ಆ್ಯಪ್ನಗರ

ತೆರಿಗೆ ಪಾವತಿಸದವರ ಆಸ್ತಿ ಮಾರಾಟಕ್ಕೆ ಬಿಬಿಎಂಪಿ ಚಿತ್ತ..! ಪಾಲಿಕೆ ಆಯುಕ್ತರಿಂದ ಆಡಳಿತಾಧಿಕಾರಿಗೆ ಪ್ರಸ್ತಾವನೆ

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಮೇಲೆ ಸಮರಕ್ಕೆ ಮುಂದಾಗಿದ್ದು, ತೆರಿಗೆ ಪಾವತಿಸದವರ ಸ್ವತ್ತನ್ನು ಮಾರಾಟ ಮಾಡಿ ಅದರಿಂದ ಸಂಗ್ರಹವಾಗುವ ಹಣವನ್ನು ಬಾಕಿ ತೀರುವಳಿಗೆ ಜಮೆ ಮಾಡಿಕೊಳ್ಳುವ ನಿಯಮವನ್ನು ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.

Vijaya Karnataka Web 20 Sep 2020, 11:02 pm
ಬೆಂಗಳೂರು: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಸ್ವತ್ತನ್ನು ಮಾರಾಟ ಮಾಡಿ ಅದರಿಂದ ಸಂಗ್ರಹವಾಗುವ ಹಣವನ್ನು ಬಾಕಿ ತೀರುವಳಿಗೆ ಜಮೆ ಮಾಡಿಕೊಳ್ಳುವ ನಿಯಮವನ್ನು ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.
Vijaya Karnataka Web bbmp trying to bid the assets of people who do not pay tax
ತೆರಿಗೆ ಪಾವತಿಸದವರ ಆಸ್ತಿ ಮಾರಾಟಕ್ಕೆ ಬಿಬಿಎಂಪಿ ಚಿತ್ತ..! ಪಾಲಿಕೆ ಆಯುಕ್ತರಿಂದ ಆಡಳಿತಾಧಿಕಾರಿಗೆ ಪ್ರಸ್ತಾವನೆ


ನಗರದಲ್ಲಿಹಲವು ವರ್ಷಗಳಿಂದ ದೊಡ್ಡ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಕೋಟ್ಯಂತರ ರೂ. ತೆರಿಗೆ ಹಣ ಬೊಕ್ಕಸಕ್ಕೆ ಬರುವುದು ಕೈತಪ್ಪಿದೆ. ನೋಟಿಸ್‌ ನೀಡಿದರೂ, ಕ್ಯಾರೇ ಎನ್ನದ ಹೆಚ್ಚಿನ ಸ್ವತ್ತುದಾರರಿದ್ದಾರೆ. ಇದುವರೆಗೆ ಮುಟ್ಟುಗೋಲು ಹಾಕಿಕೊಂಡು ಸುಮ್ಮನಿರಬೇಕಾದ ಸ್ಥಿತಿಗೆ ಪಾಲಿಕೆ ತಲುಪಿತ್ತು. ಈಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಟ್ಟುಗೋಲು ಹಾಕಿಕೊಂಡ ಆಸ್ತಿಯನ್ನು ಸಾರ್ವಜನಿಕವಾಗಿ ಹರಾಜು ಮಾಡಿ ಅದರಿಂದ ಬಂದ ಹಣವನ್ನು ತೆರಿಗೆ ಬಾಕಿಗೆ ಜಮೆ ಮಾಡಿಕೊಳ್ಳುವುದು ಬಿಬಿಎಂಪಿಯ ಉದ್ದೇಶವಾಗಿದೆ.

ಪಾಲಿಕೆಯ ಈ ಕ್ರಮ ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ದಂಡ ಪ್ರಯೋಗದ ಅಂತಿಮ ಅಸ್ತ್ರವಾಗಲಿದೆ. ಬ್ಯಾಂಕ್‌ ಸಾಲ ತೀರಿಸದ ಸುಸ್ತಿದಾರರ ಸ್ವತ್ತನ್ನು ಹರಾಜು ಹಾಕುವ ಮಾದರಿಯಲ್ಲೇ ಪಾಲಿಕೆ ಕೂಡ ತೆರಿಗೆ ಬಾಕಿ ಉಳಿಸಿಕೊಂಡವರ ಆಸ್ತಿಯನ್ನು ಮಾರಾಟ ಮಾಡಲಿದೆ. ಭೂ ಕಂದಾಯ ಕಾಯಿದೆ 1964ರ ಕಲಂ 164-170ರ ವರೆಗಿನ ಚರ ಸ್ವತ್ತಿನ ಜಪ್ತಿ/ಮಾರಾಟ, ಸ್ಥಿರ ಸ್ವತ್ತಿನ ಜಪ್ತಿ ಹಾಗೂ ಮಾರಾಟ ಮಾಡಿ ಬಾಕಿ ವಸೂಲಾತಿಗೆ ಕ್ರಮ ವಹಿಸಬಹುದಾಗಿದೆ. ಇದೇ ನಿಯಮವನ್ನು ಬಿಬಿಎಂಪಿಯಲ್ಲೂ ಅಳವಡಿಸಿಕೊಳ್ಳಲು ಕಡತ ಸಿದ್ಧಗೊಳ್ಳುತ್ತಿದೆ.

ನಗರದ 10 ಪ್ರಮುಖ ರಸ್ತೆಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌: ಪಾಲಿಕೆಗೆ ವಾರ್ಷಿಕ 31.56 ಕೋಟಿ ರೂ. ಆದಾಯ ನಿರೀಕ್ಷೆ!

ಆಸ್ತಿ ತೆರಿಗೆದಾರರ ವಿರುದ್ಧ ಇಂತಹ ಅತಿ ದಂಡನೀಯ ಕ್ರಮವನ್ನು ಕೈಗೊಳ್ಳಲು ಪಾಲಿಕೆಯ ಕೌನ್ಸಿಲ್‌ ಸಭೆಯ ಒಪ್ಪಿಗೆ ಬೇಕಿದೆ. ಸದ್ಯ ಪಾಲಿಕೆ ಅವಧಿ ಮುಗಿದಿರುವುದರಿಂದ ತೆರಿಗೆ-ಆರ್ಥಿಕ ಸ್ಥಾಯಿ ಸಮಿತಿ ಹಾಗೂ ನಗರ ಯೋಜನೆ-ಅಭಿವೃದ್ಧಿ ಸ್ಥಾಯಿ ಸಮಿತಿಗಳ ಅಧಿಕಾರ ಚಲಾಯಿಸಿ ಕೆಎಂಸಿ ಕಾಯಿದೆಗೆ ತಿದ್ದುಪಡಿ ತರುವ ಟಿಪ್ಪಣಿಯನ್ನು ಆಯುಕ್ತರ ಕಚೇರಿಯಿಂದ ಆಡಳಿತಾಧಿಕಾರಿಗೆ ತಲುಪಿಸಲಾಗಿದೆ.

ಬೆಂಗಳೂರು: ಕೊರೊನಾ ಸಂಕಷ್ಟ, ಬಿಬಿಎಂಪಿಗೆ ಆಸ್ತಿ ತೆರಿಗೆ ನಷ್ಟ

ಸದ್ಯ ಬಾಕಿ ಉಳಿಸಿಕೊಂಡವರ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲಷ್ಟೇ ನಿಯಮ ಜಾರಿಯಲ್ಲಿದೆ. ಇದರಿಂದ ವಶಕ್ಕೆ ಪಡೆದ ಸ್ವತ್ತನ್ನು ಹಾಗೆಯೇ ಬಿಡಬೇಕಾದ ಸ್ಥಿತಿ ಇದೆ. ಇದರ ಬದಲು ಮಾರಾಟ ಮಾಡಿದಲ್ಲಿಬಾಕಿ ಹಣ ಬರಲಿದೆ ಎಂಬುದು ಪಾಲಿಕೆ ಅಧಿಕಾರಿಗಳ ವಾದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ