ಆ್ಯಪ್ನಗರ

ವಲಸೆ ಕಾರ್ಮಿಕರಿಗಾಗಿ ತನ್ನ ಸಲೂನ್ ಶಾಪನ್ನೇ ಆಶ್ರಯತಾಣವಾಗಿಸಿದ ಬೆಂಗಳೂರಿನ ಯುವಕ!

ಬೆಂಗಳೂರಿನ ಹೃದಯವಂತ ಯುವಕನೊಬ್ಬ ಈ ರೀತಿ ಅತಂತ್ರರಾದವರಿಗೆ ಆಶ್ರಯ ಕೊಡುವ ಕೆಲಸ ಮಾಡಿದ್ದಾನೆ. ಸ್ವಾರಸ್ಯಕರ ಸಂಗತಿ ಅಂದ್ರೆ ತನ್ನ ಸಲೂನ್‌ ಅಂಗಡಿಯನ್ನೇ ನಿರ್ಗತಿಕರಿಗೆ ಆಶ್ರಯ ತಾಣವಾಗ ಪರಿವರ್ತಿಸಿ ಕೊಟ್ಟಿದ್ದಾನೆ.

Indiatimes 20 May 2020, 5:48 pm
ಬೆಂಗಳೂರು: ಕೊರೊನಾ ವೈರಸ್‌ ವ್ಯಾಪಕ ಹರಡುವಿಕೆಯನ್ನ ತಪ್ಪಿಸಲು ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಇದರಿಂದಾಗಿ ಬೇರೆ ಕಡೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ಅಲ್ಲೇ ಉಳಿಯುವಂತಾಯಿತು. ಊರಿಗೂ ಹೋಗಲಾಗದೆ ಮನೆಯೂ ಇಲ್ಲದೆ ರಸ್ತೆಯಲ್ಲೇ ಕಾಲಕಳೆಯುವಂತಾಗಿತ್ತು.
Vijaya Karnataka Web Salon-2_5ec4dd7f512f4


ಹೆಚ್ಚಿನ ವಲಸೆ ಕಾರ್ಮಿಕರಿರುವ ಬೆಂಗಳೂರಿನಲ್ಲೂ ಅನೇಕರು ಇಂತಹ ಸಮಸ್ಯೆಯನ್ನ ಅನುಭವಿಸಿದ್ದರು. ಆದ್ರೆ ಬೆಂಗಳೂರಿನ ಹೃದಯವಂತ ಯುವಕನೊಬ್ಬ ಈ ರೀತಿ ಅತಂತ್ರರಾದವರಿಗೆ ಆಶ್ರಯ ಕೊಡುವ ಕೆಲಸ ಮಾಡಿದ್ದಾನೆ. ಸ್ವಾರಸ್ಯಕರ ಸಂಗತಿ ಅಂದ್ರೆ ತನ್ನ ಸಲೂನ್‌ ಅಂಗಡಿಯನ್ನೇ ನಿರ್ಗತಿಕರಿಗೆ ಆಶ್ರಯ ತಾಣವಾಗ ಪರಿವರ್ತಿಸಿ ಕೊಟ್ಟಿದ್ದಾನೆ.

ರಾಹುಲ್‌ ರೈ ಎಂಬಾತನ ಬೆಂಗಳೂರಿನಲ್ಲಿ ಸಲೂನ್‌ ಶಾಪ್‌ ನಡೆಸುತ್ತಿದ್ದಾನೆ. ಲಾಕ್‌ಡೌನ್‌ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಬಾಡಿಗೆ ಮನೆಯಿಂದ ಹೊರಗೆ ಹಾಕಿದ್ದಾರೆ ಅನ್ನುವ ಮಾಹಿತಿ ರಾಹುಲ್‌ಗೆ ಸಿಕ್ಕಿತ್ತಂತೆ. ಕೂಡಲೇ ಈ ಬಗ್ಗೆ ಪರಿಶೀಲಿಸಿದ ರಾಹುಲ್‌, ಇಂತಹ ಜನರನ್ನ ಹುಡುಕಿಕೊಂಡು ಕರೆದುಕೊಂಡು ಬಂದಿದ್ದಾನೆ. ಅನೇಕ ನೀಡಿದ ರಾಹುಲ್‌ ಸಲೂನ್‌ ಮನೆಯಲ್ಲಿಈಶಾನ್ಯ ರಾಜ್ಯ ಹಾಗೂ ನೇಪಾಳದವರೇ ಬಹು ಸಂಖ್ಯೆಯಲ್ಲಿದ್ದರಂತೆ. ಐಟಿ ಕೆಲಸದವರು, ವಲಸೆ ಕಾರ್ಮಿಕರೆಲ್ಲ ಒಟ್ಟಿಗೆ ಇಲ್ಲಿ ಆಶ್ರಯ ಪಡೆದಿದ್ದರು ಎಂದು ರಾಹುಲ್ ರೈ‌ ತಿಳಿಸಿದ್ದಾರೆ.

ಶಾಕಿಂಗ್ ವಿಡಿಯೋ: ಸೆಖೆ ತಾಳಲಾಗದೆ ಪಿಪಿಇ ಕಿಟ್ ಕಳಚಿಟ್ಟ ಆರೋಗ್ಯ ಕಾರ್ಯಕರ್ತರು..!


ಇನ್ನು ಆಶ್ರಯ ಪಡೆದ ಯುವಕ ಕೂಡ ತನಗಾದ ಸಮಸ್ಯೆಯನ್ನ ವಿವರಿಸಿದ್ದು, ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನನ್ನ ಕೆಲಸದಿಂದ ವಜಾಗೊಳಿಸಿದರು. ಬಾಡಿಗೆ ನೀಡದಕ್ಕೆ ಮಾಲೀಕ ಕೂಡ ನನ್ನನ್ನ ಹೊರಕಳುಹಿಸಿದ್ರು. ಒಂದು ವಾರ ರಸ್ತೆಯಲ್ಲೇ ಕಾಲ ಕಳೆದಿದ್ದೆ. ಮತ್ತೆ ಈ ವಿಚಾರ ಫೇಸ್‌ಬುಕ್‌ ಮೂಲಕ ತಿಳಿದಾಗ ರಾಹುಲ್‌ ಅವರನ್ನ ಸಂಪರ್ಕ ಮಾಡಿ ಇಲ್ಲಿಗೆ ಬಂದು ಸೇರಿರೋದಾಗಿ ತಿಳಿಸಿದ್ದಾನೆ.

ಸಲೂನನ್ನ ಮನೆ ತರ ಮಾಡಿ ಅನೇಕರಿಗೆ ನೆರವಾದ ರಾಹುಲ್‌ ರೈಗೆ ಸೋಶಿಯಲ್‌ ಮೀಡಿಯಾದಲ್ಲಿ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್‌ ನಂತರ ವಲಸೆ ಕಾರ್ಮಿಕರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದರು. ಆಹಾರ, ವಸತಿ ಸಮಸ್ಯೆಯನ್ನ ಎದುರಿಸಿದ್ದರು. ಇದು ಸಮಸ್ಯಯಾಗೇ ಉಳಿದಾಗ ಊರಿಗೆ ಪ್ರಯಾಣ ಬೆಳೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ