ಆ್ಯಪ್ನಗರ

ಬೆಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ವಂಚಕರು, ಕಳ್ಳರು ಅರೆಸ್ಟ್! 10 ಪ್ರಕರಣ ಸ್ವಾಲ್ವ್‌!

ಮಂಜುನಾಥ್‌ ಎನ್ನುವ ಬ್ರೋಕರ್‌ ಮೂಲಕ ಸ್ಟೀಫನ್‌ ಜೋನ್ಸ್‌ ವಿವಿಧ ಬ್ಯಾಂಕುಗಳಿಂದ ಲೋನ್‌ ಕೂಡ ಇಂಜಿನಿಯರ್‌ ಸಂತ್ರಸ್ತರಿಗೆ ಕೊಡಿಸಿ ಆ ಹಣವನ್ನು ತನ್ನ ಅಕೌಂಟ್‌ಗೆ ಹಾಕಿಸಿಕೊಂಡು ಮೂರು ನಾಮ ಹಾಕಿದ್ದಾನೆ. ಇದು ಮೋಸದ ಆಟ ಎಂದು ಅರಿತ ಇಂಜಿನಿಯರ್‌ ಸತೀಶ್‌ ಎಂಬಾತ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೂರು ಐಶಾರಾಮಿ ಕಾರುಗಳು, ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ಎಂಟು ಕೋಟಿ ಬೆಲೆಬಾಳುವ ಮನೆಯ ದಾಖಲಾತಿ ಪತ್ರಗಳು ವಶಕ್ಕೆ ಪಡೆದಿದ್ದಾರೆ.

Vijaya Karnataka Web 22 Jan 2021, 2:23 pm
ಬೆಂಗಳೂರು: ದಿಲ್ಲಿ, ಉತ್ತರ ಪ್ರದೇಶದಿಂದ ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಬಂದು ಮನೆಗಳಿಗೆ ಕನ್ನ ಹಾಕುತ್ತಿದ್ದ ಅಂತರಾಜ್ಯ ಖದೀಮರ ಗ್ಯಾಂಗ್‌ನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಫಯೂಮ್‌, ಮುರಸಲೀಂ ಮೊಹಮ್ಮದ್‌ ಬಂಧಿತರು. ಇವರು ಬೇರೆ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ಮನೆಗಳನ್ನು ಟಾರ್ಗೆಟ್‌ ಮಾಡಿ ಕನ್ನ ಹಾಕುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಇನ್ನು ಬಂಧಿತರಿಂದ 75 ಲಕ್ಷ ಬೆಲೆಬಾಳುವ 1 ಕೆಜಿ 500 ಗ್ರಾಂ ಚಿನ್ನದ ಒಡವೆ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಬೆಂಗಳೂರಿನ ವಿವಿಧ 10 ಕಳ್ಳತನ ಪ್ರಕರಣ ಇವರ ಮೂಲಕ ಬೆಳಕಿಗೆ ಬಂದಿದೆ.
Vijaya Karnataka Web EsUcVXwUUAAl6xi


ಸಿಸಿಬಿ ಬಲೆಗೆ ಬಿದ್ದ ಮೋಸಗಾರರು!
ಹೆಚ್ಚಿನ ಲಾಭಾಂಶ ತೋರಿಸಿ ಪ್ರತಿಷ್ಠಿತ ಸಾಫ್ಟ್‌ವೇರ್‌ ಕಂಪನಿಗಳ ಇಂಜಿನಿಯರ್‌ಗಳಿಗೆ ವಂಚಿಸಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸ್ಟೀಫನ್‌ ಜೋನ್ಸ್‌ ಮತ್ತು ಆತನ ಸಹಚರ ರಾಘವೇಂದ್ರ ಬಂಧಿತರು. ಇವರಿಬ್ಬರು ಪ್ರತಿಷ್ಠಿತ ಐಟಿ ಕಂಪನಿಯ ಇಂಜಿನಿಯರ್‌ಗಳಿಗೆ ಶೇರ್‌ ಟ್ರೆಡಿಂಗ್‌ ವ್ಯವಹಾರದಲ್ಲಿ ತೊಡಗಿಸಿ ಹೆಚ್ಚಿನ ಲಾಭಾಂಶವನ್ನು ಕೊಡಿಸುವ ಭರವಸೆ ನೀಡಿ, ಆರೋಪಿಗಳಿಗೆ ಅಕೌಂಟಿಗೆ ಲಕ್ಷಗಟ್ಟಲೇ ಹಣ ಹಾಕಿಸಿಕೊಂಡಿದ್ದಾರೆ.

ಇನ್ನು ಮಂಜುನಾಥ್‌ ಎನ್ನುವ ಬ್ರೋಕರ್‌ ಮೂಲಕ ಸ್ಟೀಫನ್‌ ಜೋನ್ಸ್‌ ವಿವಿಧ ಬ್ಯಾಂಕುಗಳಿಂದ ಲೋನ್‌ ಕೂಡ ಇಂಜಿನಿಯರ್‌ ಸಂತ್ರಸ್ತರಿಗೆ ಕೊಡಿಸಿ ಆ ಹಣವನ್ನು ತನ್ನ ಅಕೌಂಟ್‌ಗೆ ಹಾಕಿಸಿಕೊಂಡು ಮೂರು ನಾಮ ಹಾಕಿದ್ದಾನೆ. ಇದು ಮೋಸದ ಆಟ ಎಂದು ಅರಿತ ಇಂಜಿನಿಯರ್‌ ಸತೀಶ್‌ ಎಂಬಾತ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೂರು ಐಶಾರಾಮಿ ಕಾರುಗಳು, ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ಎಂಟು ಕೋಟಿ ಬೆಲೆಬಾಳುವ ಮನೆಯ ದಾಖಲಾತಿ ಪತ್ರಗಳು ವಶಕ್ಕೆ ಪಡೆದಿದ್ದಾರೆ.

ಬಿಬಿಎಂಪಿ ಎಂಜಿನಿಯರ್ ಆಂಜಿನಪ್ಪ ಮನೆಗಳ ಮೇಲೆ ಎಸಿಬಿ ದಾಳಿ, ಕಂತೆ ಕಂತೆ ಹಣ-ವಾಹನಗಳು ಪತ್ತೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ