ಬೆಂಗಳೂರು: ರಾಜರಾಜೇಶ್ವರನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ದಿನದಿಂದ ದಿನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಸಂಘರ್ಷದ ಕಣವಾಗಿ ಮಾರ್ಪಡುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಶವಂತಪುರದ ಬಿ.ಕೆ.ನಗರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಭಾಷಣಕ್ಕೆ ಅಡ್ಡಿಪಡಿಸಿದ್ದರ ಜೊತೆಗೆ ವಾಹನಗಳಿಗೂ ತಡೆಯೊಡ್ಡಿದ ಘಟನೆ ನಡೆದಿದೆ. ಇದರಿಂದ ಕೆರಳಿದ ಸಿದ್ದರಾಮಯ್ಯ ಅವರು, "ಈ ಗುಂಡಾಗಿರಿಗೆ ಹೆದರಬೇಡಿ, ಈ ರೀತಿ ಮುಂದುವರಿದರೆ ಬಿಜೆಪಿ ಎಲ್ಲಿಯೂ ಸಭೆ ನಡೆಸಲು ಬಿಡುವುದಿಲ್ಲ, ಮೆರವಣಿಗೆಗೂ ಬಿಡುವುದಿಲ್ಲ. ಈ ರೀತಿಯ ದೌರ್ಜನ್ಯಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ. ತಕ್ಷಣವೇ ಅವರನ್ನು ಬಂಧಿಸದಿದ್ದರೆ ಠಾಣೆ ಮುಂದೆ ಧರಣಿ ಮಾಡಬೇಕಾಗುತ್ತದೆ," ಎಂದು ಸ್ಥಳದಲ್ಲೇ ಇದ್ದ ಪೊಲೀಸರಿಗೆ ಎಚ್ಚರಿಕೆ ನೀಡಿದರು.
ಅಷ್ಟೇ ಅಲ್ಲ ಸ್ಥಳದಿಂದ ವಾಪಸ್ ಹೋಗಲು ಒಪ್ಪದ ಸಿದ್ದರಾಮಯ್ಯ, ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಕರೆ ಮಾಡಿ ನಿಮ್ಮ ಮನೆಯ ಮುಂದೆ ಧರಣಿ ನಡೆಸುವುದಾಗಿಯೂ ಎಚ್ಚರಿಸಿದರು. ಕೊನೆಗೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದ ಬಳಿಕ ಸಿದ್ದರಾಮಯ್ಯ ಸ್ಥಳದಿಂದ ತೆರಳಿದರು.
ಕ್ರಿಮಿನಲ್ ಬೇಕೋ, ಸುಸಂಸ್ಕೃತರು ಬೇಕೋ- ಆರ್ಆರ್ ನಗರದಲ್ಲಿ ಸಿದ್ದರಾಮಯ್ಯ ಪ್ರಶ್ನೆ
"ಇದೊಂದು ರೀತಿ ರೌಡಿಸಂ, ಮುನಿರತ್ನ ಇವರನ್ನು ಕಳುಹಿಸಿದ್ಧಾರೆ. ನಾನು ಬಂದಿದ್ದೇನೆ, ಸೋಲುತ್ತೇನೆಂದು ಅವರಿಗೆ ಗೊತ್ತಾಗಿದೆ. ಸೋಲುವ ಭಯದಿಂದ ಈ ರೀತಿ ರೌಡಿಸಂ ಮಾಡಿಸುತ್ತಿದ್ಧಾರೆ. ಮತದಾರರಿಗೆ ಇವೆಲ್ಲಾ ಗೊತ್ತಾಗುತ್ತದೆ, ಜನ ನೋಡುತ್ತಿದ್ಧಾರೆ. ನಿಮ್ಮ ರೌಡಿಸಂ, ದೌರ್ಜನಕ್ಕೆ ಮತದಾರರು 3ನೇ ತಾರೀಖು ತಕ್ಕ ಉತ್ತರ ಕೊಡುತ್ತಾರೆ" ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಶವಂತಪುರದ ಬಿ.ಕೆ.ನಗರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಭಾಷಣಕ್ಕೆ ಅಡ್ಡಿಪಡಿಸಿದ್ದರ ಜೊತೆಗೆ ವಾಹನಗಳಿಗೂ ತಡೆಯೊಡ್ಡಿದ ಘಟನೆ ನಡೆದಿದೆ. ಇದರಿಂದ ಕೆರಳಿದ ಸಿದ್ದರಾಮಯ್ಯ ಅವರು, "ಈ ಗುಂಡಾಗಿರಿಗೆ ಹೆದರಬೇಡಿ, ಈ ರೀತಿ ಮುಂದುವರಿದರೆ ಬಿಜೆಪಿ ಎಲ್ಲಿಯೂ ಸಭೆ ನಡೆಸಲು ಬಿಡುವುದಿಲ್ಲ, ಮೆರವಣಿಗೆಗೂ ಬಿಡುವುದಿಲ್ಲ. ಈ ರೀತಿಯ ದೌರ್ಜನ್ಯಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹೆದರುವುದಿಲ್ಲ. ತಕ್ಷಣವೇ ಅವರನ್ನು ಬಂಧಿಸದಿದ್ದರೆ ಠಾಣೆ ಮುಂದೆ ಧರಣಿ ಮಾಡಬೇಕಾಗುತ್ತದೆ," ಎಂದು ಸ್ಥಳದಲ್ಲೇ ಇದ್ದ ಪೊಲೀಸರಿಗೆ ಎಚ್ಚರಿಕೆ ನೀಡಿದರು.
ಅಷ್ಟೇ ಅಲ್ಲ ಸ್ಥಳದಿಂದ ವಾಪಸ್ ಹೋಗಲು ಒಪ್ಪದ ಸಿದ್ದರಾಮಯ್ಯ, ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಕರೆ ಮಾಡಿ ನಿಮ್ಮ ಮನೆಯ ಮುಂದೆ ಧರಣಿ ನಡೆಸುವುದಾಗಿಯೂ ಎಚ್ಚರಿಸಿದರು. ಕೊನೆಗೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದ ಬಳಿಕ ಸಿದ್ದರಾಮಯ್ಯ ಸ್ಥಳದಿಂದ ತೆರಳಿದರು.
ಕ್ರಿಮಿನಲ್ ಬೇಕೋ, ಸುಸಂಸ್ಕೃತರು ಬೇಕೋ- ಆರ್ಆರ್ ನಗರದಲ್ಲಿ ಸಿದ್ದರಾಮಯ್ಯ ಪ್ರಶ್ನೆ
"ಇದೊಂದು ರೀತಿ ರೌಡಿಸಂ, ಮುನಿರತ್ನ ಇವರನ್ನು ಕಳುಹಿಸಿದ್ಧಾರೆ. ನಾನು ಬಂದಿದ್ದೇನೆ, ಸೋಲುತ್ತೇನೆಂದು ಅವರಿಗೆ ಗೊತ್ತಾಗಿದೆ. ಸೋಲುವ ಭಯದಿಂದ ಈ ರೀತಿ ರೌಡಿಸಂ ಮಾಡಿಸುತ್ತಿದ್ಧಾರೆ. ಮತದಾರರಿಗೆ ಇವೆಲ್ಲಾ ಗೊತ್ತಾಗುತ್ತದೆ, ಜನ ನೋಡುತ್ತಿದ್ಧಾರೆ. ನಿಮ್ಮ ರೌಡಿಸಂ, ದೌರ್ಜನಕ್ಕೆ ಮತದಾರರು 3ನೇ ತಾರೀಖು ತಕ್ಕ ಉತ್ತರ ಕೊಡುತ್ತಾರೆ" ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.