ಆ್ಯಪ್ನಗರ

ಬಾಷ್‌ ಕಾರ್ಮಿಕರ ಆಮರಣಾಂತ ಉಪವಾಸ 4ನೇ ದಿನಕ್ಕೆ

ಬಾಷ್ ಕಾರ್ಮಿಕರ ಆಮರಣಾಂತ ಉಪವಾಸ ಸತ್ಯಾಗ್ರಹ 4 ನೇ ದಿನಕ್ಕೆ ಕಾಲಿಟ್ಟಿದು, ಹೋರಾಟ 486 ದಿನಗಳತ್ತ ಸಾಗಿದೆ.

ವಿಕ ಸುದ್ದಿಲೋಕ 11 Dec 2016, 6:00 pm
ಬೆಂಗಳೂರು: ಬಾಷ್ ಕಾರ್ಮಿಕರ ಆಮರಣಾಂತ ಉಪವಾಸ ಸತ್ಯಾಗ್ರಹ 4 ನೇ ದಿನಕ್ಕೆ ಕಾಲಿಟ್ಟಿದು, ಹೋರಾಟ 486 ದಿನಗಳತ್ತ ಸಾಗಿದೆ.
Vijaya Karnataka Web bosch staffers indefinite fast
ಬಾಷ್‌ ಕಾರ್ಮಿಕರ ಆಮರಣಾಂತ ಉಪವಾಸ 4ನೇ ದಿನಕ್ಕೆ


ನಿರಶನ ನಡೆಸಿರುವ ನಾಗೇಶ್, ಸತೀಶ್ ಎಂಬುವವರ ಸ್ಥಿತಿ ಚಿಂತಾಜನಕವಾಗಿದ್ದು. ಇನ್ನುಳಿದ 6 ಜನರ ಸ್ಥಿತಿ
(ಪ್ರಶಾಂತ್, ನಾಗರಾಜ್, ಪ್ರವೀಣ್, ನಾಗೇಶ್ ಬಾಬು, ರವಿಕುಮಾರ್, ಶಂಕರಯ್ಯ ಹಿರೇಮಠ್, ಕೃಷ್ಣ) ಗಂಭೀರವಾಗಿದೆ.

ನಿರಶನ ನಡೆಸಿರುವ ಕಾರ್ಮಿಕರ ಆರೋಗ್ಯ ಚಿಂತಾಜನಕವಾಗಿದೆ ಎಂದು ಸರಕಾರಿ ವೈದ್ಯಾಧಿಕಾರಿಗಳು ದೃಢ ಪಡಿಸಿದ್ದಾರೆ.

'ಕಂಪನಿ ದ್ವಾರದ ಎದುರೇ ನಿರಶನ ನಡೆಯುತ್ತಿದ್ದರೂ ಆಡಳಿತವರ್ಗ ಯಾವುದೇ ಪರಿಹಾರಕ್ಕೆ ಮುಂದೆ ಬರದೆ ತನ್ನ ಮೊಂಡು ಧೋರಣೆ ಮುಂದುವರಿಸಿದೆ,' ಎಂದು ಪ್ರತಿಭಟನೆ ನಡೆಸಿರುವ ಕಾರ್ಮಿಕರು ದೂರಿದ್ದಾರೆ.

ಈ ಹಿಂದೆ ಡಿಸೆಂಬರ್‌ 8ರಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಆಡಳಿತವರ್ಗ ತನ್ನ ಅದೇ ಚಾಳಿ ಮುಂದುವರಿಸಿತ್ತು, ಸಮಸ್ಯೆ ಬಗೆಹರಿಸುವ ಮನಸ್ಸು ಮಾಡಲಿಲ್ಲ ಎಂದು ಹೇಳಲಾಗಿದೆ.

ಪ್ರತಿಭಟನೆ ಏಕೆ ?

ಕಾರಣವಿಲ್ಲದೆ ತಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಆರೋಪಿಸಿ ಬಾಷ್ ವಿರುದ್ಧ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಆಗಸ್ಟ್‌ 14, 2016ಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 263 ಮಂದಿಯನ್ನು ಕಾಯಂ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದ ಕಂಪೆನಿ ನಂತರ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿದೆ ಎಂದು ದೂರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ