ಆ್ಯಪ್ನಗರ

ಬಿಡಿಎ ಆಯುಕ್ತರಿಂದ ಸುತ್ತೋಲೆ, ವೇತನಕ್ಕೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಂದ ಸುತ್ತೋಲೆ ಪ್ರಕಟ, ಈ ತಿಂಗಳಿನಿಂದಲೇ ಅನ್ವಯ.ವೇತನಕ್ಕೆ ಬಯೋಮೆಟ್ರಿಕ್‌ ಹಾಜರಾತಿ ಕಡ್ಡಾಯ.

Vijaya Karnataka Web 12 Feb 2020, 9:20 am
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ/ಸಿಬ್ಬಂದಿಗಳ ಹಾಜರಾತಿ ಬಯೋಮೆಟ್ರಿಕ್‌ ವ್ಯವಸ್ಥೆಗೆ ಅಳವಡಿಸಿದ್ದರೆ ಮಾತ್ರ ಸಂಬಳ ಪಡೆಯಲು ಅರ್ಹರಾಗಿರುತ್ತಾರೆ. ತಪ್ಪಿದ್ದಲ್ಲಿ ವೇತನ ತಡೆಹಿಡಿಯುವ ಖಡಕ್‌ ಎಚ್ಚರಿಕೆಯನ್ನು ಪ್ರಾಧಿಕಾರದ ಆಯುಕ್ತರು ನೀಡಿದ್ದಾರೆ.
Vijaya Karnataka Web biometric attendance system


ಈ ಸಂಬಂಧ ಆಯುಕ್ತರ ಕಚೇರಿಯಿಂದ ಸುತ್ತೋಲೆಯೊಂದು ಪ್ರಕಟವಾಗಿದ್ದು, ಫೆಬ್ರವರಿ ತಿಂಗಳ ಬಯೋಮೆಟ್ರಿಕ್‌ ಹಾಜರಾತಿ ಆಧರಿಸಿ ವೇತನ ಪಾವತಿಸುವ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ. ಕಚೇರಿಗೆ ಬರುವ ಅಧಿಕಾರಿ/ಸಿಬ್ಬಂದಿ ಬೆ.10-10.30ರೊಳಗೆ ಹಾಗೂ ಕಚೇರಿ ಬಿಡುವಾಗ ಸಂ. 5.15-5.30ರ ಅವಧಿಯಲ್ಲಿ ಬೆರಳ ಗುರುತು ನೀಡಬೇಕು. ಈ ಸೂಚನೆಯನ್ನು ಪಾಲಿಸದವರ ವೇತನ ಪಾವತಿಸಬಾರದು ಎಂದು ಪ್ರಾಧಿಕಾರದ ಎಲ್ಲಾವಿಭಾಗಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.

ಮೂಮೆಂಟ್‌ ರಿಜಿಸ್ಟರ್‌ ಪಾಲನೆಗೆ ಸೂಚನೆ:
ಕಚೇರಿ ಸಮಯದಲ್ಲಿ ಕರ್ತವ್ಯದ ಕಾರಣಕ್ಕೆ ನ್ಯಾಯಾಲಯದ ಪ್ರಕರಣಗಳ ವಿಚಾರಣೆಗೆ ಹಾಜರು, ಸ್ಥಳ ಪರಿಶೀಲನೆ, ಸರ್ವೆ ಅಂತಹ ಕಾರ್ಯಕ್ಕೂ ತೆರಳಲು ವಿಭಾಗದ ಮುಖ್ಯಸ್ಥರ ಒಪ್ಪಿಗೆ ಪಡೆಯಬೇಕಾಗುತ್ತದೆ. ಇದಕ್ಕಾಗಿ ಆಯಾ ಕಚೇರಿಗಳಲ್ಲಿ'ಮೂಮೆಂಟ್‌ ರಿಜಿಸ್ಟರ್‌' ಅನ್ನು ತೆರೆದು ಅದರಲ್ಲಿಹೊರ ಹೋಗುವ ಹಾಗೂ ವಾಪಸ್‌ ಬರುವ ಸಮಯವನ್ನು ನಮೂದಿಸುವಂತೆ ಸೂಚಿಸಲಾಗಿದೆ.

ಬಯೋಮೆಟ್ರಿಕ್‌ ಹಾಜರಾತಿ, ಜಿಲ್ಲೆನಂ.1

ಇತ್ತೀಚೆಗೆ ಹಲವು ನೌಕರರ ಹಾಜರಾತಿಯಲ್ಲಿ ಅಶಿಸ್ತು ಹೆಚ್ಚಿತ್ತು. ಕಚೇರಿಯಲ್ಲಿ ಇಲ್ಲದಿದ್ದರೂ, ಸಂಸ್ಥೆಯ ಆವರಣದಲ್ಲಿ ಇದ್ದೇವೆಂದು ತಪ್ಪು ಮಾಹಿತಿ ನೀಡಿ ಸಾರ್ವಜನಿಕರ ಕೆಲಸ ಮಾಡಿಕೊಡದೆ ಸತಾಯಿಸಲಾಗುತ್ತಿತ್ತು. ಈ ಕುರಿತು ನಾಗರಿಕರು ಆಯುಕ್ತರು ಹಾಗೂ ಇತರೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಜತೆಗೆ ಸರಕಾರದ ಮುಖ್ಯ ಕಾರ್ಯದರ್ಶಿ ಕೂಡ ಪ್ರತ್ಯೇಕ ಆದೇಶ ಹೊರಡಿಸಿ ಕಚೇರಿ ಅವಧಿಯಲ್ಲಿ ಸಾರ್ವಜನಿಕರ ಭೇಟಿಗೆ ಕಡ್ಡಾಯವಾಗಿ ಅವಕಾಶ ಮಾಡಿಕೊಟ್ಟು ಅಹವಾಲು ಆಲಿಸಲು ನಿರ್ದೇಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಡಿಎ ಆಯುಕ್ತರು ಇಂತಹ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ