ಆ್ಯಪ್ನಗರ

ಏರಿಯಾದಲ್ಲಿ ‘ಹವಾ’ ಸೃಷ್ಟಿಸಲು ಕಾರಿಗೆ ಕಲ್ಲು, ಓರ್ವ ರೌಡಿ ಸೇರಿ 7 ಜನ ಅಂದರ್‌

ಪುಂಡಾಟ ಮೆರೆದು ಜೈಲಿಗೆ ಹೋಗಿ ಬಂದರೆ ‘ಹೆಸರು ಮಾಡಬಹುದು’ ಎಂಬುದಾಗಿ ಕಿರಣ್ ಉಳಿದ ಆರೋಪಿಗಳಿಗೆ ಮಾರ್ಗದರ್ಶನ ನೀಡಿದ್ದ. ಸಾರ್ವಜನಿಕರು, ಎದುರಾಳಿಗಳನ್ನು ಹೆದರಿಸಿ ಇಟ್ಟುಕೊಳ್ಳಲು ಈ ಕೃತ್ಯಗಳು ನೆರವಾಗುತ್ತವೆ ಎಂದು ಅಪರಾಧ ಪಾಠ ಮಾಡಿದ್ದ.

Vijaya Karnataka Web 8 Nov 2019, 1:16 pm
ಬೆಂಗಳೂರು: ಏರಿಯಾದಲ್ಲಿ ತಮ್ಮ ಬಗ್ಗೆ 'ಹವಾ' ಸೃಷ್ಟಿಸಲು ಸಾರ್ವಜನಿಕ ರಸ್ತೆಗಳು, ಮನೆಗಳ ಎದುರು ನಿಲ್ಲಿಸಿದ್ದ ಕಾರು, ಜೀಪುಗಳ ಮೇಲೆ ಕಲ್ಲು ತೂರಿ ಪುಂಡಾಟ ಮೆರೆದಿದ್ದ ಒಬ್ಬ ರೌಡಿ ಸೇರಿ 7 ದುಷ್ಕರ್ಮಿಗಳನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web Arrest


ನಿತಿನ್, ಯಶವಂತ, ಆಶ್ರಯ್, ಬಾಲಾಜಿ, ಕಿರಣ್ ರೆಡ್ಡಿ, ಮುತ್ತು ಮತ್ತು ಚರಣ್ ರಾಜ್ ಬಂಧಿತರು. ಇವರಲ್ಲಿ ಕಿರಣ್ ರೆಡ್ಡಿ ವಿಜಯನಗರ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ.

ಪುಂಡಾಟ ಮೆರೆದು ಜೈಲಿಗೆ ಹೋಗಿ ಬಂದರೆ ‘ಹೆಸರು ಮಾಡಬಹುದು’ ಎಂಬುದಾಗಿ ಕಿರಣ್ ಉಳಿದ ಆರೋಪಿಗಳಿಗೆ ಮಾರ್ಗದರ್ಶನ ನೀಡಿದ್ದ. ಸಾರ್ವಜನಿಕರು, ಎದುರಾಳಿಗಳನ್ನು ಹೆದರಿಸಿ ಇಟ್ಟುಕೊಳ್ಳಲು ಈ ಕೃತ್ಯಗಳು ನೆರವಾಗುತ್ತವೆ ಎಂದು ಅಪರಾಧ ಪಾಠ ಮಾಡಿದ್ದ.

ಅದರಂತೆ ಬುಧವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ವಿಜಯನಗರ, ಪಟ್ಟೆಗಾರ ಪಾಳ್ಯದಲ್ಲಿ ನಿಲ್ಲಿಸಿದ್ದ ಕಾರು, ಜೀಪು ಸೇರಿದಂತೆ ಒಟ್ಟು 20 ವಾಹನಗಳ ಮೇಲೆ ಇವರೆಲ್ಲಾ ಸೇರಿ ಕಲ್ಲು ತೂರಾಟ ನಡೆಸಿ ಗಾಜು ಧ್ವಂಸಗೊಳಿಸಿದ್ದರು. ಆರೋಪಿಗಳ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳನ್ನು ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರ ಪೈಕಿ ನಾಲ್ವರು ಆರೋಪಿಗಳು ಈ ಹಿಂದೆ ಇದೇ ರೀತಿ ಕಲ್ಲು ತೂರಾಟ ಘಟನೆಯಲ್ಲಿ ಭಾಗಿಯಾಗಿದ್ದರು. ಪುಂಡಾಟದಲ್ಲಿ ಭಾಗಿಯಾಗಿರುವ ಇನ್ನು ಕೆಲ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ ತಿಳಿಸಿದ್ದಾರೆ.

ಗಾರೆ ಕೆಲಸ, ಡ್ರೈವಿಂಗ್ ಮುಂತಾದ ಕೆಲಸ ಮಾಡುವ ಆರೋಪಿಗಳು, ಪುಂಡಾಟದಿಂದ ತಮ್ಮ ಪಾಲಕರಿಗೂ ಕಿರಿಕಿರಿ ಉಂಟು ಮಾಡಿದ್ದಾರೆ. ಹೀಗಾಗಿ, ಇವರಿಗೆ ಸರಿಯಾಗಿ ಬುದ್ಧಿ ಕಲಿಸಿ ಎಂದು ಪಾಲಕರೂ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ