ಆ್ಯಪ್ನಗರ

ಕಡತದಲ್ಲಿ ಕೊಳೆಯುತ್ತಿದೆ ನೈಸ್ ಅಕ್ರಮದ ವರದಿ

ಬೆಂಗಳೂರು ಮೈಸೂರು ಮಧ್ಯೆ ನಿರ್ಮಾಣವಾಗಿರುವ ನೈಸ್ ರಸ್ತೆ ಕಾಮಗಾರಿಯಲ್ಲಿ ಮತ್ತು ಭೂಮಿ ವಶಪಡಿಸಿಕೊಳ್ಳುವಿಕೆಯ ಕುರಿತು 14ನೇ ವಿಧಾನಸಭೆಯ ಸದನ ಸಮಿತಿ ಎರಡು ವರ್ಷದಲ್ಲಿ ಸಿದ್ಧಪಡಿಸಿದ್ದ 400 ಪುಟಗಳ ವರದಿ ಕಡತದಲ್ಲೇ ಕೊಳೆಯುತ್ತಿದೆ.

Vijaya Karnataka Web 28 Jul 2018, 4:32 pm
ಬೆಂಗಳೂರು: ಬೆಂಗಳೂರು ಮೈಸೂರು ಮಧ್ಯೆ ನಿರ್ಮಾಣವಾಗಿರುವ ನೈಸ್ ರಸ್ತೆ ಕಾಮಗಾರಿಯಲ್ಲಿ ಮತ್ತು ಭೂಮಿ ವಶಪಡಿಸಿಕೊಳ್ಳುವಿಕೆಯ ಕುರಿತು 14ನೇ ವಿಧಾನಸಭೆಯ ಸದನ ಸಮಿತಿ ಎರಡು ವರ್ಷದಲ್ಲಿ ಸಿದ್ಧಪಡಿಸಿದ್ದ 400 ಪುಟಗಳ ವರದಿ ಕಡತದಲ್ಲೇ ಕೊಳೆಯುತ್ತಿದೆ.
Vijaya Karnataka Web Nice Road


2016ರಲ್ಲಿ ವರದಿ ಸಲ್ಲಿಕೆಯಾಗಿದ್ದರೂ, ರಾಜ್ಯ ಸರಕಾರ ಆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನೈಸ್ ಎಂಡಿ, ಮಾಜಿ ಶಾಸಕ ಮತ್ತು ಕಾಂಗ್ರೆಸ್‌ ಸದಸ್ಯ ಅಶೋಕ್ ಖೇಣಿ ವಿರುದ್ಧ ಅಂದು ಸಮರ ಸಾರಿದ್ದ ಜೆಡಿಎಸ್‌ ಕೂಡ ಇಂದು ವರದಿ ಬಗ್ಗೆ ಚಕಾರವೆತ್ತುತ್ತಿಲ್ಲ.

ರಾಜ್ಯದಲ್ಲಿ ಕಾಂಗ್ರೆಸ್ ಜತೆಗೂಡಿ ಸರಕಾರ ರಚಿಸಿರುವ ಜೆಡಿಎಸ್‌, ನೈಸ್ ಅಕ್ರಮದ ವರದಿಯ ಕುರಿತು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಸಮ್ಮಿ‍ಶ್ರ ಸರಕಾರದ ಪಾಲುದಾರ ಕಾಂಗ್ರೆಸ್‌ಗೆ ನೈಸ್ ಅಕ್ರಮದ ವರದಿಯಿಂದ ಸಮಸ್ಯೆಯಾಗಬಹುದು ಎಂದು ಸಿಎಂ ಎಚ್‌ಡಿ ಕುಮಾರಸ್ವಾಮಿ ಸುಮ್ಮನಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ನೈಸ್ ರಸ್ತೆ ನಿರ್ಮಾಣಕ್ಕಾಗಿ ರೈತರ ಭೂಮಿ ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಕನಿಷ್ಟ 800 ಎಕರೆ ಭೂಮಿ ಹೆಚ್ಚುವರಿ ವಶವಾಗಿದ್ದು, ಅದನ್ನು ರೈತರಿಗೆ ಹಿಂದಿರುಗಿಸುವಂತೆ ಬಿಜೆಪಿ ಒತ್ತಾಯಿಸುತ್ತಿದೆ.

ಜತೆಗೆ ನೈಸ್ ಅಕ್ರಮದ ವರದಿ ಕುರಿತು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರವನ್ನು ಬಿಜೆಪಿ ಆಗ್ರಹಿಸಿದೆ. ನೈಸ್ ಹಗರಣ ಕುರಿತು ಅಂದು ಪ್ರತಿಭಟನೆ ಮಾಡಿದ್ದ ಜೆಡಿಎಸ್‌ ವರಿಷ್ಟ ಎಚ್‌ ಡಿ ದೇವೇಗೌಡ ಇಂದು ಕಾಂಗ್ರೆಸ್ ಜತೆ ಕೈಜೋಡಿಸಿದ್ದರಿಂದ ನೈಸ್ ಅಕ್ರಮ ಕುರಿತು ಮಾತನಾಡದೆ ಮೌನ ವಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ