ಆ್ಯಪ್ನಗರ

ಕಸ ಎಸೆಯುವುದನ್ನು ತಪ್ಪಿಸಲು ಬೆಂಗಳೂರಿನ ಮಹಿಳೆಯ ಪ್ಲ್ಯಾನ್

ನಗರದ ಬನಶಂಕರಿಯಲ್ಲಿ ಗೃಹಿಣಿಯಾಗಿರುವ 67 ವರ್ಷದ ಶೈಲಜಾ ಶ್ರೀನಿವಾಸನ್ ಮನೆಯ ಪಕ್ಕ ಇದ್ದ ಗುಲ್‌ಮೊಹರ್ ಮರದ ಸಮೀಪ ಜನರು ಕಸ ಎಸೆಯುತ್ತಿದ್ದರು. ಪ್ರತಿ ಬಾರಿ ಮರದ ಬುಡಕ್ಕೆ ಕಸ ಎಸೆದಾಗಲೂ ಶೈಲಜಾ ಅದನ್ನು ಸ್ವಚ್ಛಗೊಳಿಸುತ್ತಿದ್ದರು.

Bangalore Mirror Bureau 27 Aug 2018, 4:38 pm
[This story originally published in Bangalore Mirror on Aug 27, 2018]
Vijaya Karnataka Web Lady saved tree


ಬೆಂಗಳೂರು:
ನಗರದ ಬನಶಂಕರಿಯಲ್ಲಿ ಗೃಹಿಣಿಯಾಗಿರುವ 67 ವರ್ಷದ ಶೈಲಜಾ ಶ್ರೀನಿವಾಸನ್ ಮನೆಯ ಪಕ್ಕ ಇದ್ದ ಗುಲ್‌ಮೊಹರ್ ಮರದ ಸಮೀಪ ಜನರು ಕಸ ಎಸೆಯುತ್ತಿದ್ದರು. ಪ್ರತಿ ಬಾರಿ ಮರದ ಬುಡಕ್ಕೆ ಕಸ ಎಸೆದಾಗಲೂ ಶೈಲಜಾ ಅದನ್ನು ಸ್ವಚ್ಛಗೊಳಿಸುತ್ತಿದ್ದರು. ಅಲ್ಲದೆ ಜನರು ಎಸೆದಿದ್ದ ಕಸವನ್ನು ಕಟ್ಟಿ, ಮರುದಿನ ಪೌರಕಾರ್ಮಿಕರಿಗೆ ನೀಡುತ್ತಿದ್ದರು.

ಕಸ ಹಾಕಬೇಡಿ, ಮರದ ಬುಡದಲ್ಲಿ ಕಸ ಹಾಕುವುದು ಸರಿಯಲ್ಲ ಎಂದು ಶೈಲಜಾ ಹಲವರನ್ನು ವಿನಂತಿಸಿಕೊಂಡರೂ, ಬೋರ್ಡ್ ಹಾಕಿದರೂ ಕಸ ಹಾಕುವುದು ನಿಂತಿರಲಿಲ್ಲ. ಹೀಗಾಗಿ ಬೇಸತ್ತ ಶೈಲಜಾ ಮರದ ಬುಡದಲ್ಲಿ ಮತ್ತು ಅದರ ಸುತ್ತಲೂ ವಿವಿಧ ಗಿಡಗಳ ಬೀಜ ಬಿತ್ತಿದ್ದರು. ಅದು ಸಸಿಯಾದಾಗ ಕೆಲವು ವಾಹನಗಳ ಅಡಿಗೆ ಮತ್ತು ಕೆಲವು ಜನರ ಕಾಲಡಿಗೆ ಸಿಕ್ಕು ಸತ್ತುಹೋಗುತ್ತಿದ್ದವು.

ಆದರೂ ಪ್ರಯತ್ನ ಬಿಡದ ಶೈಲಜಾ, ತಮ್ಮ ಮನೆಯ ಆವರಣವನ್ನು ಸ್ವಚ್ಛವಾಗಿಡುವ ಉದ್ದೇಶದಿಂದ ಮತ್ತು ಜನರಿಗೆ ತಿಳಿವಳಿಕೆ ನೀಡಲು ಮತ್ತೆ ಮತ್ತೆ ಅಲ್ಲಿ ಗಿಡ ನೆಡುತ್ತಿದ್ದರು. ಬೀಜ ಹಾಕುತ್ತಿದ್ದರು. ಹೀಗಾಗಿ ಸಸಿ ಬೆಳೆಯುತ್ತಲೇ ಜನರಿಗೂ ಅಲ್ಲಿ ಕಸ ಎಸೆಯಲು ಮನಸ್ಸಾಗಲಿಲ್ಲ.

ಜತೆಗೆ ಸತತ ಐದು ತಿಂಗಳು ಶ್ರಮಿಸಿದ ಶೈಲಜಾ ಅವರ ಪ್ರಯತ್ನ ಕೊನೆಗೂ ಫಲಿಸಿದೆ. ಜನರು ಅಲ್ಲಿ ಕಸ ಎಸೆಯುವುದನ್ನು ನಿಲ್ಲಿಸಿದ್ದು, ಗಿಡಗಳು ಕೂಡ ಚೆನ್ನಾಗಿ ಬೆಳೆಯುತ್ತಿವೆ. ಅಲ್ಲದೆ ಕಸ ಎಸೆಯುವುದಿರಲಿ, ಜನರು ಗಿಡಗಳ ತಂಟೆಗೂ ಹೋಗುತ್ತಿಲ್ಲ. ಹೀಗಾಗಿ ಮರದ ಬುಡ ಮತ್ತು ಅದರ ಸುತ್ತಲೂ ಪುಟ್ಟ ಗಾರ್ಡನ್ ರೀತಿಯ ಸನ್ನಿವೇಶ ಸೃಷ್ಟಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ