ಮನೆಗೆ ಮರೆಯಾಗಿದೆ ಎಂದು ಮರಕ್ಕೇ ವಿಷ ಉಣಿಸಿದ್ದಾರೆ ಬೆಂಗಳೂರಿನ ಈ ಡಾಕ್ಟರ್!
ಹೊಸದಾಗಿ ಕಟ್ಟಿದ ಮನೆಗೆ ಮರ ಮರೆಯಾಗಿದೆ ಎಂಬ ಒಂದೇ ಕಾರಣಕ್ಕೆ ಮರಕ್ಕೆ ವಿಷ ಉಣಿಸಿ ಕೊಲ್ಲುವ ಪ್ರಯತ್ನ ನಡೆದಿದೆ. ರಾಜರಾಜೇಶ್ವರಿ ನಗರದ ಬಿಇಎಂಎಲ್ ಲೇಔಟ್ನಲ್ಲಿ ಮರ ಸಾಯಲಿ ಎಂದು ಬುಡದ ಸುತ್ತಲೂ ಕೊರೆದು ಪಾದರಸ ಹಾಕಲಾಗಿದೆ.
Vijaya Karnataka Web 6 Nov 2019, 6:37 pm
ಬೆಂಗಳೂರು: ಹೊಸದಾಗಿ ಕಟ್ಟಿದ ಮನೆಗೆ ಮರ ಮರೆಯಾಗಿದೆ ಎಂಬ ಒಂದೇ ಕಾರಣಕ್ಕೆ ಮರಕ್ಕೆ ವಿಷ ಉಣಿಸಿ ಕೊಲ್ಲುವ ಪ್ರಯತ್ನ ನಡೆದಿದೆ. ರಾಜರಾಜೇಶ್ವರಿ ನಗರದ ಬಿಇಎಂಎಲ್ ಲೇಔಟ್ನ ಪಂಚಶೀಲ ಬ್ಲಾಕ್ನ ನಿವಾಸಿಯಾಗಿರುವ ಡಾ. ನರೇಂದ್ರ ನಿಖಿತಾ ಅವರು ಈ ಕೆಲಸ ಮಾಡಿದ್ದಾರೆ.
ತಾವು ಹೊಸದಾಗಿ ಕಟ್ಟಿರುವ ಮನೆ ಅಂಚಿಗೆ ಒಂದು ಮರವಿದೆ. ಇದು ತಮ್ಮ ಮನೆಯನ್ನು ಮರೆಮಾಚಲಿದೆ ಎಂಬ ಒಂದೇ ಕಾರಣಕ್ಕೆ ಮರವನ್ನೇ ಸಾಯಿಸಲು ಮುಂದಾಗಿದ್ದಾರೆ. ಮರದ ಬುಡವನ್ನು ಸುತ್ತಲೂ ಕೊರೆದು ಪಾದರಸ ಹಾಕಿದ್ದಾರೆ.
ಅಶ್ವತ್ಥ ವೃಕ್ಷಕ್ಕೆ ನಿತ್ಯ ನೀರೆರೆದರೆ ಸಿಗುವ ಲಾಭಗಳೇನು ಗೊತ್ತಾ?
ಇದನ್ನು ಕಂಡ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಕಳೆದ ಅ.30ರಂದು ಡಾ. ನರೇಂದ್ರ ಅವರೊಟ್ಟಿಗೆ ವಾಗ್ವಾದಕ್ಕಿಳಿದಿದ್ದರು. ಈ ಸಂದರ್ಭದಲ್ಲಿ ಸುಮಾರು 15 ವರ್ಷದ ಮರವನ್ನು ತೆರವುಗೊಳಿಸುವಂತೆ ಬಿಬಿಎಂಪಿಗೆ ಕೋರಿದ್ದೆ. ಆದರೆ ಬಿಬಿಎಂಪಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ನರೇಂದ್ರ ಅವರು ತಿಳಿಸಿದ್ದರು. ನಂತರದಲ್ಲಿ ನರೇಂದ್ರ ಅವರೇ ಮರವನ್ನು ಸಾಯಿಸಲು ಈ ಕ್ರಮಕ್ಕೆ ಇಳಿದ್ದಾರೆ ಎಂದು ಅಲ್ಲಿನ ನಿವಾಸಿಗಳ ಸಂಘ ಆರೋಪಿಸಿದೆ.
ಮನೋ ಕಾಮನೆಗಳ ಈಡೇರಿಕೆಗೆ ಆಲದ ಮರದ ಪೂಜೆಯೊಂದೇ ಉತ್ತಮ ಮಾರ್ಗ...
ನರೇಂದ್ರ ಅವರು ಕಟ್ಟಿಸಿರುವ ಮನೆಯನ್ನು ಈ ಮರ ಮರೆ ಮರೆಮಾಚುತ್ತಿತ್ತು. ಈ ಮರವಿದ್ದರೆ ಮನೆ ಅಂದವಾಗಿ ಕಾಣಿಸುವುದಿಲ್ಲ ಎಂದು ಭಾವಿಸಿರುವ ನರೇಂದ್ರ ಅವರು ವಿಷವಿಕ್ಕಿ ಸಾಯಿಸಲು ನಿರ್ಧರಿಸಿದ್ದಾರೆ. ಅದರ ಬುಡದ ಸುತ್ತಲೂ ಕೊರೆದು ಪಾದರಸವನ್ನು ಹಾಕಿದ್ದಾರೆ ಎಂದು ಪಂಚಶೀಲ ಬ್ಲಾಕ್ ನಿವಾಸಿಗಳ ಸಂಘದ ಜಂಟಿ ಕಾರ್ಯದರ್ಶಿ ರಾಜ್ಕುಮಾರ್ ತಿಳಿಸಿದ್ದಾರೆ.
ತಾವು ಹೊಸದಾಗಿ ಕಟ್ಟಿರುವ ಮನೆ ಅಂಚಿಗೆ ಒಂದು ಮರವಿದೆ. ಇದು ತಮ್ಮ ಮನೆಯನ್ನು ಮರೆಮಾಚಲಿದೆ ಎಂಬ ಒಂದೇ ಕಾರಣಕ್ಕೆ ಮರವನ್ನೇ ಸಾಯಿಸಲು ಮುಂದಾಗಿದ್ದಾರೆ. ಮರದ ಬುಡವನ್ನು ಸುತ್ತಲೂ ಕೊರೆದು ಪಾದರಸ ಹಾಕಿದ್ದಾರೆ.
ಅಶ್ವತ್ಥ ವೃಕ್ಷಕ್ಕೆ ನಿತ್ಯ ನೀರೆರೆದರೆ ಸಿಗುವ ಲಾಭಗಳೇನು ಗೊತ್ತಾ?
ಇದನ್ನು ಕಂಡ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಕಳೆದ ಅ.30ರಂದು ಡಾ. ನರೇಂದ್ರ ಅವರೊಟ್ಟಿಗೆ ವಾಗ್ವಾದಕ್ಕಿಳಿದಿದ್ದರು. ಈ ಸಂದರ್ಭದಲ್ಲಿ ಸುಮಾರು 15 ವರ್ಷದ ಮರವನ್ನು ತೆರವುಗೊಳಿಸುವಂತೆ ಬಿಬಿಎಂಪಿಗೆ ಕೋರಿದ್ದೆ. ಆದರೆ ಬಿಬಿಎಂಪಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ನರೇಂದ್ರ ಅವರು ತಿಳಿಸಿದ್ದರು. ನಂತರದಲ್ಲಿ ನರೇಂದ್ರ ಅವರೇ ಮರವನ್ನು ಸಾಯಿಸಲು ಈ ಕ್ರಮಕ್ಕೆ ಇಳಿದ್ದಾರೆ ಎಂದು ಅಲ್ಲಿನ ನಿವಾಸಿಗಳ ಸಂಘ ಆರೋಪಿಸಿದೆ.
ಮನೋ ಕಾಮನೆಗಳ ಈಡೇರಿಕೆಗೆ ಆಲದ ಮರದ ಪೂಜೆಯೊಂದೇ ಉತ್ತಮ ಮಾರ್ಗ...
ನರೇಂದ್ರ ಅವರು ಕಟ್ಟಿಸಿರುವ ಮನೆಯನ್ನು ಈ ಮರ ಮರೆ ಮರೆಮಾಚುತ್ತಿತ್ತು. ಈ ಮರವಿದ್ದರೆ ಮನೆ ಅಂದವಾಗಿ ಕಾಣಿಸುವುದಿಲ್ಲ ಎಂದು ಭಾವಿಸಿರುವ ನರೇಂದ್ರ ಅವರು ವಿಷವಿಕ್ಕಿ ಸಾಯಿಸಲು ನಿರ್ಧರಿಸಿದ್ದಾರೆ. ಅದರ ಬುಡದ ಸುತ್ತಲೂ ಕೊರೆದು ಪಾದರಸವನ್ನು ಹಾಕಿದ್ದಾರೆ ಎಂದು ಪಂಚಶೀಲ ಬ್ಲಾಕ್ ನಿವಾಸಿಗಳ ಸಂಘದ ಜಂಟಿ ಕಾರ್ಯದರ್ಶಿ ರಾಜ್ಕುಮಾರ್ ತಿಳಿಸಿದ್ದಾರೆ.