ಆ್ಯಪ್ನಗರ

ರೈಲ್ವೆ ಮಂಡಳಿ ಸದಸ್ಯ ಸ್ಥಾನ ಕೊಡಿಸುವುದಾಗಿ ಹಣ ಪಡೆದು ದೋಖಾ

ಕೇಂದ್ರ ಪರಿಶಿಷ್ಟ ಜಾತಿಗಳ ಆಯೋಗದ ಸದಸ್ಯ ಸ್ಥಾನ ಅಥವಾ ಕೇಂದ್ರ ರೈಲ್ವೆ ಮಂಡಳಿಯಲ್ಲಿ ನಾಮನಿರ್ದೇಶನ ಸದಸ್ಯ ಸ್ಥಾನ ಕೊಡಿಸುವುದಾಗಿ ಉತ್ತರಪ್ರದೇಶದ ವಂಚಕ ಅನೂಪ್‌ ಕುಮಾರ್‌ ಚೌಧರಿ ಬೆಂಗಳೂರಿನ ವ್ಯಕ್ತಿಯೊಬ್ಬರಿಗೂ ವಂಚಿಸಿರುವುದು ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ಸಾಮಾಜಿಕ ಕಾರ್ಯಕರ್ತ ಎಸ್‌. ಮುನಿಯಪ್ಪ ಎಂಬುವವರು ನೀಡಿರುವ ದೂರಿನ ಅನ್ವಯ ಆರೋಪಿ ಅನೂಪ್‌ ಚೌಧರಿ, ಈತನ ತಂಡದಲ್ಲಿರುವ ಸರೀತಾ ಶೆಟ್ಟಿ ಎಂಬುವವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿಎಫ್‌ಐಆರ್‌ ದಾಖಲಾಗಿದೆ.

Edited byಶ್ರೀಲಕ್ಷ್ಮೀ ಎಚ್ಎಲ್ | Vijaya Karnataka 1 Nov 2023, 11:18 pm

ಹೈಲೈಟ್ಸ್‌:

  • ರೈಲ್ವೆ ಮಂಡಳಿ ಸದಸ್ಯ ಸ್ಥಾನ ಕೊಡಿಸುವುದಾಗಿ ಹಣ ಪಡೆದು ಮೋಸ
  • ಉತ್ತರಪ್ರದೇಶದ ವಂಚಕ ಅನೂಪ್‌ ಕುಮಾರ್‌ ಚೌಧರಿಯಿಂದ ಬೆಂಗಳೂರಿಗೆ ವ್ಯಕ್ತಿಗೆ ವಂಚನೆ
  • ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ್‌ ಬಳಿಕ ಕರ್ನಾಟಕದಲ್ಲೂ ಅನೂಪ್‌ ವಂಚನೆ ಜಾಲ ವಿಸ್ತರಿಸಿದೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಅಪರಾಧ ಸುದ್ದಿಗಳು
ಅಪರಾಧ ಸುದ್ದಿಗಳು
ಬೆಂಗಳೂರು: ಕೇಂದ್ರ ಸರಕಾರದ ನಿಗಮ, ಮಂಡಳಿಗಳಲ್ಲಿ ಪ್ರಮುಖ ಹುದ್ದೆ ಕೊಡಿಸುವ ನೆಪದಲ್ಲಿ ಹಲವರಿಗೆ ವಂಚಿಸಿರುವ ಉತ್ತರಪ್ರದೇಶದ ವಂಚಕ ಅನೂಪ್‌ ಕುಮಾರ್‌ ಚೌಧರಿ ಬೆಂಗಳೂರಿನ ವ್ಯಕ್ತಿಯೊಬ್ಬರಿಗೂ ವಂಚಿಸಿರುವುದು ಬೆಳಕಿಗೆ ಬಂದಿದೆ.
ವಂಚನೆಗೆ ಒಳಗಾದ ಸಾಮಾಜಿಕ ಕಾರ್ಯಕರ್ತ ಎಸ್‌. ಮುನಿಯಪ್ಪ ಎಂಬುವವರು ನೀಡಿರುವ ದೂರಿನ ಅನ್ವಯ ಆರೋಪಿ ಅನೂಪ್‌ ಚೌಧರಿ, ಈತನ ತಂಡದಲ್ಲಿರುವ ಸರಿತಾ ಶೆಟ್ಟಿ ಎಂಬುವವರ ವಿರುದ್ಧ ವಿಧಾನಸೌಧ ಠಾಣೆಯಲ್ಲಿಎಫ್‌ಐಆರ್‌ ದಾಖಲಾಗಿದೆ. ಈ ಮೂಲಕ ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ್‌ ಬಳಿಕ ಕರ್ನಾಟಕದಲ್ಲೂ ಅನೂಪ್‌ ವಂಚನೆ ಜಾಲ ವಿಸ್ತರಿಸಿದೆ.

ವಂಚಕನನ್ನು VIP ಎಂದು ಭಾವಿಸಿದ್ದ ಉತ್ತರ ಪ್ರದೇಶ ಪೊಲೀಸರು! 3 ವರ್ಷ ಟೈಟ್ ಸೆಕ್ಯುರಿಟಿ!
‘ಕೇಂದ್ರ ಪರಿಶಿಷ್ಟ ಜಾತಿಗಳ ಆಯೋಗದ ಸದಸ್ಯ ಸ್ಥಾನ ಅಥವಾ ಕೇಂದ್ರ ರೈಲ್ವೆ ಮಂಡಳಿಯಲ್ಲಿ ನಾಮನಿರ್ದೇಶನ ಸದಸ್ಯ ಸ್ಥಾನ ಕೊಡಿಸಲು ಅನೂಪ್‌ ಚೌಧರಿ 50 ಲಕ್ಷ ರೂ.ಗಳಿಗೆ ಬೇಡಿಕೆ ಇರಿಸಿದ್ದರು. ಬಳಿಕ ಇದೇ ವರ್ಷದ ಮಾರ್ಚ್ನಲ್ಲಿಅಡ್ವಾನ್ಸ್‌ ರೂಪದಲ್ಲಿ 31.40 ಲಕ್ಷ ರೂ. ಪಡೆದು ಯಾವುದೇ ಹುದ್ದೆ ಕೊಡಿಸಿರಲಿಲ್ಲ. ಹಣ ವಾಪಸ್‌ ಕೇಳಿದ್ದಕ್ಕೆ ಜೀವ ಬೆದರಿಕೆ ಒಡ್ಡಿದ್ದಾನೆ' ಎಂದು ಮುನಿಯಪ್ಪ ದೂರಿನಲ್ಲಿ ಆರೋಪಿಸಿದ್ದಾರೆ.

ಉತ್ತರ ಪ್ರದೇಶದ ಪ್ರಭಾವಿ ಬಿಜೆಪಿ ಮುಖಂಡ, ರೈಲ್ವೆ ಮಂಡಳಿ ಹಾಲಿ ಸದಸ್ಯನಾಗಿದ್ದು, ಕೇಂದ್ರ ಸಚಿವರ ಜತೆ ಆಪ್ತನಾಗಿದ್ದೇನೆ ಎಂದು ಅನೂಪ್‌ ಚೌಧರಿ ಹೇಳಿಕೊಂಡಿದ್ದ. ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ಭೇಟಿ ಮಾಡಿದ್ದ ಎಂದು ದೂರುದಾರ ಮುನಿಯಪ್ಪ ಹೇಳಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ರೈಲ್ವೆಯಲ್ಲಿ 'ಇಂಡಿಯಾ' ಬದಲು 'ಭಾರತ' ಬಳಕೆ? ಸಚಿವಾಲಯದ ಪ್ರಸ್ತಾವನೆ

ಖಾಸಗಿ ಕಂಪನಿ ಎಂ.ಡಿ. ಸಾಥ್‌:

ಕಳೆದ ವರ್ಷ ಪರಿಚಯವಾಗಿದ್ದ ಪ್ರತಿಷ್ಠಿತ ಖಾಸಗಿ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಸರಿತಾ ಶೆಟ್ಟಿ ತಾನು ಕೇಂದ್ರ ಆಹಾರ ನಿಗಮ ಮಂಡಳಿ ಸದಸ್ಯೆಯಾಗಿದ್ದೇನೆ ಎಂದಿದ್ದರು. ಜತೆಗೆ, ಈ ಹುದ್ದೆಯನ್ನು ಅನೂಪ್‌ ಚೌಧರಿ ಕೊಡಿಸಿದ್ದಾಗಿಯೂ ಹೇಳಿಕೊಂಡಿದ್ದ ಸರಿತಾ, 50 ಲಕ್ಷ ರೂ. ನೀಡಿದರೆ ಅನೂಪ್‌ ಮುಖಾಂತರ ರೈಲ್ವೆ ಮಂಡಳಿ ಸದಸ್ಯ ಸ್ಥಾನ ಕೊಡಿಸುವುದಾಗಿ ಹೇಳಿದ್ದರು.

ಸರೀತಾ ಶೆಟ್ಟಿ ದೆಹಲಿಗೆ ಕರೆದೊಯ್ದು ಅನೂಪ್‌ ಚೌಧರಿಯನ್ನು ಪರಿಚಯ ಮಾಡಿಸಿದ್ದರು. ಇಬ್ಬರೂ ಒಳಸಂಚು ರೂಪಿಸಿ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಮುನಿಯಪ್ಪ ಆರೋಪಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅನೂಪ್‌ ಚೌಧರಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದ ಮಾಹಿತಿ ಮಾಧ್ಯಮಗಳ ಮುಖಾಂತರ ಮೂಲಕ ಗೊತ್ತಾದ ಬಳಿಕ ಮುನಿಯಪ್ಪ ದೂರು ನೀಡಿದ್ದಾರೆ ಎಂದು ಅಧಿಕಾರಿ ಹೇಳಿದರು.

ಉತ್ತರ ಪ್ರದೇಶ ಬಿಜೆಪಿ ಶಾಸಕನ ಪತ್ನಿ ನಾಪತ್ತೆ: ಸಿಸಿಟಿವಿ ಕ್ಯಾಮೆರಾ ಆಧಾರದಲ್ಲಿ ಪತ್ತೆ ಹಚ್ಚಿದ ಪೊಲೀಸರು

ನಾನಾ ವೇಷದ ಅನೂಪ್‌:

ಉತ್ತರ ಪ್ರದೇಶದ ಸ್ಪೆಷಲ್‌ ಟಾಸ್ಕ್‌ ಪೋರ್ಸ್‌ (ಎಸ್‌ಟಿಎಫ್‌) ವಂಚನೆ ಪ್ರಕರಣದಲ್ಲಿಅ.23 ರಂದು ಅಯೋಧ್ಯೆಯಲ್ಲಿಅನೂಪ್‌ ಚೌಧರಿಯನ್ನು ಬಂಧಿಸಿತ್ತು. ಹೆಚ್ಚಿನ ತನಿಖೆ ನಡೆಸಿದಾಗ ಅನೂಪ್‌ ಚೌಧರಿ ದೇಶದ ಹಲವೆಡೆ ಸುಮಾರು 250 ಕೋಟಿ ರೂ.ಗಳಿಗೂ ಹೆಚ್ಚು ವಂಚಿಸಿರುವುದು ಕಂಡು ಬಂದಿತ್ತು.

ಆರೋಪಿ ಅನೂಪ್‌, ಮಹಾರಾಷ್ಟ್ರ ಬಿಜೆಪಿ ಉಸ್ತುವಾರಿ, ಫಿಲಂ ಸೆನ್ಸರ್‌ ಬೋರ್ಡ್‌ನ ಕೇಂದ್ರ ಸಲಹಾ ಸಮಿತಿ ಸದಸ್ಯ, ಉತ್ತರಪ್ರದೇಶ ಫಿಲಂ ಡೆವಲಪ್‌ಮೆಂಟ್‌ ಕೌನ್ಸಿಲ್‌ ಮಾಜಿ ಸದಸ್ಯ, ಕೇಂದ್ರ ರೈಲ್ವೆ ಮಂಡಳಿ ಸದಸ್ಯ ಸೇರಿ ಹಲವು ಹುದ್ದೆಗಳ ಹೆಸರಿಧಿನಲ್ಲಿ ವಂಚಿಸುತ್ತಿದ್ದ. ಜತೆಗೆ, ಈ ಹುದ್ದೆಗಳಲ್ಲಿರುವ ಹಾಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ದೆಹಲಿ, ಉತ್ತರ ಪ್ರದೇಶದಲ್ಲಿ19 ಬಾರಿ ಪೊಲೀಸ್‌ ಪ್ರೋಟೋಕಾಲ್‌ ವ್ಯವಸ್ಥೆ ಪಡೆದಿದ್ದ ವಿಚಾರವನ್ನು ಪೊಲೀಸರು ಪತ್ತೆಹಚ್ಚಿದ್ದರು.
ಲೇಖಕರ ಬಗ್ಗೆ
ಶ್ರೀಲಕ್ಷ್ಮೀ ಎಚ್ಎಲ್
ಶ್ರೀಲಕ್ಷ್ಮೀ ಅವರು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆಯವರು. ಕಳೆದ 5 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ವಿಜಯ ಕರ್ನಾಟಕ ಆನ್‌ಲೈನ್‌ ನಲ್ಲಿ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶೀಯ ಸುದ್ದಿಗಳು, ಲೈಫ್‌ಸ್ಟೈಲ್ ಸುದ್ದಿಗಳನ್ನು ಬರೆಯುವುದು ಅಚ್ಚುಮೆಚ್ಚು. ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳುವುದು, ಕಲಿಯುವುದು, ಹೊಸ ಜಾಗಗಳಿಗೆ ಭೇಟಿ ನೀಡುವುದು ಇಷ್ಟದ ವಿಚಾರ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ