ಆ್ಯಪ್ನಗರ

ಬೆಂಗಳೂರಿಗೆ ಬರ್ತಿದೆ 'ವಿಷನ್‌ -2050': ಕೈಪಿಡಿ ರಚನೆಗೆ ಪ್ರತ್ಯೇಕ ತಂಡ

ಉದ್ಯಾನನಗರಿಯ ಅಭಿವೃದ್ಧಿಗೆ ದೀರ್ಘಕಾಲಿಕ ಯೋಜನೆಯೊಂದು ತಯಾರಾಗುತ್ತಿದೆ. ಇದಕ್ಕಾಗಿ ಬಿಬಿಎಂಪಿಯು ತಜ್ಞರನ್ನೊಳಗೊಂಡ ನೀಲನಕ್ಷಾ ಕ್ರಿಯಾ ತಂಡ ರಚಿಸುತ್ತಿದೆ. ವಿಷನ್‌ ಬೆಂಗಳೂರು-2050 ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ.

Vijaya Karnataka Web 13 Sep 2019, 8:16 am

ಬೆಂಗಳೂರು: ಉದ್ಯಾನನಗರಿಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ 'ವಿಷನ್‌ ಬೆಂಗಳೂರು-2050' ಯೋಜನೆ ಮತ್ತೆ ಸದ್ದು ಮಾಡುತ್ತಿದೆ. ಮಹಾನಗರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನಾಗರಿಕರು, ತಜ್ಞರು ಹಾಗೂ ಬಿಬಿಎಂಪಿ ನಡುವೆ ಕೊಂಡಿಯಂತೆ ಕೆಲಸ ಮಾಡುವ ನೀಲನಕ್ಷಾ ಕ್ರಿಯಾ ತಂಡ ರಚಿಸುವಂತೆ 'ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಗುರುವಾರ ಆದೇಶ ನೀಡಿದ್ದಾರೆ.
Vijaya Karnataka Web BBMP


ಮಾನ್ಯ ಮುಖ್ಯಮಂತ್ರಿಗಳ ದೂರದೃಷ್ಟಿಯಂತೆ, 'ಬೆಂಗಳೂರು ವಿಷನ್‌-2050' ಕೈಪಿಡಿ ತಯಾರಿಸಲು ಮುಂದಾಗಿದ್ದೇವೆ. ಇದಕ್ಕಾಗಿ ಪ್ರತ್ಯೇಕ 'ನಗರ ಯೋಜನಾ ತಂಡ' ರಚನೆಯಾಗುತ್ತಿದೆ' ಇದರಲ್ಲಿ ನಗರ ಯೋಜನೆ ವಿಭಾಗದ ತಜ್ಞರು ಇರಲಿದ್ದು, ಕೈಪಿಡಿಯ ಕರಡು ಪ್ರತಿಯನ್ನು ತಯಾರಿಸಲಿದ್ದಾರೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದು, ವೈರಲ್‌ ಆಗಿದೆ.

ಬೆಂಗಳೂರು ವಿಷನ್‌ ಗ್ರೂಪ್‌ ರಚನೆ ರದ್ದು

ಬಿಬಿಎಂಪಿ 'ವಿಷನ್‌-2050' ಯೋಜನೆ ಕೈಗೊಳ್ಳುತ್ತಿದೆ. ಇದನ್ನು ಇಲ್ಲಿನ ನಾಗರಿಕರ ಸಹಕಾರವಿದ್ದರೆ ಮಾತ್ರವೇ ಯೋಜಿಸಿ, ಅನುಷ್ಠಾನಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಗರದ ಎಲ್ಲ ನಾಗರಿಕರು ಪಾಲ್ಗೊಳ್ಳಬೇಕು ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ವಿಷನ್‌-2050ಕೈಪಿಡಿ ರಚನೆ ತಂಡಕ್ಕೆ ಬಿಬಿಎಂಪಿಗೆ ವಿಶೇಷವಾಗಿ ನೇಮಕವಾಗಿರುವ ಹೆಚ್ಚುವರಿ ನಿರ್ದೇಶಕ ಎಸ್. ಎಲ್‌. ರಾಜಣ್ಣ ನೇತೃತ್ವ ವಹಿಸಲಿದ್ದಾರೆ.

‘ವಿಷನ್ ಬೆಂಗಳೂರು’ ಬಿಡುಗಡೆ ಮಾಡಲಿರುವ ಸಿಎಂ

ಹಿಂದೆಯೂ ಪ್ರಸ್ತಾವನೆಯಾಗಿತ್ತು: ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ 'ಬೆಂಗಳೂರು ವಿಷನ್‌-2050' ಪ್ರಸ್ತಾವನೆಯಾಗಿತ್ತು. ಆದರೆ, ಈ ಯೋಜನೆಯನ್ನು ಪ್ರಶ್ನಿಸಿ , ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಸಂವಿಧಾನಬದ್ಧ ಬೆಂಗಳೂರು ಮಹಾನಗರ ಯೋಜನಾ ಸಮಿತಿ ಅಸ್ತಿತ್ವದಲ್ಲಿರಬೇಕಾದರೆ ಮತ್ತೊಂದು ಪೂರಕ ಸಂಸ್ಥೆ 'ಬೆಂಗಳೂರು ವಿಷನ್‌ ಗ್ರೂಪ್‌' ರಚನೆ ಅಗತ್ಯವೇನಿತ್ತು ಎಂದು ಹೈಕೋರ್ಟ್ ಚಾಟಿ ಬೀಸಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ರಾಜ್ಯ ಸರಕಾರ ವಿಷನ್‌ ಗ್ರೂಪ್‌ ಯೋಜನೆಯನ್ನು ರದ್ದುಗೊಳಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ