ಆ್ಯಪ್ನಗರ

Bangalore Development Authority :ಬೆಂಗಳೂರಿನಲ್ಲಿ 1 ಸಾವಿರ ಕೋಟಿ ಮೌಲ್ಯದ ಬಿಡಿಎ ಜಮೀನು ಪ್ರಭಾವಿಗಳಿಂದ ಕಬಳಿಕೆ: ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಆರೋಪ

Bangalore Development Authority: ಬೆಂಗಳೂರಿನಲ್ಲಿ ಭೂ ಕಬಳಿಕೆ, ಅತಿಕ್ರಮಣ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಪ್ರಭಾವಿಗಳೇ ಸರ್ಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಭೂಕಬಳಿಕೆ ಮಾಡುತ್ತಿದ್ದಾರೆ. ಸದ್ಯ ಬಿಡಿಎ ಸಂಬಂಧಿಸಿದ ಒಂದು ಸಾವಿರ ಕೋಟಿ ಮೊತ್ತದ ಜಮೀನು ಕಬಳಿಕೆಯಾಗಿದೆ ಎಂದು ನಿರ್ಮಾಪಕ ಉಮಾಪತಿ ಆರೋಪಿಸಿದ್ದಾರೆ.

ಹೈಲೈಟ್ಸ್‌:

  • ಬೆಂಗಳೂರಿನಲ್ಲಿ ಬರೋಬ್ಬರಿ 1 ಸಾವಿರ ಕೋಟಿ ಮೌಲ್ಯದ ಬಿಡಿಎ ಜಮೀನನ್ನು ಕಾನೂನು ಬಾಹಿರವಾಗಿ ಕಬಳಿಕೆ.
  • ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿಯ ದೇವರ ಚಿಕ್ಕನಹಳ್ಳಿ ಗ್ರಾಮಕ್ಕೆ ಸೇರಿದ ಒಟ್ಟು 25 ಎಕರೆಗೂ ಹೆಚ್ಚು ಸುಮಾರು 1 ಸಾವಿರ ಕೋಟಿಗಳಿಗೂ ಹೆಚ್ಚಿನ ಬೆಲೆ ಬಾಳುವ ಜಾಗ.
  • ಹಗರಣದಲ್ಲಿ ಸ್ಥಳೀಯ ಶಾಸಕರ ತಂದೆ ಮುನಿರೆಡ್ಡಿ ಸೇರಿದಂತೆ ಪ್ರಭಾವ ಶಾಲಿಗಳೇ ಇದ್ದಾರೆ ಎಂದು ನಿರ್ಮಾಪಕ ಉಮಾಪತಿ ಆರೋಪ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಭೂ ಕಬಳಿಕೆ ಜಾಗದ ಕುರಿತು ನಿರ್ಮಾಪ ಸುದ್ದಿಗೋಷ್ಠಿ ನಡೆಸಿದರು.
ಭೂ ಕಬಳಿಕೆ ಜಾಗದ ಕುರಿತು ನಿರ್ಮಾಪ ಸುದ್ದಿಗೋಷ್ಠಿ ನಡೆಸಿದರು.
ಬೆಂಗಳೂರು: ಬೆಂಗಳೂರಿನಲ್ಲಿ ಬರೋಬ್ಬರಿ 1 ಸಾವಿರ ಕೋಟಿ ಮೌಲ್ಯದ ಬಿಡಿಎ ಜಮೀನನ್ನು ಕಾನೂನು ಬಾಹಿರವಾಗಿ ಕಬಳಿಕೆ ಮಾಡಲಾಗಿದ್ದು, ಇದರಲ್ಲಿ ಸ್ಥಳೀಯ ಶಾಸಕರೊಬ್ಬರ ಕೈವಾಡ ಇದೆ ಎಂದು ಸಿನಿಮಾ ನಿರ್ಮಾಪಕ ಹಾಗೂ ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಉಮಾಪತಿ ಶ್ರೀನಿವಾಸಗೌಡ ಆರೋಪಿಸಿದ್ದಾರೆ.
ಗುರುವಾರ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬಿಡಿಎ ವಿರುದ್ಧದ 1000 ಕೋಟಿ ರೂ. ಭೂ ಹಗರಣದ ಬಗ್ಗೆ ಉಮಾಪತಿ ಶ್ರೀನಿವಾಸಗೌಡ ದಾಖಲೆ ಬಿಡುಗಡೆ ಗೊಳಿಸಿದರು. ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿಯ ದೇವರ ಚಿಕ್ಕನಹಳ್ಳಿ ಗ್ರಾಮಕ್ಕೆ ಸೇರಿದ ಒಟ್ಟು 25 ಎಕರೆಗೂ ಹೆಚ್ಚು ಸುಮಾರು 1 ಸಾವಿರ ಕೋಟಿಗಳಿಗೂ ಹೆಚ್ಚಿನ ಬೆಲೆ ಬಾಳುವ ಜಾಗವನ್ನು ಬಿಡಿಎ ಅಧಿಕಾರಿಗಳ ಸಹಾಯದೊಂದಿಗೆ ಪ್ರಭಾವಿ ಬಂಡವಾಳಶಾಹಿಗಳು ಭೂಕಬಳಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಟಿಎಂ ಅಧಿಸೂಚಿತ ಬಡಾವಣೆ ಸೇರಿ 1986-87ರಲ್ಲಿ ಪ್ರಾಥಮಿಕ ಅಧಿಸೂಚನೆ ಆಗಿ 1998ರ ಅಂತಿಮ ಅಧಿಸೂಚನೆಯಾಗಿ ಬಡಾವಣೆ ನಿರ್ಮಾಣಗೊಂಡಿದೆ. ಈ ಬಡಾವಣೆಗೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಾಧಿಕಾರ ತನ್ನ ಅಂತಿಮ ಅಧಿಸೂಚನೆ ಹೊರಡಿಸಿ ಭೂಪರಿಹಾರವನ್ನು ನೀಡಿ ಬಡಾವಣೆ ನಿರ್ಮಿಸಿತ್ತು. ರಸ್ತೆ ಯುಜಿಡಿ, ವಿದ್ಯುತ್‌ ಸಂಪರ್ಕ ಸೇರಿದಂತೆ ಸುಮಾರು 30 ವರ್ಷಗಳ ಹಿಂದೆಯೇ 16 ಕೋಟಿಗಳ ಹಣವನ್ನು ಬಡಾವಣೆಗಾಗಿ ಖರ್ಚು ಮಾಡಲಾಗಿತ್ತು ಎಂದು ವಿವರಿಸಿದರು.

Lake Encroachment: ಮಲ್ಲತ್ತಹಳ್ಳಿ ಕೆರೆ ಒತ್ತುವರಿ ಮಾಡಿಲ್ಲ: ಹೈಕೋರ್ಟ್‌ಗೆ ಬಿಬಿಎಂಪಿ ಪ್ರಮಾಣಪತ್ರ ಸಲ್ಲಿಕೆ

ಬಿಡಿಎ ವಿರುದ್ಧ ಕೋರ್ಟ್‌ ಮೆಟ್ಟಿಲು

ಕೆಲವರು ಬಿಡಿಎ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದರು. ಹೈಕೋರ್ಟ್ ವಿಭಾಗೀಯ ಪೀಠದಲ್ಲಿಯೂ ಸಹ ಎನ್. ಕುಮಾರ್ ಆದೇಶವನ್ನೇ ಎತ್ತಿಹಿಡಿದು ತೀರ್ಪು ಬಿಡಿಎ ಪರವಾಗಿ ಆದೇಶ ನೀಡಿತ್ತು. 2012ರಲ್ಲಿ ಈ ಆದೇಶಗಳ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದ ಭೂ ಮಾಲೀಕರಿಗೆ ಮತ್ತೆ ತಣ್ಣೀರು ಎರೆಚಲಾಗಿದೆ. ಸುಪ್ರೀಂಕೋರ್ಟ್ ಸಹ ಹೈಕೋರ್ಟ್ ವಿಭಾಗೀಯ ಪೀಠದ ಆದೇಶದ ಮನವಿಯನ್ನು ಪುರಸ್ಕರಿಸಿ ಈಗಾಗಲೇ 30 ವರ್ಷಗಳಲ್ಲಿ ಬಡಾವಣೆ ನಿರ್ಮಾಣ, ನಿವೇಶನ ಹಂಚಿಕೆಗಳಂತಹ ಪ್ರಕ್ರಿಯೆಗಳಿಗೆ ತಡೆ ನೀಡಲಾಗುವುದಿಲ್ಲ. ನಿಮ್ಮ ಮನವಿಯನ್ನು ತಿರಸ್ಕರಿಸಲಾಗಿದೆ ಎಂಬ ಖಡಕ್ ಹಿಂಬರಹವನ್ನು ನೀಡಿ ಬಿಡಿಎ ಬೆನ್ನಿಗೆ ನಿಲ್ಲುತ್ತದೆ.

Jayanagar Complex: ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಅಕ್ರಮದ ವಾಸನೆ: 312 ಮಳಿಗೆ ಅಕ್ರಮ ಹಂಚಿಕೆ ಆರೋಪ

ಹೊಸ ಆದೇಶ ತಂದು ಕಬ್ಜ

ಮತ್ತೊಂದೆಡೆ, ಸುಪ್ರೀಂಕೋರ್ಟ್ ಪ್ರಾಧಿಕಾರದ ಬೆನ್ನಿಗೆ ಶ್ರೀರಕ್ಷೆಯಾಗಿನಿಂತರೂ ಸಹ 2016ರ ನಂತರ ಹೊಸ ಮ್ಯಾಜಿಕ್ ನಡೆದು ಹೋಗುತ್ತದೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಆದೇಶಗಳನ್ನೆಲ್ಲಾ ಮುಚ್ಚಿಟ್ಟು ತಮ್ಮ ಪ್ರಭಾವ ಪ್ರಾಧಿಕಾರದ ಭ್ರಷ್ಟರು, ಕಾನೂನು ವಿಭಾಗದ ನ್ಯೂನತೆಗಳನ್ನು ಬಳಸಿಕೊಂಡು ಅಧಿಸೂಚನೆಯೇ ಅಲ್ಲದೆ ಬೇರೆ ಸರ್ವ ನಂಬರ್ ಅನ್ನು ಕೋರ್ಟ್ ಮುಂದೆ ತಂದು ಹೊಸ ಆದೇಶದ ಮೂಲಕ ಪ್ರಾಧಿಕಾರದ ಜಾಗವನ್ನು ಕಬ್ಜಾ ಮಾಡಿರುತ್ತಾರೆ ಎಂದು ಆರೋಪಿಸಿದರು.


ಕಾನೂನಿನ ಕಣ್ಣಿಗೆ ಬಟ್ಟೆಕಟ್ಟಿ ಕತ್ತಲೆಯಲ್ಲೇ ಬಿಟ್ಟಿದ್ದಾರೆ

ಅಷ್ಟೇ ಅಲ್ಲದೆ, ಅಧಿಕಾರಿಗಳನ್ನು ಒಳಹೋಗಲು ಬಿಡದೆ ಸುತ್ತಲೂ ಕಾಂಪೌಂಡ್ ನಿರ್ಮಿಸಿ ರೆವಿನ್ಯೂ ಬಡಾವಣೆ ನಿರ್ಮಿಸಿ ಅಡಿಗೆ 12 ಸಾವಿರದಂತೆ ಮಾರಾಟ ಮಾಡುತ್ತಿದ್ದಾರೆ. ಹಾಗೂ ಗಗನಚುಂಬಿ ಜಂಟಿ ಸಹಯೋಗದ ಅಪಾರ್ಟ್ಮೆಂಟ್‌ಗಳು ತಲೆ ಎತ್ತಲಿವೆ. ಪ್ರಭಾವೀ ಬಂಡವಾಳಶಾಹಿಗಳು ಹಾಗೂ ರಾಜಕೀಯ ಪ್ರಭಾವದಿಂದ ಕಾನೂನಿನ ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲೆಯಲ್ಲೇ ಬಿಟ್ಟಿದ್ದಾರೆ. ಹಗರಣದಲ್ಲಿ ಸ್ಥಳೀಯ ಶಾಸಕರ ತಂದೆ ಮುನಿರೆಡ್ಡಿ ಸೇರಿದಂತೆ ಪ್ರಭಾವ ಶಾಲಿಗಳೇ ಇದ್ದಾರೆ ಎಂದು ಆರೋಪಿಸಿದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ