ಆ್ಯಪ್ನಗರ

ಇಂದು ಬೆಂಗಳೂರು ಲಾಕ್‌ಡೌನ್‌ ಅಂತ್ಯ: ನಾಳೆ ಬೆಳಗ್ಗೆ 5 ಗಂಟೆಗೆ ರಸ್ತೆಗಿಳಿಯಲಿವೆ ಕೆಎಸ್‌ಆರ್‌ಟಿಸಿ ಬಸ್‌

ಬೆಂಗಳೂರು ನಗರದಲ್ಲಿ ಜಾರಿ ಮಾಡಲಾಗಿದ್ದ ಒಂದು ವಾರದ ಲಾಕ್‌ಡೌನ್‌ ಇಂದಿಗೆ (ಮಂಗಳವಾರ ಜುಲೈ 21) ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 5 ಗಂಟೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯಲಿವೆ.

Vijaya Karnataka Web 21 Jul 2020, 4:36 pm
ಬೆಂಗಳೂರು: ನಗರದಲ್ಲಿ ಜಾರಿ ಮಾಡಲಾಗಿದ್ದ ಒಂದು ವಾರದ ಲಾಕ್‌ಡೌನ್‌ ಇಂದಿಗೆ (ಮಂಗಳವಾರ ಜುಲೈ 21) ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ 5 ಗಂಟೆಯಿಂದಲೇ ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯಲಿವೆ. ಬಿಎಂಟಿಸಿ ಬಸ್‌ಗಳು ಕೂಡ ಬುಧವಾರ ಬೆಳಗ್ಗೆಯಿಂದಲೇ ಸೇವೆ ಆರಂಭಿಸಲಿವೆ.
Vijaya Karnataka Web bengaluru lockdown


ಬೆಂಗಳೂರಲ್ಲಿ ಮಿತಿಮೀರಿ ಹಬ್ಬುತ್ತಿದ್ದ ಕೊರೊನಾ ವೈರಸ್‌ ಅನ್ನು ನಿಯಂತ್ರಿಸುವ ಉದ್ದೇಶದಿಂದ ಕಳೆದ ಮಂಗಳವಾರ ಲಾಕ್‌ಡೌನ್‌ ಜಾರಿ ಮಾಡಲಾಗಿತ್ತು. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಸಂಪೂರ್ಣ ಲಾಕ್ಡೌನ್‌ ಮಾಡಲಾಗಿತ್ತು. ಇದೀಗ ಜುಲೈ 21ಕ್ಕೆ ಒಂದು ವಾರದ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಅಂತ್ಯವಾಗಲಿದೆ.,

ಬೆಂಗಳೂರಿನಲ್ಲಿ ಲಾಕ್‌ಡೌನ್ ಮುಂದುವರಿಸಿ, 15 ದಿನಗಳ ಕಾಲ ಲಾಕ್‌ಡೌನ್‌ ಮಾಡುವಂತೆ ಬಿಬಿಎಂಪಿ ಮೇಯರ್‌ ಗೌತಮ್ ಕುಮಾರ್ ಅವರು ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದರು. ಆದರೆ, ರಾಜ್ಯ ಸರಕಾರವು ಲಾಕ್‌ಡೌನ್‌ ಮುಂದುವರಿಸಲು ಮನಸು ಮಾಡಿಲ್ಲ. ಲಾಕ್‌ಡೌನ್‌ ಮಾತ್ರದಿಂದಲೇ ಸೋಂಕು ನಿಯಂತ್ರಣ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಮತ್ತೆ ಲಾಕ್‌ಡೌನ್‌ ವಿಸ್ತರಣೆ ಇಲ್ಲ, ಮಂಗಳವಾರ ಹೊಸ ಮಾರ್ಗಸೂಚಿ, ನೈಟ್‌ ಕರ್ಫ್ಯೂ ಮುಂದುವರಿಕೆ

ಮಾರುಕಟ್ಟೆ ಸೀಲ್‌ಡೌನ್‌ ಮುಂದುವರಿಕೆ:
ಜುಲೈ 21ಕ್ಕೆ ಬೆಂಗಳೂರಿನಲ್ಲಿ ಲಾಕ್ಡೌನ್‌ ಅಂತ್ಯವಾದರೂ ಮಾರುಕಟ್ಟೆ ಸೀಲ್‌ಡೌನ್‌ ಮುಂದುವರಿಯಲಿದೆ. ಕೆ.ಆರ್‌. ಮಾರುಕಟ್ಟೆ, ಕಾಲಾಸಿಪಾಳ್ಯ ಮಾರ್ಕೆಟ್‌, ಚಿಕ್ಕಪೇಟೆ ಮೊದಲಾದ ಪ್ರದೇಶಗಳ ಸೀಲ್‌ಡೌನ್‌ ಮುಂದುವರಿಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ