ಆ್ಯಪ್ನಗರ

ಬೆಂಗಳೂರು: ಮನೆಯ ಟೆರೇಸ್‌ನಲ್ಲಿ ಹೂವಿನ ಕುಂಡದೊಂದಿಗೆ ಗಾಂಜಾ ಬೆಳೆಯುತ್ತಿದ್ದ ಖತರ್ನಾಕ್ ಬಂಧನ

ಗಾಂಜಾ ಸೇವನೆ ಜೊತೆಗೆ ಟೆರೇಸ್‌ ಮೇಲೆ ಗಿಡಗಳ ಜೊತೆಗೆ ಗಾಂಜಾ ಗಿಡ ಬೆಳೆದಿದ್ದ. ಕೆಲ ವಾರಗಳ ಹಿಂದೆ ಚಕ್ರವರ್ತಿಯ ಸಂಬಂಧಿಯೊಬ್ಬರು ಮನೆಗೆ ಹೋಗಿದ್ದರು. ಆತನ ಗಾಂಜಾ ವ್ಯಸನದ ಬಗ್ಗೆಯೂ ತಿಳಿದಿದ್ದರು. ಟೆರೇಸ್‌ ಮೇಲೆ ಹೋಗಿದ್ದಾಗಿ ಗಾಂಜಾ ಗಿಡಗಳು ಕಾಣಿಸಿವೆ. ಅವರೇ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

Vijaya Karnataka Web 19 Dec 2020, 7:27 am
ಬೆಂಗಳೂರು: ಹೂವು ಮತ್ತು ಅಲಂಕಾರಿಕ ಗಿಡಗಳ ನಡುವೆ ಗಾಂಜಾ ಸೊಪ್ಪಿನ ಗಿಡಗಳನ್ನು ಬೆಳೆದಿದ್ದ ಕಿರೀಟ್‌ ಚಕ್ರವರ್ತಿ ಎಂಬಾತನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ರೇಸ್‌ಕೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಚಕ್ರವರ್ತಿ, ಗಾಂಜಾ ವ್ಯಸನಿಯಾಗಿದ್ದ. ಪತ್ನಿಯಿಂದ ದೂರವಾಗಿ ಹೆಬ್ಬಾಳದಲ್ಲಿ ವಾಸವಿದ್ದ.
Vijaya Karnataka Web Terrace Garden


ಗಾಂಜಾ ಸೇವನೆ ಜೊತೆಗೆ ಟೆರೇಸ್‌ ಮೇಲೆ ಗಿಡಗಳ ಜೊತೆಗೆ ಗಾಂಜಾ ಗಿಡ ಹಾಕಿದ್ದ. ಕೆಲ ವಾರಗಳ ಹಿಂದೆ ಚಕ್ರವರ್ತಿಯ ಸಂಬಂಧಿಯೊಬ್ಬರು ಮನೆಗೆ ಹೋಗಿದ್ದರು. ಆತನ ಗಾಂಜಾ ವ್ಯಸನದ ಬಗ್ಗೆಯೂ ತಿಳಿದಿದ್ದರು. ಟೆರೇಸ್‌ ಮೇಲೆ ಹೋಗಿದ್ದಾಗಿ ಗಾಂಜಾ ಗಿಡಗಳು ಕಾಣಿಸಿವೆ. ಅವರೇ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಮತ್ತೊಂದು ಪ್ರಕರಣ: 6 ಕೆ.ಜಿ ಗಾಂಜಾ ಜಪ್ತಿ!
ಗಾಂಜಾ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಇಂದಿರಾನಗರ ಪೊಲೀಸರು, 1.20 ಲಕ್ಷ ರೂ. ಮೌಲ್ಯದ 6 ಕೆ.ಜಿ. ಗಾಂಜಾ ಮತ್ತು 2 ಮೊಬೈಲ್‌ ಫೋನ್‌ ವಶಪಡಿಸಿಕೊಂಡಿದ್ದಾರೆ. ಇಂದಿರಾನಗರ 100 ಅಡಿ ರಸ್ತೆ ಹಾಪ್‌ಕಾಮ್ಸ್‌ ಸಮೀಪ ಗಾಂಜಾ ಮಾರುತ್ತಿರುವ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು.

ಡಿಸೆಂಬರ್‌ 21ರಂದು ಯಶವಂತಪುರ ಎಪಿಎಂಸಿ ಬಂದ್‌ಗೆ ಕಾರ್ಮಿಕರ ಒಕ್ಕೂಟ ನಿರ್ಧಾರ

ಛತ್ತೀಸ್‌ಗಢದ ಪಾಲಾಶ್‌ ಕುಮಾರ್‌(23) ಮತ್ತು ಮುರುಗೇಶಪಾಳ್ಯದ ಸಿದ್ಧಾರ್ಥ (27) ಎಂಬುವರನ್ನು ಬಂಧಿಸಿದ್ದಾರೆ. ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣ ಬೆಳಕಿಗೆ ಬಂದ ನಂತರ ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾದಕ ವ್ಯಸನಿಗಳು ಹಾಗೂ ವಸ್ತುಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ