ಆ್ಯಪ್ನಗರ

ವಾಲಿದ 4 ಮಹಡಿ ಕಟ್ಟಡ: ನಿವಾಸಿಗಳು ಸುರಕ್ಷಿತವಾಗಿ ಹೊರಕ್ಕೆ

ಇತ್ತೀಚೆಗೆ ನಿರ್ಮಾಣಗೊಂಡಿದ್ದ ಕಟ್ಟಡವೊಂದು ಏಕಾಏಕಿ ವಾಲಿಕೊಂಡ ಕಾರಣ ಮಾರತ್ತಹಳ್ಳಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಆ ಕಟ್ಟಡದಲ್ಲಿ ವಾಸವಿದ್ದವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.

Vijaya Karnataka 7 Dec 2018, 5:00 am
ಬೆಂಗಳೂರು: ಇತ್ತೀಚೆಗೆ ನಿರ್ಮಾಣಗೊಂಡಿದ್ದ ಕಟ್ಟಡವೊಂದು ಏಕಾಏಕಿ ವಾಲಿಕೊಂಡ ಕಾರಣ ಮಾರತ್ತಹಳ್ಳಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಆ ಕಟ್ಟಡದಲ್ಲಿ ವಾಸವಿದ್ದವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.
Vijaya Karnataka Web building damage people safe
ವಾಲಿದ 4 ಮಹಡಿ ಕಟ್ಟಡ: ನಿವಾಸಿಗಳು ಸುರಕ್ಷಿತವಾಗಿ ಹೊರಕ್ಕೆ


ಮಾರತ್ತಹಳ್ಳಿ ಸಮೀಪದ ಅಶ್ವತ್ಥನಗರದಲ್ಲಿನ ಸೈಟ್‌ವೊಂದರಲ್ಲಿ ನಿರ್ಮಿಸಲಾಗಿದ್ದ 3 ಅಂತಸ್ತಿನ ಕಟ್ಟಡ, 4 ತಿಂಗಳ ಹಿಂದೆ ಪೂರ್ಣಗೊಂಡಿತ್ತು. ಆಂಧ್ರಪ್ರದೇಶ ಮೂಲದ ಗುತ್ತಿಗೆದಾರ ವೆಂಕಟೇಶ್‌ ಎಂಬುವವರು ನಿರ್ಮಾಣ ಮಾಡಿದ್ದ ಈ ಕಟ್ಟಡದಲ್ಲಿ ಪಿ.ಜಿ ನಡೆಸಲಾಗುತ್ತಿತ್ತು.

ಗುರುವಾರ ರಾತ್ರಿ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡು ಒಂದು ಕಡೆಗೆ ವಾಲಿಕೊಳ್ಳಲು ಆರಂಭಿಸಿದೆ. ಭೀತಿಗೊಂಡ ನಿವಾಸಿಗಳು, ಕೂಡಲೇ ಹೊರಗೆ ಬಂದು ಸುರಕ್ಷಿತ ಸ್ಥಳಗಳಿಗೆ ತೆರಳಿದರು.

ಸುದ್ದಿ ತಿಳಿದು ಸ್ಥಳೀಯ ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಮತ್ತು ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ಧಾವಿಸಿದ್ದಾರೆ. ಕಟ್ಟಡ ಕುಸಿಯುವ ಅಪಾಯವಿದೆ. ಹೀಗಾಗಿ, ಕಟ್ಟಡದ ಸುತ್ತ ಜನ ಮತ್ತು ವಾಹನ ಸಂಚಾರವನ್ನು ಪೊಲೀಸರು ತಡೆದು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ