ಆ್ಯಪ್ನಗರ

ಕ್ರಿಸ್‌ಮಸ್‌ ರಜೆಗೆ ಫಾರಿನ್ ಟ್ರಿಪ್ ಹೋಗ್ಬೇಕಾ? ಟೆಕ್ಕಿ ದಂಪತಿಗೆ ಲಕ್ಷಾಂತರ ರೂ. ದೋಖಾ ಆಗಿದೆ ಹುಷಾರ್!

ಟ್ರಿಪ್‌ ವೈಸರ್‌ ವೆಬ್‌ಸೈಟ್‌ನ ಏಜೆಂಟರು ಎಂದು ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದ ಇಬ್ಬರೂ ಖದೀಮರು, ಗ್ರಾಹಕರಾದ ರಂಜಿತಾ ಅವರನ್ನು ನಂಬಿಸಿ ಹಣ ಲಪಟಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.

Vijaya Karnataka Web 16 Dec 2019, 2:40 pm
ಬೆಂಗಳೂರು: ಕ್ರಿಸ್‌ಮಸ್‌ ಸರಣಿ ರಜೆ ಬರ್ತಿದೆ. ಫಾರಿನ್ ಟ್ರಿಪ್ ಹೋಗಲು ಪ್ಲಾನ್ ಮಾಡ್ತಿದ್ರೆ ಒಂದು ಕ್ಷಣ ಯೋಚನೆ ಮಾಡಿ! ಅದ್ರಲ್ಲೂ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವ ಮುನ್ನ ಎಚ್ಚರಿಕೆಯಿಂದಿರಿ! ಯಾಕಂದ್ರೆ, ಇಲ್ಲೊಂದು ಜೋಡಿ ಥೈಲ್ಯಾಂಡ್‌ಗೆ ಹೋಗುವ ಕನಸು ಕಂಡು ತಾಯಿನಾಡಿನಲ್ಲೇ ಲಕ್ಷಾಂತರ ರೂಪಾಯಿ ಕಳೆದುಕೊಂಡಿದೆ!
Vijaya Karnataka Web image


ರಂಜಿತಾ ಹಾಗೂ ಅವರ ಟೆಕ್ಕಿ ಪತಿ ಹಾಗೂ ಮಕ್ಕಳೊಂದಿಗೆ ಥೈಲ್ಯಾಂಡ್‌ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಿದ್ದರು. ಕ್ರಿಸ್‌ಮಸ್ ರಜೆಯ ಮಜಾ ಸವಿಯಲು ಥೈಲ್ಯಾಂಡ್‌ ಸೂಕ್ತ ತಾಣ ಎಂದುಕೊಂಡಿದ್ದರು. ಇದಕ್ಕಾಗಿ ಆನ್‌ಲೈನ್ ಟ್ರಾವೆಲ್ ಪೋರ್ಟಲ್‌ಗಳನ್ನ ಎಡತಾಕಿದಾಗ ಟ್ರಿಪ್‌ ವೈಸರ್ ಎಂಬ ವೆಬ್‌ಸೈಟ್‌ನಲ್ಲಿ ಅವರ ಎಲ್ಲ ಅಗತ್ಯತೆಗಳಿಗೆ ತಕ್ಕಂತೆ ಪ್ಯಾಕೇಜ್‌ ಒಂದು ಲಭ್ಯವಾಯ್ತು. ಈ ಟ್ರಿಪ್‌ ವೈಸರ್‌ ವೆಬ್‌ಸೈಟ್‌ನಲ್ಲಿ ನೀರಜ್‌ ವರ್ಮಾ ಹಾಗೂ ಭುವನ್ ಕನ್ವಲ್ ಎಂಬಿಬ್ಬರು ಏಜೆಂಟ್‌ಗಳ ನಂಬರ್ ಕೂಡಾ ಸಿಕ್ತು.

ರಂಜಿತಾ ಅವರ ಜೊತೆ ನಯವಾಗಿ ಮಾತನಾಡಿದ ಇಬ್ಬರೂ ಏಜೆಂಟ್‌ಗಳು, ಗೂಗಲ್‌ ಪೇ ಮೂಲಕ ಸಾವಿರಾರು ರೂಪಾಯಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಗೂಗಲ್‌ ಪೇ ಮೂಲಕ ನೀವು ಹಣ ರವಾನಿಸಿ, ಮೂರೇ ದಿನಗಳಲ್ಲಿ ಟಿಕೆಟ್‌ ಪಡೆಯಿರಿ ಎಂದು ನಂಬಿಸಿದ ಇಬ್ಬರೂ ನಯವಂಚಕರು, ಹಣ ಪಡೆದ ಮೇಲೆ ಫೋನ್ ಸ್ವಿಚ್ಡ್‌ ಆಫ್‌ ಮಾಡಿಕೊಂಡರು!

ಚಳಿಗಾಲದ ಜಡಿಮಳೆ ರಾತ್ರಿಯಲ್ಲಿ ಗೆಳತಿ ಜೊತೆ ವೈನ್ ಕುಡಿಯೋ ಆಸೆ! 93 ಸಾವಿರ ರೂ. ಕಳೆದುಕೊಂಡ ಟೆಕ್ಕಿ!

ಮೊದಲಿಗೆ 5 ಸಾವಿರ ರೂ ಹಣವನ್ನು ಹಾಕಿದ್ದ ರಂಜಿತಾ, ಕೆಲವು ದಿನಗಳ ಬಳಿಕ 93,838 ರೂ. ಹಣವನ್ನು ವಂಚಕರ ಗೂಗಲ್‌ ಪೇ ಖಾತೆಗೆ ರವಾನಿಸಿದ್ದರು. ವಾರ ಕಳೆದರೂ ಟಿಕೆಟ್ ಕೈಸೇರದಿದ್ದಾಗ ಇಬ್ಬರೂ ಖದೀಮರನ್ನು ಸಂಪರ್ಕಿಸಲು ರಂಜಿತಾ ಪ್ರಯತ್ನಿಸಿದರು. ಆದ್ರೆ, ಇಬ್ಬರೂ ವಂಚಕರ ನಂಬರ್ ಸ್ವಿಚ್ ಆಫ್ ಆಗಿತ್ತು.

ರಸ್ತೆಯಲ್ಲಿ ನಿಂತಿದ್ದ ವಿಧವೆ ಮೇಲೆ ಗ್ಯಾಂಗ್‌ ರೇಪ್: ಪೈಪೋಟಿಗೆ ಬಿದ್ದ ಸ್ನೇಹಿತನ ಮರ್ಡರ್!

ಟ್ರಿಪ್‌ ವೈಸರ್‌ ವೆಬ್‌ಸೈಟ್‌ನ ಏಜೆಂಟರು ಎಂದು ತಮ್ಮನ್ನು ತಾವು ಪರಿಚಯಿಸಿಕೊಂಡಿದ್ದ ಇಬ್ಬರೂ ಖದೀಮರು, ರಂಜಿತಾ ಅವರನ್ನು ನಂಬಿಸಿ ಹಣ ಲಪಟಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಟುಂಬ ಸಮೇತ 5 ದಿನಗಳ ಥೈಲ್ಯಾಂಡ್ ಟ್ರಿಪ್ ಕನಸು ಕಂಡಿದ್ದ ರಂಜಿತಾ, 3 ಟಿಕೆಟ್ ಬುಕ್ ಮಾಡಿ ಪ್ರವಾಸದ ತಯಾರಿಯಲ್ಲಿದ್ದರು. ಇಬ್ಬರೂ ವಂಚಕರು ದಿಲ್ಲಿಯಿಂದ ಮಾತನಾಡುತ್ತಿರುವುದಾಗಿ ರಂಜಿತಾ ಅವರಿಗೆ ನಂಬಿಸಿದ್ದರು. ಈ ಸಂಬಂಧ ಟ್ರಿಪ್ ವೈಸರ್‌ ವೆಬ್‌ಸೈಟ್‌ಗೆ ಇಮೇಲ್ ಮಾಡಿದಾಗ ಅವರೂ ಕೂಡಾ ಪೊಲೀಸರನ್ನು ಸಂಪರ್ಕಿಸುವಂತೆ ಹೇಳಿದ್ದಾರೆ.

'ಮೊಬೈಲ್ ಕಾಮುಕ'ನ ಕರಾಮತ್ತು! ಬೆಡ್‌ರೂಂ, ಬಾತ್‌ರೂಂ ಕಿಟಕಿಯಲ್ಲಿ ಕ್ಯಾಮೆರಾ ಇಣುಕುತ್ತೆ ಹುಷಾರ್!

ಇದೀಗ ಬೆಳ್ಳಂದೂರು ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ಸೈಬರ್‌ ಕ್ರೈಂ ವಿಭಾಗಕ್ಕೆ ಪ್ರಕರಣದ ತನಿಖೆಯನ್ನು ಹಸ್ತಾಂತರಿಸಿದ್ದಾರೆ.

ಕಾಲಿಂಗ್ ಬೆಲ್ ಒತ್ತಿದಾಗ ಕಳ್ಳ ಬಾಗಿಲು ತೆರೆದ! ಇದು ಕುಡುಕ ಮಹಾಶಯನ ಹೈಡ್ರಾಮಾ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ