ಆ್ಯಪ್ನಗರ

ಅಜಿತಾಭ್‌ ನಾಪತ್ತೆ ಪ್ರಕರಣ: 11 ತಿಂಗಳ ಬಳಿಕ ಎಫ್‌ಐಆರ್‌ ದಾಖಲಿಸಿದ ಸಿಬಿಐ

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಟೆಕ್ಕಿ 2017 ಡಿ.19ರಂದು ಕಾಣೆಯಾಗಿದ್ದರು. ಸಿಬಿಐನ ವಿಶೇಷ ಅಪರಾಧ ದಳ ಇದೀಗ ಎಫ್‌ಐಆರ್‌ ದಾಖಲಿಸಿಕೊಂಡಿದೆ.

TIMESOFINDIA.COM 22 Nov 2018, 6:06 pm
[This story originally published in Times of India nov 22, 2018]
Vijaya Karnataka Web ajitabh


ಬೆಂಗಳೂರು: ಹನ್ನೊಂದು ತಿಂಗಳ ಬಳಿಕ ಬೆಂಗಳೂರಿನ ಟೆಕ್ಕಿ ಅಜಿತಾಭ್‌ ನಾಪತ್ತೆ ಪ್ರಕರಣವನ್ನು ಸಿಬಿಐ ದಾಖಲಿಸಿಕೊಂಡಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಟೆಕ್ಕಿ 2017 ಡಿ.19ರಂದು ಕಾಣೆಯಾಗಿದ್ದರು. ಸಿಬಿಐನ ವಿಶೇಷ ಅಪರಾಧ ದಳ ಇದೀಗ ಎಫ್‌ಐಆರ್‌ ದಾಖಲಿಸಿಕೊಂಡಿದೆ.

ವೈಟ್‌ಫೀಲ್ಡ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತಿಂಗಳು ಕಳೆದರೂ ಯಾವುದೇ ಪ್ರಗತಿ ಕಾಣದ ಹಿನ್ನೆಲಯಲ್ಲಿ ಪೋಷಕರು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅ.21ರಂದು ಹೈಕೋರ್ಟ್‌ ಚೆನ್ನೈನ ಸಿಬಿಐಗೆ ಪ್ರಕರಣ ವರ್ಗಾವಣೆ ಮಾಡುವಂತೆ ಆದೇಶ ನೀಡಿ, ಜಿ. ಕಲೈಮಣಿ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಇದೀಗ ಸಿಬಿಐ ಐಪಿಸಿ 363ರ ಪ್ರಕಾರ ಅಪಹರಣ ಪ್ರಕರಣ ದಾಖಲಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್‌ಫೀಲ್ಡ್‌ ಠಾಣೆಯಿಂದ ಆರಂಭಿಕ ತನಿಖಾ ವರದಿ ಇತ್ಯಾದಿ ಪುರಾವೆಗಳನ್ನು ಸಿಬಿಐಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
2017 ಡಿ.18ರಂದು ಸಂಜೆ 6.30ರ ವೇಳೆ ಅಜಿತಾಭ್‌ ಮಾರುತಿ ಸಿಯಾಜ್‌ ಕಾರಿನಲ್ಲಿ ಮನೆಯಿಂದ ತೆರಳಿದ್ದರು. ಆ ಬಳಿಕ ಮನೆಗೆ ಹಿಂದಿರುಗಿಲ್ಲ. ಡಿ.19ರಿಂದ ಅಜಿತಾಭ್‌ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ಆ ದಿನ ಬೆಳಗ್ಗೆ ಅಜಿತಾಭ್‌ ಪೋಷಕರಿಗೆ ವಿಚಾರ ತಿಳಿಸಲಾಗಿತ್ತು ಎಂದು ಸ್ನೇಹಿತ ರವಿ ಕುಮಾರ್‌ ಮಾಹಿತಿ ನೀಡಿದ್ದಾರೆ.

ಬ್ರಿಟಿಷ್‌ ಟೆಲಿಕಾಂನಲ್ಲಿ ಕೆಲಸ ಮಾಡುತ್ತಿದ್ದ ಅಜಿತಾಭ್‌, ಕೋಲ್ಕತಾದ ಐಐಎಂನಲ್ಲಿ ಉನ್ನತ ಶಿಕ್ಷಣ ಪಡೆಯಲು ಅರ್ಹತೆ ಪಡೆದಿದ್ದರು. ಈ ಸಂಬಂಧ ಅವರು 5 ಲಕ್ಷ ರೂ. 2017 ಡಿಸೆಂಬರ್‌ ಅಂತ್ಯದೊಳಗೆ ಪಾವತಿಸಬೇಕಿತ್ತು. ಹೀಗಾಗಿ ಅವರು ತಮ್ಮ ಸಿಯಾಜ್‌ ಕಾರನ್ನು 10.8 ಲಕ್ಷ ರೂ. ಗೆ ಮಾರಾಟ ಮಾಡಲು ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಹಾಕಿದ್ದರು. ಕಾರು ಖರೀದಿಗೆ ಆಸಕ್ತಿ ಇರುವ ವ್ಯಕ್ತಿಯನ್ನು ಕಾಣಲು ಮನೆಯಿಂದ ಹೋದ ಅಜಿತಾಭ್‌ ಹಿಂದಿರುಗಿಲ್ಲ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣ ಗೊಂದಲದ ಗೂಡಾಗಿ ಪರಿಣಮಿಸಿದ್ದು, ಈ ಹಿಂದೆ ತನಿಖೆ ವೇಳೆ, ಅಜಿತಾಭ್‌ ಖರೀದಿಸಿದ್ದ ಸಿಮ್‌ ಕಾರ್ಡ್‌ಗೆ ನಕಲಿ ದಾಖಲೆಗಳನ್ನು ನೀಡಿದ್ದು ಗೊತ್ತಾಗಿದೆ. ಅಂತೆಯೇ ಬಳಕೆ ಮಾಡುತ್ತಿದ್ದ ಮೊಬೈಲ್‌ ಗುಂಜೂರ್‌ನಲ್ಲಿ ಸಿಕ್ಕಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ