ಆ್ಯಪ್ನಗರ

ಜ್ಯೋತಿಷಿಯ ಸಲಹೆ ಮೇರೆಗೆ ತಡವಾಗಿ ಪ್ರಯಾಣ ಆರಂಭಿಸಿದ ಬಿಎಂಟಿಸಿ ಬಸ್ ಚಾಲಕ

ಬಿಎಂಟಿಸಿ ಬಸ್‌ನ ಚಾಲಕನೊಬ್ಬ ವಿಳಂಬವಾಗಿ ಪ್ರಯಾಣ ಆರಂಭಿಸಿದ್ದಕ್ಕೆ ಜ್ಯೋತಿಷಿಗಳ ಸಲಹೆ ಕಾರಣ ಎಂದು ಹೇಳಿಕೊಂಡಿದ್ದಾನೆ. ನಿಗದಿತ ಸಮಯಕ್ಕೆ ಬಸ್ ಹೊರಟಿದ್ದರೆ 15 ಪ್ರಯಾಣಿಕರು ಮೃತಪಡುತ್ತಿದ್ದರು ಎಂದು ಜ್ಯೋತಿಷಿಗಳು ಹೇಳಿದ ಕಾರಣ ತಡವಾಗಿ ಹೊರಟೆ ಎಂದು ಚಾಲಕ ಸಮರ್ಥಿಸಿಕೊಂಡಿದ್ದಾನೆ.

TIMESOFINDIA.COM 10 Oct 2018, 3:31 pm
ಬೆಂಗಳೂರು: ಬಿಎಂಟಿಸಿ ಬಸ್‌ವೊಂದು ನಿಗದಿತ ಸಮಯಕ್ಕಿಂತ ಹಲವು ನಿಮಿಷಗಳ ಕಾಲ ವಿಳಂಬವಾಗಿ ಡಿಪೋದಿಂದ ತೆರಳಿದೆ. ಇದರಲ್ಲೇನು ವಿಶೇಷ ಅಂತೀರಾ? ಈ ಬಗ್ಗೆ ಡ್ರೈವರ್‌ಗೆ ಮುಖ್ಯ ಕಚೇರಿಯಿಂದ ನೋಟಿಸ್ ಸಲ್ಲಿಸಿದ್ದಕ್ಕೆ ಅವರು ಕೊಟ್ಟ ಉತ್ತರವೇ ವಿಚಿತ್ರ.
Vijaya Karnataka Web bmtc


''ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ಬಸ್‌ ಅನ್ನು ನಿಗದಿತ ಸಮಯಕ್ಕಿಂತ ಹಲವು ನಿಮಿಷಗಳ ಕಾಲ ತಡವಾಗಿ ಹೊರಟೆ. ಸರಿಯಾದ ಸಮಯಕ್ಕೆ ಬಸ್ ಹೊರಟಿದ್ದರೆ 15 ಪ್ರಯಾಣಿಕರು ಬಲಿಯಾಗುತ್ತಿದ್ದರು'' ಎಂದು ಬಸ್‌ ಡ್ರೈವರ್‌ ನೋಟಿಸ್‌ಗೆ ಉತ್ತರ ನೀಡಿದ್ದಾನೆ.

ಬಿಎಂಟಿಸಿ ಸಂಸ್ಥೆಯ ಆಂತರಿಕ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಈ ವಿಚಾರ ವೈರಲ್‌ ಆಗಿದ್ದು, ಹಲವು ಬಸ್ ಚಾಲಕರು ಹಾಗೂ ಕಂಡಕ್ಟರ್‌ಗಳು ಆತ ನಗೆಪಾಟಲಿಗೀಡಾಗಿದ್ದಾನೆ. ಆದರೆ, ಬಿಎಂಟಿಸಿ ಸಂಸ್ಥೆ ಈ ಮಾಹಿತಿಯನ್ನು ಪರಿಶೀಲನೆ ಮಾಡುತ್ತಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಿಂದ ಮೆಜೆಸ್ಟಿಕ್‌ವರೆಗೆ 45ಜೆ ರೂಟ್‌ನಲ್ಲಿ ಯೋಗೇಶ್‌ ಗೌಡ ಎಂಬ ಬಸ್ ಚಾಲಕ ಈ ರೀತಿ ನಗೆಪಾಟಲಿಗೆ ಗುರಿಯಾಗಿದ್ದಾನೆ.

ಬೆಳಗ್ಗೆ 6.15ಕ್ಕೆ ಡಿಪೋದಿಂದ ಹೊರಡಬೇಕಿದ್ದ ಬಸ್‌ ಅನ್ನು 7.35ಕ್ಕೆ ಬಸ್‌ ಚಾಲಕ ಸಂಚಾರ ಆರಂಭಿಸಿದ್ದಾನೆ. ಇದರಿಂದ ಸಾರಿಗೆ ಸಂಸ್ಥೆಗೆ ನಷ್ಟವಾಗಿದೆ. ಆದರೆ, ತಾನು 1 ಗಂಟೆ 20 ನಿಮಿಷ ವಿಳಂಬ ಮಾಡಿಲ್ಲ ಎಂದು ಯೋಗೇಶ್‌ ಗೌಡ ಹೇಳಿಕೊಂಡಿದ್ದಾನೆ. ಜತೆಗೆ,'' 6.35ಕ್ಕೆ ಟ್ರಿಪ್ ಆರಂಭಿಸಬೇಕಿತ್ತು. ಆದರೆ, ನಾನು 50 ನಿಮಿಷ ತಡವಾಗಿ ಅಂದರೆ ಬೆಳಗ್ಗೆ 7.25ಕ್ಕೆ ಹೊರಟಿದ್ದೆ. ಆಗಸ್ಟ್ 31ರಂದು ತಾನು ಪ್ರಖ್ಯಾತ ಜ್ಯೋತಿಷಿಯೊಬ್ಬರನ್ನು ಭೇಟಿ ಮಾಡಿದ್ದೆ. ಅವರು ರಾಹುಕಾಲದ ವೇಳೆ ಬಸ್‌ ಹೊರಟರೆ, ನಿನ್ನ ಬಸ್‌ನಲ್ಲಿರುವ 15 ಪ್ರಯಾಣಿಕರು ಮೃತಪಡುತ್ತಾರೆ ಎಂದು ಭವಿಷ್ಯ ನುಡಿದರು. ಬಿಎಂಟಿಸಿಗೆ ನಷ್ಟ ಉಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಬದಲಾಗಿ ಪ್ರಯಾಣಿಕರನ್ನು ಬಚಾವ್ ಮಾಡುವುದಾಗಿತ್ತು'' ಎಂದು ಬಿಎಂಟಿಸಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಲ್ಲದೆ, ''ಬಿಎಂಟಿಸಿಯವರೇ ಹೋಮ ಹವನ ಕೈಗೊಳ್ಳುತ್ತಾರೆ. ಜತೆಗೆ, ಗಣೇಶ ಚತುರ್ಥಿ, ಬಸವ ಜಯಂತಿ ಸೇರಿ ಅನೇಕ ಹಬ್ಬಗಳನ್ನು ಆಚರಣೆ ಮಾಡುತ್ತಾರೆ'' ಎಂದು ತನ್ನನ್ನು ತಾನು ಸಮರ್ಥಿಸಿಕೊಂಡಿದ್ದಾನೆ. ಆದರೆ, ಬಿಎಂಟಿಸಿ ಅಧಿಕಾರಿಗಳು ಮಾತ್ರ ಗೌಡ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ