ಆ್ಯಪ್ನಗರ

ಬೆಂಗಳೂರು: ನಟೋರಿಯಸ್ ರೌಡಿ ಶೀಟರ್ ಕಾಲಿಗೆ ಪೊಲೀಸರಿಂದ ಗುಂಡೇಟು

ರೌಡಿ ಶೀಟರ್​ ಸಿದ್ದ ಅಲಿಯಾಸ್​ ಸಿದ್ದರಾಜು ಅಲಿಯಾಸ್​ ಬಗಲಗುಂಟೆ ಸಿದ್ದನ ಮೇಲೆ ಪೊಲೀಸರು ಫೈರಿಂಗ್ ಅನ್ನು ನಡೆಸಿದ್ದಾರೆ. ಸುಮಾರು 15 ಕೇಸ್​​ಗಳಲ್ಲಿ ಸಿದ್ದ ಪೊಲೀಸರಿಗೆ ಬೇಕಾಗಿದ್ದ. ಸಿದ್ದ ಸ್ಲಂ ಭರತ್​​ನ ಸಹಚರನಾಗಿದ್ದ. ಈತ ಕಾಮಾಕ್ಷಿಪಾಳ್ಯ, ರಾಜಗೋಪಾಲನಗರದಲ್ಲಿ ಹಲವು ಕೃತ್ಯಗಳನ್ನು ಎಸಗಿದ್ದ.​​

Vijaya Karnataka Web 11 Mar 2020, 12:16 pm
ಬೆಂಗಳೂರು: ಇಂದು ನಗರದಲ್ಲಿ ನಟೋರಿಯಸ್ ರೌಡಿ ಶೀಟರ್ ಸಿದ್ದ ಅಲಿಯಾಸ್ ಸಿದ್ದರಾಜು ಅಲಿಯಾಸ್ ಬಗಲಗುಂಟೆ ಸಿದ್ದನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
Vijaya Karnataka Web rowdy sheeter sidda


ಇಂದು ಮುಂಜಾನೆ ಬ್ಯಾಡರಹಳ್ಳಿಯ ಆಶ್ರಯ ಬಡಾವಣೆಯಲ್ಲಿ ಸಿದ್ದ ಇರುವ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಆತನಿಗಾಗಿ ಬಲೆ ಬೀಸಿದ್ದರು. ಈ ವೇಳೆ ಪೊಲೀಸ್ ಪೇದೆ ಬ್ಯಾಡರಳ್ಳಿ ಹನುಮಂತರಾಜು ಮೇಲೆ ಹಲ್ಲೆ ನಡೆಸಿದ್ದ. ಆತ್ಮ ರಕ್ಷಣೆಗಾಗಿ ಬ್ಯಾಡರಹಳ್ಳಿ ಇನ್ಸ್ಪೆಕ್ಟರ್ ರಾಜೀವ್, ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಸುಮಾರು 15 ಕೇಸ್ಗಳಲ್ಲಿ ಸಿದ್ದ ಪೊಲೀಸರಿಗೆ ಬೇಕಾಗಿದ್ದ.

ಕಾರ್ಯಾಚರಣೆ ವೇಳೆ ಪೇದೆಗೆ ಗಾಯಗಳಾಗಿವೆ. ಸದ್ಯ ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದ ಚೇತರಿಸಿಕೊಂಡ ನಂತರದಲ್ಲಿ ಪೊಲೀಸರು ಈತನನ್ನು ಠಾಣೆಗೆ ಕರೆದೊಯ್ಯಲಿದ್ದಾರೆ.



ಬೆಂಗಳೂರನ್ನೇ ನಡುಗಿಸಬೇಕು ಎಂದುಕೊಂಡಿದ್ದವ ಎನ್‌ಕೌಂಟರ್‌ಗೆ ಬಲಿ..! ಸ್ಲಂ ಭರತನ A TO Z ಡೀಟೇಲ್ಸ್‌

ಸಿದ್ದ ಸ್ಲಂ ಭರತ್ ನ ಸಹಚರನಾಗಿದ್ದ. ಈತ ಕಾಮಾಕ್ಷಿಪಾಳ್ಯ, ರಾಜಗೋಪಾಲನಗರದಲ್ಲಿ ಹಲವು ಕೃತ್ಯಗಳನ್ನು ಎಸಗಿದ್ದ. ಈ ಕುರಿತಾಗಿ ಫೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಲಂ ಭರತ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಪೋಲಿಸ್ ಎನ್ ಕೌಂಟರ್ ಗೆ ಬಲಿಯಾಗಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ