ಆ್ಯಪ್ನಗರ

ಕೊರೊನಾ ಲಸಿಕೆ ನೋಂದಣಿ ಹೆಸರಲ್ಲಿ ಕರೆ ಬಂದರೆ ಎಚ್ಚರ, ಖಾಸಗಿ ಮಾಹಿತಿ ಕೊಟ್ಟರೆ ಪಂಗನಾಮ ಗ್ಯಾರಂಟಿ!

ವಂಚಕರ ಬಲೆಗೆ ಬಿದ್ದ ಸ್ನೇಹಿತರೊಬ್ಬರ ತಂದೆ ಎರಡೇ ತಾಸಿನಲ್ಲಿ 12 ಲಕ್ಷ ರೂ. ಕಳೆದುಕೊಂಡಿ ದ್ದಾರೆ ಎಂದು ಮಹಾರಾಷ್ಟ್ರ ಮೂಲದ ಖಾಸಗಿ ಕಂಪನಿಯ ಮುಖ್ಯಸ್ಥ ಮಿಲಿಂದ್‌ ಕ್ಷೀರಸಾಗರ್‌ ಎಂಬುವವರು ಎಚ್ಚರಿಕೆ ನೀಡಿದ್ದಾರೆ. ಖಾಸಗಿ ಮಾಹಿತಿ ಕೇಳುತ್ತಾರೆ: ಲಸಿಕೆಗಾಗಿ ಹೆಸರು ನೋಂದಾಯಿಸಿಕೊಳ್ಳಲು ಸೈಬರ್‌ ಖದೀಮರು ನಿಮ್ಮ ಬ್ಯಾಂಕ್‌, ಇ- ವ್ಯಾಲೆಟ್‌, ಕಾರ್ಡ್‌ ವಿವರಗಳನ್ನು ಕೇಳಬಹುದು. ಇಂತಹ ಯಾವುದೇ ಸಂದೇಶ ನಂಬಬಾರದು ಎಂದು ಸೈಬರ್‌ ತಜ್ಞರು ಮನವಿ ಮಾಡಿದ್ದಾರೆ.

Vijaya Karnataka Web 18 Jan 2021, 6:54 am
ಬೆಂಗಳೂರು: ಕೋವಿಡ್‌-19 ಲಸಿಕೆ ವಿತರಣೆ ಅಭಿಯಾನ ಆರಂಭವಾಗುತ್ತಿದ್ದಂತೆಯೇ ಆನ್‌ಲೈನ್‌ ಖದೀಮರು ಸಕ್ರಿಯರಾಗಿದ್ದು, ಲಸಿಕೆಗಾಗಿ ನೋಂದಣಿ ನೆಪದಲ್ಲಿ ಮೆಸೇಜ್‌, ಇ-ಮೇಲ್‌ ಕಳುಹಿಸಿ ಸಾರ್ವಜನಿಕರಿಂದ ಅದರಲ್ಲೂ ವೃದ್ಧರಿಂದ ಹಣ ದೋಚಲು ಯತ್ನಿಸುತ್ತಿರುವುದು ಬೆಳಕಿಗೆ ಬಂದಿದೆ.
Vijaya Karnataka Web cyber crime con
Representative image


ಹೀಗಾಗಿ ಆನ್‌ಲೈನ್‌ ವಂಚಕರ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ. ''ಭಾರತೀಯ ಔಷಧ ಪ್ರಾಧಿಕಾರದ ಹೆಸರಿನಲ್ಲಿ ಹಿರಿಯ ನಾಗರಿಕರಿಗೆ ಕರೆ ಮಾಡುತ್ತಿರುವ ಖದೀಮರು, ಲಸಿಕೆ ನೀಡಲು ನಿಮ್ಮ ಹೆಸರು ಅಂತಿಮಗೊಂಡಿದೆ. ನೋಂದಣಿ ಮಾಡಿಕೊಳ್ಳಲು ಆಧಾರ್‌ ಸಂಖ್ಯೆ, ಬ್ಯಾಂಕ್‌ ವಿವರ, ಒಟಿಪಿ ನೀಡಿ ಎಂದು ಹೇಳಿ ಬ್ಯಾಂಕ್‌ಗೆ ಖಾತೆಗೆ ಕನ್ನ ಹಾಕುತ್ತಿದ್ದಾರೆ.

ಇಂತಹ ವಂಚಕರ ಬಲೆಗೆ ಬಿದ್ದ ಸ್ನೇಹಿತರೊಬ್ಬರ ತಂದೆ ಎರಡೇ ತಾಸಿನಲ್ಲಿ 12 ಲಕ್ಷ ರೂ. ಕಳೆದುಕೊಂಡಿ ದ್ದಾರೆ'' ಎಂದು ಮಹಾರಾಷ್ಟ್ರ ಮೂಲದ ಖಾಸಗಿ ಕಂಪನಿಯ ಮುಖ್ಯಸ್ಥ ಮಿಲಿಂದ್‌ ಕ್ಷೀರಸಾಗರ್‌ ಎಂಬುವವರು ಎಚ್ಚರಿಕೆ ನೀಡಿದ್ದಾರೆ. ಖಾಸಗಿ ಮಾಹಿತಿ ಕೇಳುತ್ತಾರೆ: ಲಸಿಕೆಗಾಗಿ ಹೆಸರು ನೋಂದಾಯಿಸಿಕೊಳ್ಳಲು ಸೈಬರ್‌ ಖದೀಮರು ನಿಮ್ಮ ಬ್ಯಾಂಕ್‌, ಇ- ವ್ಯಾಲೆಟ್‌, ಕಾರ್ಡ್‌ ವಿವರಗಳನ್ನು ಕೇಳಬಹುದು. ಇಂತಹ ಯಾವುದೇ ಸಂದೇಶ ನಂಬಬಾರದು ಎಂದು ಸೈಬರ್‌ ತಜ್ಞರು ಮನವಿ ಮಾಡಿದ್ದಾರೆ.

ಜೆಡಿಎಸ್‌ ಜತೆ ಮೈತ್ರಿ ಪ್ರಸ್ತಾಪ ಇಲ್ಲ ಎಂದ್ರಾ ಅಮಿತ್‌ ಶಾ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ