ: 12 ಲಕ್ಷ ರೂ. ತೆರಿಗೆ ಬಾಕಿ ಇರಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಡಿಪೋ-34ರ ಎದುರು ಪಾಲಿಕೆ ಅಧಿಕಾರಿಗಳು ನಾಮ ಫಲಕಗಳನ್ನು ಹಿಡಿದು ಧರಣಿ ನಡೆಸಿದರು.
Vijaya Karnataka Web bbmp  protest


ಗೊಟ್ಟಿಗೆರೆ ವಾರ್ಡ್‌ನ ಬಿ.ಕೆ ಸರ್ಕಲ್‌ ಬಳಿ ಇರುವ ಬಿಎಂಟಿಸಿ ಡಿಪೋ ಜಾಗಕ್ಕೆ ಸಂಬಂಧಿಸಿದಂತೆ 4 ವರ್ಷಗಳಿಂದ ತೆರಿಗೆ ಕಟ್ಟಿಲ್ಲ. ಇದರಿಂದಾಗಿ ತೆರಿಗೆ ಬಾಕಿ 12 ಲಕ್ಷ ರೂ. ಗೆ ಬೆಳೆದಿದೆ. ಈ ಹಿನ್ನೆಲೆಯಲ್ಲಿಅಧಿಕಾರಿಗಳು ಡಿಪೋ ಗೇಟ್‌ ಬಳಿ 'ತೆರಿಗೆ ಕಟ್ಟಿ ನಗರಾಭಿವೃದ್ಧಿಗೆ ಸಹಕರಿಸಿ', 'ಕಡ್ಡಾಯವಾಗಿ ತೆರಿಗೆ ಪಾವತಿಸಿ' ಎಂದು ನಾಮ ಫಲಕಗಳನ್ನು ಹಿಡಿದು ಶಾಂತಿಯುತ ಪ್ರತಿಭಟನೆ ನಡೆಸಿದರು ಹಾಗೂ ಗೋಡೆ ಮೇಲೆ ನೋಟಿಸ್‌ ಅಂಟಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಅಂಜನಾಪುರ ಉಪವಿಭಾಗ ಸಹಾಯಕ ಕಂದಾಯ ಅಧಿಕಾರಿ ರಮೇಶ್‌, ''ತೆರಿಗೆ ಪಾವತಿಸಿ ಎಂದು ಶಾಂತಿಯುತ ಧರಣಿ ಮಾಡುತ್ತಿದ್ದೇವೆ. ಬಿಎಂಟಿಸಿಯು ಪಾಲಿಕೆಗೆ ಒಟ್ಟು 34 ಕೋಟಿ ರೂ. ತೆರಿಗೆ ಹಣ ಬಾಕಿ ಉಳಿಸಿಕೊಂಡಿದೆ,'' ಎಂದು ತಿಳಿಸಿದರು.

ಬಿಎಂಟಿಸಿ ಡಿಪೋ 34ರ ವ್ಯವಸ್ಥಾಪಕ ರಾಘವೇಂದ್ರ ಮಾತನಾಡಿ, ''ತೆರಿಗೆ ಕಟ್ಟಿ ಎಂದು ಬಿಬಿಎಂಪಿಯವರು ಧರಣಿ ಕೂತಿದ್ದರು. ನಾವು ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸೋಮವಾರ ಕಟ್ಟುವುದಾಗಿ ತಿಳಿಸಿದ್ದಾರೆ. ಅಲ್ಲಿಯ ತನಕ ಪಾಲಿಕೆಯವರು ಸಮಯ ನೀಡಿದ್ದಾರೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ