ಹೇಳಿದ್ದು 18,600 ಕೋಟಿ ಎತ್ತಿಟ್ಟಿದ್ದು ಜುಜುಬಿ 1 ಕೋಟಿ, ಇದು ಸಬ್ಅರ್ಬನ್ 'ರೈಲು' ಪುರಾಣ!
18,600 ಕೋಟಿ ರೂ. ವೆಚ್ಚದಲ್ಲಿ ಸಬ್ಅರ್ಬನ್ ರೈಲು ಯೋಜನೆ ಅನುಷ್ಠಾನಗೊಳಿಸುವುದಾಗಿ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಆದರೆ ಪಿಂಕ್ ಬುಕ್ನಲ್ಲಿ ಕೇವಲ ಒಂದು ಕೋಟಿ ರೂ. ನಿಗದಿ ಮಾಡಲಾಗಿದೆ.
Vijaya Karnataka 7 Feb 2020, 7:18 pm
ಬೆಂಗಳೂರು: ಉಪನಗರ ರೈಲು ಯೋಜನೆಗೆ ಪಿಂಕ್ ಬುಕ್ನಲ್ಲಿ 1 ಕೋಟಿ ರೂ. ನಿಗದಿಪಡಿಸಿರುವುದು ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.
18,600 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಪಿಂಕ್ ಬುಕ್ನಲ್ಲಿ ಈ ವರ್ಷಕ್ಕೆ ನೂರಾರು ಕೋಟಿ ರೂ. ಅನುದಾನ ಮೀಸಲಿಡುವ ಮೂಲಕ ಯೋಜನೆ ತ್ವರಿತವಾಗಿ ಅನುಷ್ಠಾನವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಪಿಂಕ್ ಬುಕ್ನಲ್ಲಿ ಕೇವಲ ಒಂದು ಕೋಟಿ ರೂ. ನಿಗದಿ ಮಾಡಲಾಗಿದೆ. ಈ ವರ್ಷವೇ ಕಾಮಗಾರಿ ಆರಂಭವಾಗಲಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಿರುವಾಗ ಯಾವುದಕ್ಕೂ ಸಲ್ಲದ ಮೊತ್ತವನ್ನು ಇಟ್ಟಿರುವುದು ಹೋರಾಟಗಾರರಲ್ಲಿ ನಿರಾಸೆ ಉಂಟು ಮಾಡಿದೆ.
ಯಾವುದಕ್ಕೂ ಸಾಲದ ಅನುದಾನ
ಕೇಂದ್ರ ಸರಕಾರ ಮತ್ತೆ ಬೆಂಗಳೂರನ್ನು ಕಡೆಗಣಿಸಿದೆ ಎಂದು ರೈಲ್ವೆ ಹೋರಾಟಗಾರ ಸಂಜೀವ್ ದ್ಯಾಮಣ್ಣವರ್ ದೂರಿದ್ದಾರೆ. ‘‘ಅತಿ ಕಡಿಮೆ ಅನುದಾನ ನೀಡುವ ಮೂಲಕ ಉಪನಗರ ರೈಲು ಯೋಜನೆ ಮತ್ತೆ ಕಾಗದದಲ್ಲಿಉಳಿಯುವಂತಾಗಿದೆ. ಈ ಕ್ರಮದಿಂದಾಗಿ ಯೋಜನೆ ಜಾರಿ ಇನ್ನೂ ಒಂದು ವರ್ಷ ಮುಂದಕ್ಕೆ ಹೋಗಲಿದೆ. ಲೆವೆಲ್ ಕ್ರಾಸಿಂಗ್ ತೆಗೆದುಹಾಕುವುದು, ಆಟೊಮೆಟಿಕ್ ಸಿಗ್ನಲಿಂಗ್ ವಿಚಾರದಲ್ಲೂ ಕಡೆಗಣಿಸಲಾಗಿದೆ,’’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರೈಲ್ವೆ ವೇದಿಕೆ ಸದಸ್ಯ ಕೃಷ್ಣಪ್ರಸಾದ್, ‘‘ನಾವು ಹೆಚ್ಚು ಅನುದಾನ ನಿರೀಕ್ಷಿಸಿದ್ದು, ಈಗ ನಿರಾಸೆಯಾಗಿದೆ,’’ ಎಂದು ತಿಳಿಸಿದ್ದಾರೆ.
18,600 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸುವುದಾಗಿ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಪಿಂಕ್ ಬುಕ್ನಲ್ಲಿ ಈ ವರ್ಷಕ್ಕೆ ನೂರಾರು ಕೋಟಿ ರೂ. ಅನುದಾನ ಮೀಸಲಿಡುವ ಮೂಲಕ ಯೋಜನೆ ತ್ವರಿತವಾಗಿ ಅನುಷ್ಠಾನವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಪಿಂಕ್ ಬುಕ್ನಲ್ಲಿ ಕೇವಲ ಒಂದು ಕೋಟಿ ರೂ. ನಿಗದಿ ಮಾಡಲಾಗಿದೆ. ಈ ವರ್ಷವೇ ಕಾಮಗಾರಿ ಆರಂಭವಾಗಲಿದೆ ಎಂದು ಜನಪ್ರತಿನಿಧಿಗಳು ಹೇಳುತ್ತಿರುವಾಗ ಯಾವುದಕ್ಕೂ ಸಲ್ಲದ ಮೊತ್ತವನ್ನು ಇಟ್ಟಿರುವುದು ಹೋರಾಟಗಾರರಲ್ಲಿ ನಿರಾಸೆ ಉಂಟು ಮಾಡಿದೆ.
ಯಾವುದಕ್ಕೂ ಸಾಲದ ಅನುದಾನ
ಕೇಂದ್ರ ಸರಕಾರ ಮತ್ತೆ ಬೆಂಗಳೂರನ್ನು ಕಡೆಗಣಿಸಿದೆ ಎಂದು ರೈಲ್ವೆ ಹೋರಾಟಗಾರ ಸಂಜೀವ್ ದ್ಯಾಮಣ್ಣವರ್ ದೂರಿದ್ದಾರೆ. ‘‘ಅತಿ ಕಡಿಮೆ ಅನುದಾನ ನೀಡುವ ಮೂಲಕ ಉಪನಗರ ರೈಲು ಯೋಜನೆ ಮತ್ತೆ ಕಾಗದದಲ್ಲಿಉಳಿಯುವಂತಾಗಿದೆ. ಈ ಕ್ರಮದಿಂದಾಗಿ ಯೋಜನೆ ಜಾರಿ ಇನ್ನೂ ಒಂದು ವರ್ಷ ಮುಂದಕ್ಕೆ ಹೋಗಲಿದೆ. ಲೆವೆಲ್ ಕ್ರಾಸಿಂಗ್ ತೆಗೆದುಹಾಕುವುದು, ಆಟೊಮೆಟಿಕ್ ಸಿಗ್ನಲಿಂಗ್ ವಿಚಾರದಲ್ಲೂ ಕಡೆಗಣಿಸಲಾಗಿದೆ,’’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರೈಲ್ವೆ ವೇದಿಕೆ ಸದಸ್ಯ ಕೃಷ್ಣಪ್ರಸಾದ್, ‘‘ನಾವು ಹೆಚ್ಚು ಅನುದಾನ ನಿರೀಕ್ಷಿಸಿದ್ದು, ಈಗ ನಿರಾಸೆಯಾಗಿದೆ,’’ ಎಂದು ತಿಳಿಸಿದ್ದಾರೆ.