ಆ್ಯಪ್ನಗರ

ಬೆಂಗಳೂರಿಗರೇ ಎಚ್ಚರ..! ರಾಜಧಾನಿಯಲ್ಲಿ 34ಕ್ಕೆ ಏರಿದ ಕಂಟೈನ್ಮೆಂಟ್‌ ಝೋನ್‌ಗಳ ಸಂಖ್ಯೆ

ಕೊರೊನಾ ವೈರಸ್‌ ಬೆಂಗಳೂರಿನಲ್ಲಿ ಮತ್ತೆ ಅಬ್ಬರಿಸಲು ಶುರುಮಾಡಿದೆ. ಕಳೆದ ಮೂರು ದಿನಗಳಲ್ಲಿ 82 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದು, 6 ಹೊಸ ಕಂಟೈನ್ಮೆಂಟ್‌ ಝೋನ್‌ಗಳನ್ನು ಕೂಡ ಕಳೆದ ಎರಡು ದಿನಗಳಲ್ಲಿ ಗುರುತಿಸಲಾಗಿದೆ. ಈ ಮೂಲಕ ಕಂಟೈನ್ಮೆಂಟ್‌ ಝೋನ್‌ಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.

Vijaya Karnataka Web 1 Jun 2020, 10:42 pm
ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಹೊಸದಾಗಿ ಆರು ಕೊರೊನಾ ವೈರಸ್‌ ಕಂಟೈನ್ಮೆಂಟ್‌ ಝೋನ್‌ಗಳನ್ನು ಗುರುತಿಸಲಾಗಿದೆ. ಈ ಮೂಲಕ 28 ಇದ್ದ ಕಂಟೈನ್ಮೆಂಟ್‌ ಝೋನ್‌ಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಲ್ಲಿ 82 ಪಾಸಿಟಿವ್‌ ಪ್ರಕರಣಗಳು ರಾಜಧಾನಿಯಲ್ಲಿ ವರದಿಯಾಗಿದ್ದು, ಸೋಂಕಿತರ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಿದೆ.
Vijaya Karnataka Web ಕಂಟೈನ್ಮೆಂಟ್‌ ಝೋನ್‌
ಕಂಟೈನ್ಮೆಂಟ್‌ ಝೋನ್‌


ಪೂರ್ವ ವಲಯದಲ್ಲಿ ವಾರ್ಡ್ ನಂ. 114 ಅಗರಂ, ವಾರ್ಡ್ ನಂ. 63 ಜಯಮಹಲ್‌ನ್ನು ಕಂಟೈನ್ಮೆಂಟ್‌ ಝೋನ್‌ಗಳಾಗಿ ಗುರುತಿಸಲಾಗಿದ್ದರೆ, ದಕ್ಷಿಣ ವಲಯದಲ್ಲಿ ವಾರ್ಡ್‌ ನಂ. 144 ಸಿದ್ದಾಪುರ, ವಾರ್ಡ್‌ ನಂ. ಹೊಸಹಳ್ಳಿ, ಪಶ್ಚಿಮ ವಲಯದಲ್ಲಿ ವಾರ್ಡ್ ನಂ. 138 ಛಲವಾದಿ ಪಾಳ್ಯ ಹಾಗೂ ಯಲಹಂಕ ವಲಯದಲ್ಲಿ ವಾರ್ಡ್‌ ನಂ.1 ಕೆಂಪೇಗೌಡ ನಗರಗಳು ನೂತನ ಕಂಟೈನ್ಮೆಂಟ್‌ ಝೋನ್‌ಗಳಾಗಿವೆ.

ಬೆಂಗಳೂರಿನಲ್ಲಿ ಮೇ 30ರಂದು 33 ಪ್ರಕರಣಗಳು ಪತ್ತೆಯಾಗಿದ್ದರೆ, ಮೇ 31ಕ್ಕೆ 21 ಕೇಸ್‌ ಹಾಗೂ ಜೂನ್‌ 1 ರಂದು 28 ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ನಗರದಲ್ಲಿ ಸೋಂಕಿತರ ಸಂಖ್ಯೆ 385ಕ್ಕೆ ಏರಿಕೆಯಾಗಿದೆ. 136 ಸಕ್ರಿಯ ಪ್ರಕರಣಗಳು ಇವೆ. ಸೋಂಕಿತರ ಸಂಖ್ಯೆ ಏರುವುದನ್ನು ನಿರೀಕ್ಷಿಸಲಾಗಿತ್ತು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ರಾಜಧಾನಿಯ ಆರಕ್ಷಕರಿಗೆ ಆಪತ್ತು..! ಬೆಂಗಳೂರಿನ ಮೂವರು ಪೊಲೀಸರಿಗೆ ಕೊರೊನಾ ಸೋಂಕು

ಲಾಕ್‌ಡೌನ್‌ ಸಡಿಲಿಕೆ ಮಾಡಿರುವುದರಿಂದ ಮುಂದಿನ ಕೆಲವು ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಏರುವ ನಿರೀಕ್ಷೆ ಇದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಹೇಳಿದ್ದಾರೆ. ಇನ್ನು, ಬೆಂಗಳೂರಿನಲ್ಲಿ ಶೇ.41ರಷ್ಟು ಸಕ್ರಿಯ ಪ್ರಕರಣಗಳು ಶಿವಾಜಿನಗರದ ರೋಗಿ ಸಂಖ್ಯೆ 653ರ ಸಂಪರ್ಕದಿಂದ ಬಂದಿವೆ ಎಂದು ಬಿಬಿಎಂಪಿಯ ವರದಿ ಹೇಳಿದೆ. ಇದುವರೆಗೂ 42 ವರ್ಷದ ವ್ಯಕ್ತಿಯಿಂದ 57 ಜನರಿಗೆ ಸೋಂಕು ತಗುಲಿದೆ. ಪಾದರಾಯನಪುರದಲ್ಲಿ ಶೇ.22ರಷ್ಟು ಸಕ್ರಿಯ ಕೊರೊನಾ ವೈರಸ್‌ ಪಾಸಿಟಿವ್‌ ಪ್ರಕರಣಗಳಿವೆ.

ಕೊರೊನಾ ಅಬ್ಬರಕ್ಕೆ ಕರುನಾಡು ತತ್ತರ..! ಮತ್ತೆ 187 ಸೋಂಕಿತರು, ಉಡುಪಿಯಲ್ಲಿ 73 ಕೇಸ್‌

ಹೊಸ ಕಂಟೈನ್ಮೆಂಟ್‌ ಝೋನ್‌ಗಳು
* ಪೂರ್ವ ವಲಯ
  • ವಾರ್ಡ್ ನಂ. 114 ಅಗರಂ
  • ವಾರ್ಡ್ ನಂ. 63 ಜಯಮಹಲ್‌
*ದಕ್ಷಿಣ ವಲಯ
  • ವಾರ್ಡ್‌ ನಂ. 144 ಸಿದ್ದಾಪುರ
  • ವಾರ್ಡ್‌ ನಂ.124 ಹೊಸಹಳ್ಳಿ
*ಪಶ್ಚಿಮ ವಲಯ
  • ವಾರ್ಡ್ ನಂ. 138 ಛಲವಾದಿ ಪಾಳ್ಯ
*ಯಲಹಂಕ ವಲಯ
  • ವಾರ್ಡ್‌ ನಂ.1 ಕೆಂಪೇಗೌಡ ನಗರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ