ಆ್ಯಪ್ನಗರ

ಬೆಂಗಳೂರು:ಗವಿಗಂಗಾಧರನ‌ ಸನ್ನಿಧಿಯಲ್ಲಿ ಇಂದು ಸಂಜೆ ಲಿಂಗ ಸ್ಪರ್ಶಿಸಲಿದ್ದಾನೆ ಸೂರ್ಯ, ಕೌತುಕ ನೋಡಿ!

ಸೂರ್ಯ ರಶ್ಮಿ ಬೀಳುವ ಸಮಯದಲ್ಲಿ ದೇವರಿಗೆ ಕ್ಷೀರಾಭಿಷೇಕ ನಡೆಯಲಿದೆ. ನಂತರ ಶಿವನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತೆ. ಅದೇರೀತಿ ದೇವರ ಮೇಲೆ ಹೆಚ್ಚು ಕಾಲ ಸೂರ್ಯ ರಶ್ಮಿ ಉಳಿಯಬಾರದು ಅನ್ನೋ ನಂಬಿಕೆ ಇದೆ. ಕಳೆದ ವರ್ಷ 1 ನಿಮಿಷ 3 ಸೆಕೆಂಡುಗಳವರೆಗೆ ಸೂರ್ಯ ರಶ್ಮಿ ದೇವರ ಮೇಲೆ ಇತ್ತು.

Vijaya Karnataka Web 14 Jan 2021, 3:05 pm
ಬೆಂಗಳೂರು: ಉತ್ತರಾಯಣ ಕಾಲ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಕರಣ ಸಂಕ್ರಮಣವಾದ ಇಂದು ಸೂರ್ಯ ತನ್ನ ಪಥ ಬದಲಿಸುವ ಹಿನ್ನೆಲೆ ಬೆಂಗಳೂರಿನ ಗುಟ್ಟಳ್ಳಿಯ ಗವಿಗಂಗಾಧರನನ್ನ ಸೂರ್ಯರಶ್ಮಿ ಸ್ಪರ್ಶಿಸಲಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮಕರ ಸಂಕ್ರಾಂತಿ ದಿನ‌ ಸೂರ್ಯ ರಶ್ಮಿ ‌ಶಿವನನ್ನ ಸ್ಪರ್ಶಿಸಲಿದೆ.
Vijaya Karnataka Web Gavigangadhara temple


ಸಂಜೆ 5.20 ರಿಂದ 5.37 ರ ನಡುವೆ ಸೂರ್ಯನು ದೇವರನ್ನ ಸ್ಪರ್ಶಿಸಲಿದ್ದಾನೆ. ಈ‌ ಹಿನ್ನೆಲೆ ಗವಿಗಂಗಾಧರ ಸನ್ನಿಧಿಯಲ್ಲಿ ಸಕಲ‌ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆ ನಡೆದಿದೆ. ಶಿವನಿಗೆ ರುದ್ರಾಭಿಷೇಕ ಸೇರಿ‌ ವಿಶೇಷ ಪೂಜಾ ಕೈಂಕರ್ಯ ಜರುಗಿದೆ. ಇನ್ನು ಮುಂಜಾನೆಯಿಂದಲೇ ದೇವಾಲಯಕ್ಕೆ ಭಕ್ತ ಜನರು ಹರಿದು ಬರುತ್ತಿದ್ದಾರೆ.

ಇನ್ನು ಸೂರ್ಯ ರಶ್ಮಿ ಬೀಳುವ ಸಮಯದಲ್ಲಿ ದೇವರಿಗೆ ಕ್ಷೀರಾಭಿಷೇಕ ನಡೆಯಲಿದೆ. ನಂತರ ಶಿವನಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗುತ್ತೆ. ಅದೇರೀತಿ ದೇವರ ಮೇಲೆ ಹೆಚ್ಚು ಕಾಲ ಸೂರ್ಯ ರಶ್ಮಿ ಉಳಿಯಬಾರದು ಅನ್ನೋ ನಂಬಿಕೆ ಇದೆ. ಕಳೆದ ವರ್ಷ 1 ನಿಮಿಷ 3 ಸೆಕೆಂಡುಗಳವರೆಗೆ ಸೂರ್ಯ ರಶ್ಮಿ ದೇವರ ಮೇಲೆ ಇತ್ತು.

ಬನ್ನಂಜೆ ಆಶಯದಂತೆ ಅಮೆರಿಕದಲ್ಲಿ ಮಧ್ವರ ಪ್ರತಿಮೆ ಪ್ರತಿಷ್ಠಾಪನೆ: ಪುತ್ತಿಗೆ ಶ್ರೀ

ಅಲ್ಲದೆ ನಿನ್ನೆಯೇ ಸೂರ್ಯ ರಶ್ಮಿ ಸ್ಪರ್ಶಿಸಬೇಕಿತ್ತು. ಆದ್ರೆ ಒಂದು ದಿನ ತಡವಾಗಿ ಸ್ಪರ್ಶಿಸುತ್ತಿದೆ. ಹೀಗಾಗಿ ಈ ಬಾರಿಯೂ ದೇವರ ಮೇಲೆ ಸೂರ್ಯ ರಶ್ಮಿ ಹೆಚ್ಚು ಕಾಲ ಉಳಿಯೋ ಸಾಧ್ಯತೆ ಇದೆ. ಇತಿಹಾಸ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನಲ್ಲಿ ಇಂದು ನಡೆಯುವ ವಿಸ್ಮಯ ವೀಕ್ಷಣೆಗೆ ಭಕ್ತರು ಆಗಮಿಸುತ್ತಾರೆ.‌ ಸೂರ್ಯನ ಕಿರಣ ಶಿವಲಿಂಗವನ್ನ ಚುಂಬಿಸೋ ಕ್ಷಣವನ್ನ ನೋಡಲು ಭಕ್ತರು ಕಾರದಿಂದ ಕಾಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ