ಬೆಂಗಳೂರು: ಇತ್ತೀಚೆಗೆ ನಿರ್ಮಾಣಗೊಂಡಿದ್ದ ಕಟ್ಟಡವೊಂದು ಏಕಾಏಕಿ ವಾಲಿಕೊಂಡ ಕಾರಣ ಮಾರತ್ತಹಳ್ಳಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಆ ಕಟ್ಟಡದಲ್ಲಿ ವಾಸವಿದ್ದವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.
ಮಾರತ್ತಹಳ್ಳಿ ಸಮೀಪದ ಅಶ್ವತ್ಥನಗರದಲ್ಲಿನ ಸೈಟ್ವೊಂದರಲ್ಲಿ ನಿರ್ಮಿಸಲಾಗಿದ್ದ 3 ಅಂತಸ್ತಿನ ಕಟ್ಟಡ, 4 ತಿಂಗಳ ಹಿಂದೆ ಪೂರ್ಣಗೊಂಡಿತ್ತು. ಆಂಧ್ರಪ್ರದೇಶ ಮೂಲದ ಗುತ್ತಿಗೆದಾರ ವೆಂಕಟೇಶ್ ಎಂಬುವವರು ನಿರ್ಮಾಣ ಮಾಡಿದ್ದ ಈ ಕಟ್ಟಡದಲ್ಲಿ ಪಿ.ಜಿ ನಡೆಸಲಾಗುತ್ತಿತ್ತು.
ಗುರುವಾರ ರಾತ್ರಿ ಪಿಲ್ಲರ್ನಲ್ಲಿ ಬಿರುಕು ಕಾಣಿಸಿಕೊಂಡು ಒಂದು ಕಡೆಗೆ ವಾಲಿಕೊಳ್ಳಲು ಆರಂಭಿಸಿದೆ. ಭೀತಿಗೊಂಡ ನಿವಾಸಿಗಳು, ಕೂಡಲೇ ಹೊರಗೆ ಬಂದು ಸುರಕ್ಷಿತ ಸ್ಥಳಗಳಿಗೆ ತೆರಳಿದರು.
ಸುದ್ದಿ ತಿಳಿದು ಸ್ಥಳೀಯ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಮತ್ತು ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ಧಾವಿಸಿದ್ದಾರೆ. ಕಟ್ಟಡ ಕುಸಿಯುವ ಅಪಾಯವಿದೆ. ಹೀಗಾಗಿ, ಕಟ್ಟಡದ ಸುತ್ತ ಜನ ಮತ್ತು ವಾಹನ ಸಂಚಾರವನ್ನು ಪೊಲೀಸರು ತಡೆದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಮಾರತ್ತಹಳ್ಳಿ ಸಮೀಪದ ಅಶ್ವತ್ಥನಗರದಲ್ಲಿನ ಸೈಟ್ವೊಂದರಲ್ಲಿ ನಿರ್ಮಿಸಲಾಗಿದ್ದ 3 ಅಂತಸ್ತಿನ ಕಟ್ಟಡ, 4 ತಿಂಗಳ ಹಿಂದೆ ಪೂರ್ಣಗೊಂಡಿತ್ತು. ಆಂಧ್ರಪ್ರದೇಶ ಮೂಲದ ಗುತ್ತಿಗೆದಾರ ವೆಂಕಟೇಶ್ ಎಂಬುವವರು ನಿರ್ಮಾಣ ಮಾಡಿದ್ದ ಈ ಕಟ್ಟಡದಲ್ಲಿ ಪಿ.ಜಿ ನಡೆಸಲಾಗುತ್ತಿತ್ತು.
ಗುರುವಾರ ರಾತ್ರಿ ಪಿಲ್ಲರ್ನಲ್ಲಿ ಬಿರುಕು ಕಾಣಿಸಿಕೊಂಡು ಒಂದು ಕಡೆಗೆ ವಾಲಿಕೊಳ್ಳಲು ಆರಂಭಿಸಿದೆ. ಭೀತಿಗೊಂಡ ನಿವಾಸಿಗಳು, ಕೂಡಲೇ ಹೊರಗೆ ಬಂದು ಸುರಕ್ಷಿತ ಸ್ಥಳಗಳಿಗೆ ತೆರಳಿದರು.
ಸುದ್ದಿ ತಿಳಿದು ಸ್ಥಳೀಯ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಮತ್ತು ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ಧಾವಿಸಿದ್ದಾರೆ. ಕಟ್ಟಡ ಕುಸಿಯುವ ಅಪಾಯವಿದೆ. ಹೀಗಾಗಿ, ಕಟ್ಟಡದ ಸುತ್ತ ಜನ ಮತ್ತು ವಾಹನ ಸಂಚಾರವನ್ನು ಪೊಲೀಸರು ತಡೆದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.