ಆ್ಯಪ್ನಗರ

ಪ್ರೀತಿಯ ನೆಪದಲ್ಲಿ ಯುವತಿಯ ಖಾಸಗಿ ದೃಶ್ಯ ಸೆರೆಹಿಡಿದು ಬ್ಲ್ಯಾಕ್‌ಮೇಲ್; ಪ್ರಿಯಕರ ಸೇರಿ ನಾಲ್ವರ ಬಂಧನ

ಕೆಲ ಸಮಯದ ಹಿಂದೆ 24 ವರ್ಷದ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡು ಪ್ರೀತಿಸುವುದಾಗಿ ನಂಬಿಸಿದ್ದ. ಯುವತಿ ಆತನ ಪ್ರೇಮ ನಿವೇದನೆ ಒಪ್ಪಿಕೊಂಡಿದ್ದಳು. ಈ ನಡುವೆ ಪ್ರೇಯಸಿಯೊಂದಿಗೆ ಕಳೆದ ಖಾಸಗಿ ದೃಶ್ಯದ ವಿಡಿಯೋವನ್ನು ಆಕೆಯ ಗಮನಕ್ಕೆ ಬಾರದಂತೆ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ.

Vijaya Karnataka 23 Nov 2021, 6:54 am
ಬೆಂಗಳೂರು: ಪ್ರೀತಿಸುವ ನೆಪದಲ್ಲಿ ಯುವತಿಯ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪಿ ಹಾಗೂ ಆತನ ಮೇಲೆ ಹಲ್ಲೆ ನಡೆಸಿದ ಮೂವರನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web Crime news Police arrested


ಸಹಕಾರ ನಗರದ ನಿವಾಸಿ ಸಂತೋಷ್‌ (23), ಎರಿ ಸ್ವಾಮಿ (23), ನಂಜುಂಡ ಸ್ವಾಮಿ (25), ಆಕಾಶ್‌ (19) ಬಂಧಿತ ಆರೋಪಿಗಳಾಗಿದ್ದು, ಸಹಕಾರ ನಗರದ ಕಾಂತಿ ಸ್ವೀಟ್ಸ್‌ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್‌, ಕೆಲ ಸಮಯದ ಹಿಂದೆ 24 ವರ್ಷದ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡು ಪ್ರೀತಿಸುವುದಾಗಿ ನಂಬಿಸಿದ್ದ. ಯುವತಿ ಆತನ ಪ್ರೇಮ ನಿವೇದನೆ ಒಪ್ಪಿಕೊಂಡಿದ್ದಳು. ಈ ನಡುವೆ ಪ್ರೇಯಸಿಯೊಂದಿಗೆ ಕಳೆದ ಖಾಸಗಿ ದೃಶ್ಯದ ವಿಡಿಯೋವನ್ನು ಆಕೆಯ ಗಮನಕ್ಕೆ ಬಾರದಂತೆ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ.
ಸಾಮಾಜಿಕ ಜಾಲತಾಣ ಬಳಸಿ ಕಳವು; ಮೂವರ ಬಂಧನ, ₹50 ಲಕ್ಷ ಮೌಲ್ಯದ ಚಿನ್ನಾಭರಣ ವಶ
ಇತ್ತೀಚೆಗೆ ಆ ವಿಡಿಯೋವನ್ನು ಪ್ರೇಯಸಿಯ ಮೊಬೈಲ್‌ಗೆ ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ. ಹಣ ಕೊಡದೇ ಇದ್ದರೆ ಸಾಮಾಜಿಕ ಜಾಲ ತಾಣಗಳಲ್ಲಿ ಈ ವಿಡಿಯೋ ವೈರಲ್‌ ಮಾಡುವುದಾಗಿ ಬೆದರಿಸಿದ್ದ. ಆತಂಕಗೊಂಡ ಯುವತಿ 3 ರಿಂದ 10 ಸಾವಿರ ರೂ.ವರೆಗೆ ಹಣ ಕೊಡುತ್ತಿದ್ದಳು. ಸಂತೋಷ್‌ ಪದೇ ಪದೇ ಹಣಕ್ಕೆ ಬೇಡಿಕೆಯಿಡಲು ಆರಂಭಿಸಿದಾಗ, ತನ್ನ ಸ್ನೇಹಿತರಾದ ಎರಿಸ್ವಾಮಿ, ನಂಜುಂಡಸ್ವಾಮಿ ಹಾಗೂ ಆಕಾಶ್‌ಗೆ ಈ ವಿಚಾರ ತಿಳಿಸಿ ಸಹಾಯ ಕೋರಿದ್ದಳು. ಯುವತಿಗೆ ಸಹಾಯ ಮಾಡುವುದಾಗಿ ಮೂವರೂ ಭರವಸೆ ನೀಡಿದ್ದರು.
ಅನೈತಿಕ ಸಂಬಂಧಕ್ಕಾಗಿ ಗಂಡನಿಗೆ ದೇವರ ಪ್ರಸಾದವೆಂದು ನಿದ್ದೆ ಮಾತ್ರೆ ಕೊಟ್ಟು ಕೊಲೆಗೆ ಯತ್ನಿಸಿದ ಪತ್ನಿ!
ಅದರಂತೆ ನ. 16 ರಂದು ತಡರಾತ್ರಿ 12.20ಕ್ಕೆ ಸಂತೋಷ್‌ ತನ್ನ ರೂಂನಲ್ಲಿ ಮಲಗಿದ್ದ ವೇಳೆ ಬಂದ ಮೂವರು ಆತನಿಗೆ ಪೆಪ್ಪರ್‌ ಸ್ಪ್ರೇ ಮಾಡಿ ಅವನ ಮೊಬೈಲ್‌ ಕಸಿದುಕೊಳ್ಳಲು ಯತ್ನಿಸಿದ್ದರು. ಸಂತೋಷ್‌ ಮೊಬೈಲ್‌ ಕೊಡದೇ ಇದ್ದಾಗ ಆತನ ಮೇಲೆ ಹಲ್ಲೆ ನಡೆಸಿ ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಸಂತೋಷ್‌ ಕೊಡಿಗೇಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದ. ಸಂತೋಷ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮೂವರನ್ನು ಬಂಧಿಸಿ, ಸಂತ್ರಸ್ತೆ ಕೊಟ್ಟ ದೂರಿನ ಆಧಾರದ ಮೇಲೆ ಸಂತೋಷ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ