ಆ್ಯಪ್ನಗರ

ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಧ್ಯೆ ಜಟಾಪಟಿ

ರಾಜಾಜಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್‌ಕುಮಾರ್‌ ಅವರ ಪುತ್ರಿ ಡಾ.ದಿಶಾ ವಿರುದ್ಧ ಹಣ ಹಂಚಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.

Vijaya Karnataka 10 May 2018, 5:00 am
ಬೆಂಗಳೂರು: ರಾಜಾಜಿನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್‌ಕುಮಾರ್‌ ಅವರ ಪುತ್ರಿ ಡಾ.ದಿಶಾ ವಿರುದ್ಧ ಹಣ ಹಂಚಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ.
Vijaya Karnataka Web between congress and bjp workers
ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಧ್ಯೆ ಜಟಾಪಟಿ


ಬುಧವಾರ ಸಂಜೆ ರಾಜಾಜಿನಗರದ ಮನೆಯೊಂದರಲ್ಲಿ ದಿಶಾ, ಪಕ್ಷದ ಕೆಲ ಕಾರ್ಯಕರ್ತರೊಡನೆ ಸಾಮಾಜಿಕ ಜಾಲತಾಣದ ಕುರಿತು ಚರ್ಚಿಸುವ ವೇಳೆ ಅಲ್ಲಿಗೆ ಆಗಮಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಮತದಾರರಿಗೆ ಹಣ ಹಂಚುತ್ತಿದ್ದಾರೆಂದು ಆರೋಪಿಸಿದರು. ಇದನ್ನು ದಿಶಾ ನಿರಾಕರಿಸಿದರೂ, ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿಯನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾದರು. ಆದರೆ, ಪ್ರಕರಣ ರಾಜಕೀಯ ತಿರುವು ಪಡೆದು ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ಆರೋಪ, ಪ್ರತ್ಯಾರೋಪಕ್ಕೆ ವೇದಿಕೆ ಕಲ್ಪಿಸಿತು. ದಿಶಾ ಇದ್ದ ಕಚೇರಿ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಸೇರಿದ್ದಾಗಿದೆ. ಅಲ್ಲಿ ಲಕ್ಷ ರೂ.ಗಿಂತಲೂ ಹೆಚ್ಚಿನ ಹಣ ಇತ್ತು. ಈ ಹಣವನ್ನು ನಾವು ಬರುತ್ತಿದ್ದಂತೆಯೇ ಹೊರಗಡೆ ಸಾಗಿಸಲಾಗಿದೆ. ಮತದಾರರನ್ನು ಸೆಳೆಯಲೆಂದೇ ಹಣ ಹಂಚಿಕೆಗೆ ಪಿತೂರಿ ನಡೆದಿತ್ತು ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆರೋಪಿಸಿದ್ದಾರೆ.

ಆರೋಪ ನಿರಾಕರಣೆ

ಪ್ರಕರಣ ಬಹಿರಂಗವಾಗುತ್ತಿದ್ದಂತೆ ಎಚ್ಚೆತ್ತ ಸುರೇಶ್‌ಕುಮಾರ್‌, ತಮ್ಮ ಪುತ್ರಿ ಹಣ ಹಂಚಿಕೆಯಲ್ಲಿ ತೊಡಗಿಲ್ಲ. ಪಕ್ಷದಿಂದ ಮತದಾರರಿಗೆ ಹಣ ನೀಡುತ್ತಿಲ್ಲ. ಇದೆಲ್ಲಾ ಕಾಂಗ್ರೆಸ್‌ ಕಾರ್ಯಕರ್ತರು ನಡೆಸಿರುವ ಅಪಪ್ರಚಾರ ಎಂಬುದಾಗಿ ಫೇಸ್‌ಬುಕ್‌ನಲ್ಲಿ ಸಮಜಾಯಿಷಿ ನೀಡಿದರು. ಆದರೂ ಕಾಂಗ್ರೆಸ್‌ ಕಾರ್ಯಕರ್ತರು ಆರೋಪದ ಸುರಿಮಳೆಗೈದರು. ಸ್ವತಃ ದಿಶಾ ಅವರೇ ''ತಾನು ಹಣ ಹಂಚಿಕೆ ಮಾಡಿಲ್ಲ. ಪ್ರಚಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಪಡೆಯುವ ವೇಳೆ ಕಚೇರಿಯ ಒಳ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತರು ತಾನು ಹೇಳುವ ಮಾತು ಕೇಳದೆ ರಾದ್ಧಾಂತ ಮಾಡಿದರು''ಎಂದು ಪ್ರತಿಕ್ರಿಯಿಸಿದರು.

ಪುತ್ರಿ ಹೇಳಿಕೆಯನ್ನು ಅನುಮೋದಿಸಿದ ಸುರೇಶ್‌ಕುಮಾರ್‌ ''ಕಾಂಗ್ರೆಸ್‌ ಕಾರ್ಯಕರ್ತರು ಹತಾಶೆಗೆ ಒಳಗಾಗಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಹಣ ಹಂಚಿಕೆ ಮಾಡದಿದ್ದರೂ, ಮಾಧ್ಯಮಗಳಿಗೆ ಸುಳ್ಳು ಸುದ್ದಿ ರವಾನಿಸಿದ್ದಾರೆ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ