ಆ್ಯಪ್ನಗರ

ಒಂದೇ ದಿನ ಸಂಗ್ರಹವಾಯ್ತು 7.5 ಟನ್ ಪ್ಲಾಸ್ಟಿಕ್‌ ತ್ಯಾಜ್ಯ : ಬೀದಿಬೀದಿ ಓಡಿ ಜಾಗೃತಿ ಮೂಡಿಸಿದ ಬೆಂಗಳೂರಿಗರು

ಗಾಂಧಿ ಜಯಂತಿಯಂದು ಬೆಂಗಳೂರಿಗರು ಬೀದಿಬೀದಿಯಲ್ಲಿ ಓಡಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸುವ ಮೂಲಕ ಪ್ಲಾಸ್ಟಿಕ್‌ ಬಳಕೆ ವಿರುದ್ಧ ಜಾಗೃತಿ ಮೂಡಿಸಿದ್ದಾರೆ. ಗಾಂಧಿ ಅವರ ನಿರ್ಮಲ ಭಾರತದ ಕನಸನ್ನು ಜನರಿಗೆ ಅರ್ಥಮಾಡಿಸಿದ್ದಾರೆ. ಒಂದೇ ದಿನದಲ್ಲಿ ಬೆಂಗಳೂರಿನ ನಾಗರಿಕರೇ 7.5 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿ ಬಿಬಿಎಂಪಿಗೆ ನೀಡಿದ್ದಾರೆ.

TIMESOFINDIA.COM 3 Oct 2019, 12:39 pm
ಬೆಂಗಳೂರು: ಬೆಂಗಳೂರಿನ ಸಾವಿರಾರು ನಿವಾಸಿಗಳು ಬುಧವಾರ ಬೆಳಗಿನಿಂದಲೇ ರಸ್ತೆಗಳಲ್ಲಿ ಓಡುತ್ತ ತ್ಯಾಜ್ಯ ಪ್ಲಾಸ್ಟಿಕ್‌ ಆಯುವುದನ್ನು ನೋಡಿ ಆಶ್ಚರ್ಯವಾಗಿರಬಹುದು. ಹೌದು, ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನದಂದು ಬೆಂಗಳೂರಿನ 43 ಏರಿಯಾಗಳಲ್ಲಿ "ಇಂಡಿಯಾ ಪ್ಲಾಗ್‌ ರನ್‌" ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೇ ಓಡುತ್ತ ಹಾದಿಬೀದಿಯಲ್ಲಿದ್ದ ತ್ಯಾಜ್ಯ ಪ್ಲಾಸ್ಟಿಕ್‌ ಸಂಗ್ರಹಿಸುತ್ತಿದ್ದವರು.
Vijaya Karnataka Web banglore plastic waste collect


ಪ್ಲಾಸ್ಟಿಕ್‌ ನೀಡಿ, ಉಚಿತ ತಿಂಡಿ ಊಟ ಪಡೆದ ಜನತೆ!

ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಕ್ಟೋಬರ್ 2ರಂದು ನಗರದಲ್ಲಿ ಆಯೋಜಿಸಿದ್ದ ಪ್ಲಾಸ್ಟಿಕ್ ಸಂಗ್ರಹಣಾ ಅಭಿಯಾನನೇ ಈ "ಇಂಡಿಯಾ ಪ್ಲಾಗ್‌ ರನ್‌' ಕಾರ್ಯಕ್ರಮ. ಒಂದು ವಾರ ಮುಂಚಿತವಾಗಿಯೇ ಈ ಕಾರ್ಯಕ್ರಮದಲ್ಲಿಸಾರ್ವಜನಿಕರು ಪಾಲ್ಗೊಳ್ಳುವಂತೆ ಬಿಬಿಎಂಪಿ ಆಹ್ವಾನ ನೀಡಿತ್ತು. ಸಿಂಗಲ್‌ ಯೂಸ್‌ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸಲು ಬಿಬಿಎಂಪಿ ಈ ಅಭಿಯಾನ ಕೈಗೊಂಡಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಅಭಿಯಾನಕ್ಕೆ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಎಂ. ಜಿ. ರಸ್ತೆಯಲ್ಲಿ ಬೆಳಗ್ಗೆ 7.30ಕ್ಕೆ ಚಾಲನೆ ನೀಡಿದ್ದರು. ಸುಮಾರು 600ಕ್ಕೂ ಹೆಚ್ಚು ಜನ ಈ ವಾಕಥಾನದಲ್ಲಿ ಪಾಲ್ಗೊಂಡಿದ್ದರು.

ಇಂದಿನಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನೀರಿನ ಬಾಟಲಿ ವಿತರಣೆ ಬಂದ್

ಹೆಚ್ಚು ಸಂಗ್ರಹಿಸಿದವರು ಯಾರು?
ಪುಟ್ಟೇನಹಳ್ಳಿ ಏರಿಯಾದವರು 1200 ಕೆಜಿ ತ್ಯಾಜ್ಯ ಪ್ಲಾಸ್ಟಿಕ್‌ ಸಂಗ್ರಹಣೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.
ಜಯನಗರ 4ನೇ ಬ್ಲಾಕ್‌ ನಲ್ಲಿ 900 ಕೆಜಿ, ಆರ್‌ಟಿ ನಗರದಲ್ಲಿ 800 ಕೆಜಿ ತ್ಯಾಜ್ಯ ಪ್ಲಾಸ್ಟಿಕ್ ಸಂಗ್ರಹಣೆಗೊಂಡಿದೆ. ಎಂಜಿ ರಸ್ತೆ, ಕೆಆರ್‌ ಪುರಂ, ಇಬ್ಲೂರು, ಕೆಂಗೇರಿ ಏರಿಯಾಗಳಲ್ಲೂ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.

ಗಾಂಧಿ ಜಯಂತಿ, 43 ಟನ್‌ ಕಸ ಸಂಗ್ರಹ

ಜನರು ಮೂರು ಕಿಲೋಮೀಟರ್ ಓಡುವಾಗ ಅಕ್ಕಪಕ್ಕದಲ್ಲಿ ಕಾಣುವ ಪ್ಲಾಸ್ಟಿಕ್ ಸಂಗ್ರಹಿಸಿ ಕೈ ಚೀಲದಲ್ಲಿ ಹಾಕಲಿದ್ದಾರೆ. ಓಡುವ ಎಲ್ಲರಿಗೂ ಪಾಲಿಕೆ ಕೈ ಚೀಲ ವಿತರಣೆ ಮಾಡಲಿದೆ. ಅಂದು ನಗರದಲ್ಲಿ ಲಕ್ಷಾಂತರ ಟನ್ ಪ್ಲಾಸ್ಟಿಕ್ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ