ಆ್ಯಪ್ನಗರ

ಉಬರ್‌ಗೆ ನೆರವಾದ ಬೆಂಗಳೂರಿನ ಎಥಿಕಲ್ ಹ್ಯಾಕರ್

ಜಗತ್ತಿನ ಎಲ್ಲೆಡೆ ಸಂಚರಿಸಲು ಉಚಿತ ಉಬರ್ ಕ್ಯಾಬ್ ಸೇವೆ ಲಭ್ಯವಾದರೇ ಹೇಗಿರುತ್ತೆ ಊಹಿಸಿ. ಹೌದು, ಉಬರ್ ಅಪ್ಲಿಕೇಶನ್‌ನಲ್ಲಿ ಇಂತಹ ಅವಕಾಶವಿತ್ತು.

Bangalore Mirror Bureau 6 Mar 2017, 1:01 pm
ಬೆಂಗಳೂರು: ಜಗತ್ತಿನ ಎಲ್ಲೆಡೆ ಸಂಚರಿಸಲು ಉಚಿತ ಉಬರ್ ಕ್ಯಾಬ್ ಸೇವೆ ಲಭ್ಯವಾದರೇ ಹೇಗಿರುತ್ತೆ ಊಹಿಸಿ. ಹೌದು, ಉಬರ್ ಅಪ್ಲಿಕೇಶನ್‌ನಲ್ಲಿ ಇಂತಹ ಅವಕಾಶವಿತ್ತು.
Vijaya Karnataka Web bengaluru ethical hacker helps uber by finding bug in their app
ಉಬರ್‌ಗೆ ನೆರವಾದ ಬೆಂಗಳೂರಿನ ಎಥಿಕಲ್ ಹ್ಯಾಕರ್


ಅಚಾತುರ್ಯವಾಗಿ ಪ್ರತಿಷ್ಠಿತ ಉಬರ್ ಅಪ್ಲಿಕೇಶನ್‌ನಲ್ಲಿ ಉಚಿತ ಸವಾರಿಯ ಆಯ್ಕೆ ಸೇರ್ಪಡೆಯಾಗಿತ್ತು. ಆದರೆ, ಉಬರ್ ಅಪ್ಲಿಕೇಶನ್‌ನಲ್ಲಿ ಸೇರ್ಪಡೆಯಾಗಿದ್ದ ಬಹುದೊಡ್ಡ ದೋಷವನ್ನು ಪತ್ತೆ ಮಾಡುವ ಮೂಲಕ ಬೆಂಗಳೂರು ಮೂಲದ ನೈತಿಕ ಹ್ಯಾಕರ್ ಆನಂದ್ ಪ್ರಕಾಶ್ ನೆರವಾಗಿದ್ದಾರೆ.

ದೋಷ ಪತ್ತೆ ಮಾಡುವ ಮೂಲಕ ಉಬರ್‌ ಕಂಪನಿಗೆ ನೆರವಾಗಿರುವ ಆನಂದ್ ಪ್ರಕಾಶ್‌ ಅವರಿಗೆ ಉಬರ್ ಸಂಸ್ಥೆ $ 5,000 ರೂ. ಬಹುಮಾನ ಘೋಷಿಸಿದೆ.

ಬೆಂಗಳೂರು ಮೂಲದ ನೈತಿಕ ಹ್ಯಾಕರ್ ಆನಂದ್ ಪ್ರಕಾಶ್, ಫೇಸ್‌ಬುಕ್ ಸಂಸ್ಥೆಯ 'ವೈಟ್ ಹ್ಯಾಟ್' ಹ್ಯಾಕರ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಉಬರ್ ಅಪ್ಲಿಕೇಶನ್‌ನಲ್ಲಿ ಉಂಟಾದ ಉಚಿತ ಸೇವೆ ಆಯ್ಕೆಯ ದೋಷವನ್ನು 'ಬ್ಲ್ಯಾಕ್ ಹ್ಯಾಟ್' ಹ್ಯಾಕರ್ಸ್‌ಗಳು ದುರುಪಯೋಗ ಪಡೆಸಿಕೊಳ್ಳುವ ಸಾಧ್ಯತೆ ಇತ್ತು ಎಂದು ಆನಂದ್ ಹೇಳಿದ್ದಾರೆ.

Etical hackers help uber: Sounds too good to be true? Well, it was a possibility but for Bengaluru-based security researcher, Anand Prakash, who found the bug that could have facilitated this and helped the taxi aggregator resolve it.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ