ಬಸ್ ಇಲ್ಲ, ಮೆಟ್ರೋ ಇಲ್ಲ.. ಸಾರಿಗೆ ಸಂಪರ್ಕವಿಲ್ಲದೇ ಜನರ ಪರದಾಟ: ಆಟೋ, ಟ್ಯಾಕ್ಸಿಗಳೇ ಗತಿ..
ಮೆಜೆಸ್ಟಿಕ್ನಲ್ಲಿ ವಲಸೆ ಕಾರ್ಮಿಕರು ಮತ್ತು ಇತರರು ಬಸ್ಗಳಿಗಾಗಿ ಕಾಯುತ್ತಿರುವ ದೃಶ್ಯ ಕಂಡುಬಂತು. ಆದರೆ, ಸರಕಾರದ ಆದೇಶದನ್ವಯ ಮಾನ್ಯತಾ ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಬಸ್ಗಳಲ್ಲಿ ತೆರಳಲು ಅವಕಾಶವಿತ್ತು.
Vijaya Karnataka 16 Jun 2021, 1:39 pm
ಹೈಲೈಟ್ಸ್:
- 'ಅಗತ್ಯ ಸೇವೆ' ವಲಯದವರಿಗೆ ಮಾತ್ರ ಬಸ್ನಲ್ಲಿ ಪ್ರಯಾಣಕ್ಕೆ ಅವಕಾಶ
- ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳಿಗೆ ಮಾತ್ರ ಸಂಚರಿಸಲು ಅವಕಾಶ
- ವಲಸೆ ಕಾರ್ಮಿಕರು ಮತ್ತು ಇತರರ ಪರದಾಟ
ಬೆಂಗಳೂರು: ರಾಜ್ಯ ಸರಕಾರ ಸೋಮವಾರದಿಂದ ಭಾಗಶಃ ಲಾಕ್ಡೌನ್ ತೆರವುಗೊಳಿಸಿದ ನಂತರ ಬೆಂಗಳೂರು ನಗರ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಆದರೆ, ಸಾರ್ವಜನಿಕ ಸಾರಿಗೆಯ ಲಭ್ಯತೆಯಿಲ್ಲದೆ ಪ್ರಯಾಣಿಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ತೊಂದರೆ ಅನುಭವಿಸುವಂತಾಗಿದೆ. ಸರಕಾರದ ಆದೇಶದ ಪ್ರಕಾರ ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳಿಗೆ ಮಾತ್ರ ಸಂಚರಿಸಲು ಅವಕಾಶವಿದೆ. ಅಗತ್ಯ ಸೇವೆ, ಸರಕಾರಿ ಸೇವೆ ನಿರ್ವಹಿಸುವವರ ಸಂಚಾರಕ್ಕೆ 320 ಬಸ್ಗಳಿಗೆ ಮಾತ್ರ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಅನುಮತಿ ನೀಡಿದೆ. ಹೀಗಾಗಿ ಸಾರ್ವಜನಿಕರಿಗೆ ಪ್ರಯಾಣಿಸಲು ಕಷ್ಟವಾಗಿದೆ.
ಮೆಜೆಸ್ಟಿಕ್ನಲ್ಲಿ ವಲಸೆ ಕಾರ್ಮಿಕರು ಮತ್ತು ಇತರರು ಬಸ್ಗಳಿಗಾಗಿ ಕಾಯುತ್ತಿರುವ ದೃಶ್ಯ ಕಂಡುಬಂತು. ಆದರೆ, ಸರಕಾರದ ಆದೇಶದನ್ವಯ ಮಾನ್ಯತಾ ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಬಸ್ಗಳಲ್ಲಿ ತೆರಳಲು ಅವಕಾಶವಿತ್ತು.
ಸರಕಾರದ ನಿರ್ಧಾರವನ್ನು ಮಧ್ಯಮ ಮತ್ತು ಬಡವರ್ಗದ ಜನರು ಪ್ರಶ್ನಿಸಿದ್ದಾರೆ. ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳಿಗೆ ಮಾತ್ರ ಅವಕಾಶ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಡವರು ಹೆಚ್ಚಾಗಿ ಬಳಸುವ ಸಿಟಿ ಬಸ್ಗಳಿಗೆ ಶೇ.30ರಷ್ಟು ಸಂಚಾರಕ್ಕೆ ಅನುಮತಿ ನೀಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಸಡಿಲಗೊಳಿಸಿದ ಪರಿಣಾಮ ಪ್ರಮುಖ ಜಂಕ್ಷನ್ಗಳಲ್ಲಿ ಟ್ರಾಫಿಕ್ ಜಾಮ್ ಕಂಡುಬಂತು. ನೆರೆ ಜಿಲ್ಲೆಗಳಿಂದ ಬರುವ ನೂರಾರು ವಾಹನಗಳು ನಗರದ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಸರತಿ ಸಾಲಿನಲ್ಲಿ ಸಿಲುಕಿಕೊಂಡಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಫ್ರೀಡಂ ಪಾರ್ಕ್, ಶೇಷಾದ್ರಿಪುರಂ, ಮಲ್ಲೇಶ್ವರಂ, ಟೌನ್ ಹಾಲ್, ಕೆಂಪೇಗೌಡ ರಸ್ತೆ ಮತ್ತು ಮೆಜೆಸ್ಟಿಕ್ಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು.
ನಿಯಮ ಉಲ್ಲಂಘಿಸಿದ್ದಕ್ಕಾಗಿ 139 ಬೈಕ್ಗಳೂ ಸೇರಿದಂತೆ 154 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆಯಡಿ 12 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು 'ವಿಕ'ಗೆ ತಿಳಿಸಿದ್ದಾರೆ.
'ಅಗತ್ಯ ಸೇವೆಯಲ್ಲಿರುವವರಿಗೆ ಬಿಎಂಟಿಸಿ ಅನುಮತಿ ನೀಡಿದೆ. ಬಸ್ ಹತ್ತಿದ್ದ ನನ್ನನ್ನು ಕೆಳಗಿಳಿಸಲಾಯಿತು. ಕಾರ್ಮಿಕನಾಗಿರುವ ನನಗೆ ಕೆಲಸಕ್ಕೆ ತೆರಳುವ ಅನಿವಾರ್ಯವಿತ್ತು. ಆದರೆ ಕಂಡಕ್ಟರ್ ಅನುಮತಿ ನೀಡದ ಕಾರಣ ಕೆಲಸಕ್ಕೆ ತೆರಳಲು ಸಾಧ್ಯವಾಗಲಿಲ್ಲ' ಎಂದು ವಿಜಯನಗರ ನಿವಾಸಿ ಅವಿನಾಶ್ ಉಚ್ಚಡ್ ಬೇಸರ ತೋಡಿಕೊಂಡರು.
ಮೆಜೆಸ್ಟಿಕ್ನಲ್ಲಿ ವಲಸೆ ಕಾರ್ಮಿಕರು ಮತ್ತು ಇತರರು ಬಸ್ಗಳಿಗಾಗಿ ಕಾಯುತ್ತಿರುವ ದೃಶ್ಯ ಕಂಡುಬಂತು. ಆದರೆ, ಸರಕಾರದ ಆದೇಶದನ್ವಯ ಮಾನ್ಯತಾ ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಬಸ್ಗಳಲ್ಲಿ ತೆರಳಲು ಅವಕಾಶವಿತ್ತು.
ಸರಕಾರದ ನಿರ್ಧಾರವನ್ನು ಮಧ್ಯಮ ಮತ್ತು ಬಡವರ್ಗದ ಜನರು ಪ್ರಶ್ನಿಸಿದ್ದಾರೆ. ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳಿಗೆ ಮಾತ್ರ ಅವಕಾಶ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಡವರು ಹೆಚ್ಚಾಗಿ ಬಳಸುವ ಸಿಟಿ ಬಸ್ಗಳಿಗೆ ಶೇ.30ರಷ್ಟು ಸಂಚಾರಕ್ಕೆ ಅನುಮತಿ ನೀಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಸಡಿಲಗೊಳಿಸಿದ ಪರಿಣಾಮ ಪ್ರಮುಖ ಜಂಕ್ಷನ್ಗಳಲ್ಲಿ ಟ್ರಾಫಿಕ್ ಜಾಮ್ ಕಂಡುಬಂತು. ನೆರೆ ಜಿಲ್ಲೆಗಳಿಂದ ಬರುವ ನೂರಾರು ವಾಹನಗಳು ನಗರದ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಸರತಿ ಸಾಲಿನಲ್ಲಿ ಸಿಲುಕಿಕೊಂಡಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ಫ್ರೀಡಂ ಪಾರ್ಕ್, ಶೇಷಾದ್ರಿಪುರಂ, ಮಲ್ಲೇಶ್ವರಂ, ಟೌನ್ ಹಾಲ್, ಕೆಂಪೇಗೌಡ ರಸ್ತೆ ಮತ್ತು ಮೆಜೆಸ್ಟಿಕ್ಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು.
ನಿಯಮ ಉಲ್ಲಂಘಿಸಿದ್ದಕ್ಕಾಗಿ 139 ಬೈಕ್ಗಳೂ ಸೇರಿದಂತೆ 154 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆಯಡಿ 12 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು 'ವಿಕ'ಗೆ ತಿಳಿಸಿದ್ದಾರೆ.
'ಅಗತ್ಯ ಸೇವೆಯಲ್ಲಿರುವವರಿಗೆ ಬಿಎಂಟಿಸಿ ಅನುಮತಿ ನೀಡಿದೆ. ಬಸ್ ಹತ್ತಿದ್ದ ನನ್ನನ್ನು ಕೆಳಗಿಳಿಸಲಾಯಿತು. ಕಾರ್ಮಿಕನಾಗಿರುವ ನನಗೆ ಕೆಲಸಕ್ಕೆ ತೆರಳುವ ಅನಿವಾರ್ಯವಿತ್ತು. ಆದರೆ ಕಂಡಕ್ಟರ್ ಅನುಮತಿ ನೀಡದ ಕಾರಣ ಕೆಲಸಕ್ಕೆ ತೆರಳಲು ಸಾಧ್ಯವಾಗಲಿಲ್ಲ' ಎಂದು ವಿಜಯನಗರ ನಿವಾಸಿ ಅವಿನಾಶ್ ಉಚ್ಚಡ್ ಬೇಸರ ತೋಡಿಕೊಂಡರು.