ಬೆಂಗಳೂರು : ನಗರದ ಶ್ರೀ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯು ಗವಿಗಂಗಾಧರೇಶ್ವರನನ್ನು ಸ್ಪರ್ಶಿಸುವ ಘಳಿಗೆ ಶುಕ್ರವಾರ ಸಂಜೆ ನಡೆಯಿತು. ಗವಿ ಗಂಗಾಧರೇಶ್ವರ ದೇವಾಲಯದ ಬಲಭಾಗದ ಕಿಂಡಿಯಿಂದ ಸೂರ್ಯರಶ್ಮಿ ಪ್ರವೇಶಿಸಿತು. ಆರಂಭದಲ್ಲಿ ನಂದಿವಾಹನವನ್ನು ಸ್ಪರ್ಶಿಸಿದ ಸೂರ್ಯ ರಶ್ಮಿಯು ಕೆಲ ಕ್ಷಣಗಳಲ್ಲೇ ನಂದಿಯ ಎರಡು ಕೊಂಬಿನ ಮುಖಾಂತರ ಶಿವಲಿಂಗದ ಪಾದವನ್ನು ಸ್ಪರ್ಶಿಸಿತು. ಶಿವಲಿಂಗಕ್ಕೆ ಹೆಚ್ಚಿನ ಶಾಖ ಉಂಟಾಗಬಾರದೆಂದು ಅರ್ಚಕರು ಹಾಲಿನ ಅಭಿಷೇಕ ನೆರವೇರಿಸಿದರು. ಈ ವಿಸ್ಮಯಕಾರಿ ಘಳಿಗೆ ಅಪರೂಪದ್ದು. ಈ ಕೌತುಕವು ಸಂಜೆ ಸುಮಾರು 5.14ಕ್ಕೆ ಪ್ರಾರಂಭವಾಗಿ 5.17ರವರೆಗೆ ನಡೆಯಿತು. ಸೂರ್ಯ ರಶ್ಮಿ ಸ್ಪರ್ಶಿಸುವ ವೇಳೆ ಶಿವಲಿಂಗಕ್ಕೆ ವಿಶೇಷ ಬಗೆಯ ಅಭಿಷೇಕಗಳು ನಡೆದವು. ಹಾಲು, ಎಳನೀರು, ಪವಿತ್ರ ಜಲದಿಂದ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ಅರ್ಚಕರಿಂದ ಮಂತ್ರಘೋಷ, ಡೊಳ್ಳು, ನಗಾರಿ, ಗಂಟೆಗಳ ನಾದ ಮೊಳಗಿತು.
ಸೂರ್ಯನು ದಕ್ಷಿಣ ಪಥ ಬದಲಿಸಿ ಉತ್ತರ ಪಥದತ್ತ ಸಾಗುವ ದಿನವೇ ಮಕರ ಸಂಕ್ರಾಂತಿ. ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯುವ ವಿಸ್ಮಯದ ಕೌತುಕದ ಕ್ಷಣಕ್ಕಾಗಿ ಭಕ್ತರು ಬೆಳಗ್ಗೆಯಿಂದಲೇ ಕಾಯುತ್ತಿದ್ದರು. ಜತೆಗೆ ಆ ಎರಡು ನಿಮಿಷದಲ್ಲಿ ಕಾಣುವ ಸೂರ್ಯರಶ್ಮಿ ಎಲ್ಲ ಭಕ್ತರಿಗೂ ಏಕಕಾಲದಲ್ಲಿ ಕಾಣುವಂತೆ ದೊಡ್ಡ ದೊಡ್ಡ ಎಲ್ಇಡಿ ಸ್ಕ್ರೀನ್ಗಳನ್ನು ಅಳವಡಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಈ ವ್ಯವಸ್ಥೆಗಳಿಗೆ ಅವಕಾಶವಿರಲಿಲ್ಲ. ಭಕ್ತರ ಪ್ರವೇಶಕ್ಕೂ ಅವಕಾಶ ಇರಲಿಲ್ಲ.
ಗವಿ ಗಂಗಾಧರೇಶ್ವರನನ್ನು ಸ್ಪರ್ಶಿಸದ ಸೂರ್ಯರಶ್ಮಿ..! 53 ವರ್ಷಗಳ ಇತಿಹಾಸದಲ್ಲಿ ಇಂಥ ಘಟನೆ ಇದೇ ಮೊದಲು.!
ಕಳೆದ ವರ್ಷ ಮೋಡದಿಂದಾಗಿ ಈ ವಿಸ್ಮಯ ನಡೆದಿರಲಿಲ್ಲ. ಹೀಗಾಗಿ, ಭಕ್ತರು ಟಿವಿಗಳಲ್ಲೇ ಸೂರ್ಯರಶ್ಮಿಯ ಪ್ರಭಾವವನ್ನು ಕಣ್ತುಂಬಿಕೊಂಡರು. ಸಂಕ್ರಾಂತಿ ಹಬ್ಬಕ್ಕೆ ಒಂದು ದಿನ ಮೊದಲು ಅಂದರೆ ಜ.14ರಂದೇ ಸೂರ್ಯಾಭಿಷೇಕವಾಗಿತ್ತು.
ಸ್ವಾಮಿಗೆ ಅಲಂಕಾರ ಮಾಡುವುದಿಲ್ಲ:
ಮಕರ ಸಂಕ್ರಮಣದ ದಿನ ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುತ್ತಾನೆ. ಈ ಸಂದರ್ಭದಲ್ಲಿ ಸಂಪೂರ್ಣ ಸೂರ್ಯನ ಬೆಳಕನ್ನು ಭಕ್ತರು ಸವಿಯುವುದಕ್ಕೋಸ್ಕರ ಈ ಸಂದರ್ಭದಲ್ಲಿ ಶಿವಲಿಂಗಕ್ಕೆ ಯಾವುದೇ ಅಲಂಕಾರ ಮಾಡುವುದಿಲ್ಲ.
ಸೂರ್ಯನು ದಕ್ಷಿಣ ಪಥ ಬದಲಿಸಿ ಉತ್ತರ ಪಥದತ್ತ ಸಾಗುವ ದಿನವೇ ಮಕರ ಸಂಕ್ರಾಂತಿ. ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯುವ ವಿಸ್ಮಯದ ಕೌತುಕದ ಕ್ಷಣಕ್ಕಾಗಿ ಭಕ್ತರು ಬೆಳಗ್ಗೆಯಿಂದಲೇ ಕಾಯುತ್ತಿದ್ದರು. ಜತೆಗೆ ಆ ಎರಡು ನಿಮಿಷದಲ್ಲಿ ಕಾಣುವ ಸೂರ್ಯರಶ್ಮಿ ಎಲ್ಲ ಭಕ್ತರಿಗೂ ಏಕಕಾಲದಲ್ಲಿ ಕಾಣುವಂತೆ ದೊಡ್ಡ ದೊಡ್ಡ ಎಲ್ಇಡಿ ಸ್ಕ್ರೀನ್ಗಳನ್ನು ಅಳವಡಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಈ ವ್ಯವಸ್ಥೆಗಳಿಗೆ ಅವಕಾಶವಿರಲಿಲ್ಲ. ಭಕ್ತರ ಪ್ರವೇಶಕ್ಕೂ ಅವಕಾಶ ಇರಲಿಲ್ಲ.
ಗವಿ ಗಂಗಾಧರೇಶ್ವರನನ್ನು ಸ್ಪರ್ಶಿಸದ ಸೂರ್ಯರಶ್ಮಿ..! 53 ವರ್ಷಗಳ ಇತಿಹಾಸದಲ್ಲಿ ಇಂಥ ಘಟನೆ ಇದೇ ಮೊದಲು.!
ಕಳೆದ ವರ್ಷ ಮೋಡದಿಂದಾಗಿ ಈ ವಿಸ್ಮಯ ನಡೆದಿರಲಿಲ್ಲ. ಹೀಗಾಗಿ, ಭಕ್ತರು ಟಿವಿಗಳಲ್ಲೇ ಸೂರ್ಯರಶ್ಮಿಯ ಪ್ರಭಾವವನ್ನು ಕಣ್ತುಂಬಿಕೊಂಡರು. ಸಂಕ್ರಾಂತಿ ಹಬ್ಬಕ್ಕೆ ಒಂದು ದಿನ ಮೊದಲು ಅಂದರೆ ಜ.14ರಂದೇ ಸೂರ್ಯಾಭಿಷೇಕವಾಗಿತ್ತು.
ಸ್ವಾಮಿಗೆ ಅಲಂಕಾರ ಮಾಡುವುದಿಲ್ಲ:
ಮಕರ ಸಂಕ್ರಮಣದ ದಿನ ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸುತ್ತಾನೆ. ಈ ಸಂದರ್ಭದಲ್ಲಿ ಸಂಪೂರ್ಣ ಸೂರ್ಯನ ಬೆಳಕನ್ನು ಭಕ್ತರು ಸವಿಯುವುದಕ್ಕೋಸ್ಕರ ಈ ಸಂದರ್ಭದಲ್ಲಿ ಶಿವಲಿಂಗಕ್ಕೆ ಯಾವುದೇ ಅಲಂಕಾರ ಮಾಡುವುದಿಲ್ಲ.