ಆ್ಯಪ್ನಗರ

ಬೆಂಗಳೂರು: ವಿವಾಹಿತ ಮಹಿಳೆ ಜತೆ ಸಲುಗೆ ಯುವಕನ ಕೊಲೆ, ಪೊದೆಯಲ್ಲಿ ಸಿಕ್ತು ಹೆಣ!

ಕೊಲೆಯಾದ ರಾಜದೊರೈ, ಪವನ್‌ ಎಂಬುವವರ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲೇ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಜತೆ ಸಲುಗೆಯಿಂದ ಇದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಮಹಿಳೆ ಪತಿ ಬಾಲಾಜಿ ಜತೆ ದ್ವೇಷ ಕಟ್ಟಿಕೊಂಡಿದ್ದ. ನ.29ರಂದು ರಾತ್ರಿ ಪರಿಚಿತರನ್ನು ಭೇಟಿ ಮಾಡಲು ಹೊರಗೆ ಹೋಗುತ್ತೇನೆ ಎಂದು ಹೇಳಿ ರಾಜದೊರೈ ಮನೆಯಿಂದ ಹೊರಗೆ ಹೋಗಿದ್ದ. ಮತ್ತೆ ಪತ್ತೆಯಾಗಿದ್ದು ಹೆಣವಾಗಿ.

Vijaya Karnataka 11 Dec 2020, 4:10 pm
ಬೆಂಗಳೂರು: ವಿವಾಹಿತ ಮಹಿಳೆಯ ಜೊತೆ ಸಲುಗೆಯಿಂದಿದ್ದ ಅನುಮಾನದ ಮೇಲೆ ಯುವಕನೊಬ್ಬನನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು, ಶವವನ್ನು ರಾಮಮೂರ್ತಿನಗರದ ರಿಂಗ್‌ ರಸ್ತೆ ಪಕ್ಕದ ಪೊದೆಯಲ್ಲಿ ಬಿಸಾಡಿದ್ದಾರೆ. ರಾಜದೊರೈ (25) ಕೊಲೆಯಾದ ಯುವಕ. ಬುಧವಾರ (ಡಿ.11) ಸಂಜೆ ಕೊಳೆತ ಸ್ಥಿತಿಯಲ್ಲಿ ರಿಂಗ್‌ ರಸ್ತೆ ಪಕ್ಕದಲ್ಲಿಅಪರಿಚಿತ ಮೃತದೇಹ ಪತ್ತೆಯಾಗಿತ್ತು.
Vijaya Karnataka Web Crime
File photo for representation purpose only


ಸ್ಥಳಕ್ಕೆ ಭೇಟಿ ನೀಡಿದ್ದ ರಾಮಮೂರ್ತಿನಗರ ಠಾಣೆ ಪೊಲೀಸರು, ನಗರದ ವಿವಿಧ ಠಾಣೆ ವ್ಯಾಪ್ತಿಗಳಲ್ಲಿ ವರದಿಯಾಗಿದ್ದ ಕಾಣೆಯಾಗಿರುವ ವ್ಯಕ್ತಿಗಳ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಜೆ.ಬಿ.ನಗರ ಠಾಣೆ ವ್ಯಾಪ್ತಿಯ ನ್ಯೂ ತಿಪ್ಪಸಂದ್ರದಿಂದ ಹತ್ತು ದಿನಗಳ ಹಿಂದೆ ಕಾಣೆಯಾಗಿದ್ದ ರಾಜದೊರೈ ಎಂಬಾತನ ಕುರಿತು ಮಾಹಿತಿ ಸಿಕ್ಕಿತ್ತು. ರಾಜದೊರೈ ತಂದೆ ನೀಡಿರುವ ದೂರಿನ ಅನ್ವಯ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಮಹಿಳೆ ವಿಚಾರವಾಗಿ ಕೊಲೆ ನಡೆದಿರುವ ಅನುಮಾನ ವ್ಯಕ್ತವಾಗಿದೆ.

ಕೊಲೆಯಾದ ರಾಜದೊರೈ, ಪವನ್‌ ಎಂಬುವವರ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲೇ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಜತೆ ಸಲುಗೆಯಿಂದ ಇದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಮಹಿಳೆ ಪತಿ ಬಾಲಾಜಿ ಜತೆ ದ್ವೇಷ ಕಟ್ಟಿಕೊಂಡಿದ್ದ. ನ.29ರಂದು ರಾತ್ರಿ ಪರಿಚಿತರನ್ನು ಭೇಟಿ ಮಾಡಲು ಹೊರಗೆ ಹೋಗುತ್ತೇನೆ ಎಂದು ಹೇಳಿ ರಾಜದೊರೈ ಮನೆಯಿಂದ ಹೊರಗೆ ಹೋಗಿದ್ದು, ವಾಪಸ್‌ ಮರಳಿರಲಿಲ್ಲ. ಕೊಲೆ ಹಿಂದೆ ಬಾಲಾಜಿ ಕೈವಾಡ ಇರಬಹುದು ಎಂದು ಶಂಕಿಸಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು: ಶೀಘ್ರದಲ್ಲೇ ಬಿಬಿಎಂಪಿಗೆ ಸೇರ್ಪಡೆಗೊಳ್ಳಲಿದೆ ಈ ಪ್ರದೇಶಗಳು, ಗ್ರಾಪಂ ಸದಸ್ಯರಿಗೆ ಕಾರ್ಪೋರೇಟರ್‌ ಯೋಗ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ