ಗಿರೀಶ್ ಕೋಟೆ
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಗೆದ್ದುಕೊಳ್ಳುವುದು ಜೆಡಿಎಸ್, ಕಾಂಗ್ರೆಸ್ ಎರಡೂ ಪಕ್ಷಕ್ಕೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಳೆದ ಬಾರಿ ಜೆಡಿಎಸ್ನಿಂದ ಗೆದ್ದಿದ್ದ ಜಮೀರ್ ಅಹಮದ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ. ಈ ಕಾರಣಕ್ಕೇ ಇವರನ್ನು ಸೋಲಿಸಲು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶತಾತಗತಾಯ ಪ್ರಯತ್ನ ನಡೆಸಿದ್ದಾರೆ.
ಜಮೀರ್ ಮಣಿಸಲು, ಕಾಂಗ್ರೆಸ್ನಲ್ಲಿದ್ದ ಅಲ್ತಾಫ್ ಖಾನ್ ಅವರನ್ನು ಜೆಡಿಎಸ್ಗೆ ಸೆಳೆದುಕೊಂಡು ಕಣಕ್ಕೆ ಇಳಿಸಲಾಗಿದೆ. ಬಿಜೆಪಿಯಿಂದ ಕಳೆದ ಬಾರಿಯ ಅಭ್ಯರ್ಥಿ ಬಿ.ವಿ.ಗಣೇಶ್ ಅವರಿಗೆ ಟಿಕೆಟ್ ಕೈ ತಪ್ಪಿದ್ದು ಮಾಜಿ ಉಪಮೇಯರ್ ಲಕ್ಷ್ಮೇನಾರಾಯಣ್ ಅವರಿಗೆ ಬಿಜೆಪಿ ಟಿಕೆಟ್ ಒಲಿದಿದೆ. ಕ್ಷೇತ್ರದಲ್ಲಿ ನಿರ್ಣಾಯಕ ಆಗಿರುವ ಮುಸ್ಲಿಂ ಮತಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಹಂಚಿಕೊಂಡರೆ ಹಿಂದೂ ಮತಗಳ ಕ್ರೋಡೀಕರಣದಿಂದ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಆದರೆ ಈ ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಬಿಜೆಪಿಯು ಈ ಲೆಕ್ಕಾಚಾರ ಫಲ ನೀಡುವ ಸಾಧ್ಯತೆ ಕಡಿಮೆ.
2013ರ ಚುನಾವಣೆಯಲ್ಲಿ ಗೆದ್ದಿದ್ದ ಜಮೀರ್ ಅಹಮದ್ ಶೇ 52.32ರಷ್ಟು ಮತಗಳಿಸಿದ್ದಲ್ಲದೆ 30 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಇವರ ಪ್ರತಿಸ್ಫರ್ಧಿ ಕಾಂಗ್ರೆಸ್ಸಿನ ಜಿ.ಎ.ಬಾವ 26,177 ಮತ (ಶೇ.24.31)ಗಳನ್ನು ಗಳಿಸಿದ್ದರು. 17,720 ಮತ (ಶೇ.16.46) ಗಳಿಸಿದ್ದ ಬಿಜೆಪಿ ಮೂರನೇ ಸ್ಥಾನದಲ್ಲಿತ್ತು.
ಕಾಂಗ್ರೆಸ್ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಮತಗಳು 25 ಸಾವಿರ ಇದ್ದೇ ಇದೆ. ಜೆಡಿಎಸ್ನ ಸಾಂಪ್ರದಾಯಿಕ ಮತಗಳು ಈ ಕ್ಷೇತ್ರದಲ್ಲಿ 5 ರಿಂದ 8 ಸಾವಿರ ಮಾತ್ರ. ಉಳಿದಂತೆ ಜೆಡಿಎಸ್ನಿಂದ ಸ್ಫರ್ಧಿಸಿದವರ ವೈಯುಕ್ತಿಕ ವರ್ಚಸ್ಸೇ ಇಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಈ ಹಿಂದಿನ ಚುನಾವಣೆಗಳ ಅಂಕಿ ಅಂಶ ಹೇಳುತ್ತಿದೆ. ಇನ್ನು ಬಿಜೆಪಿ ಕಳೆದ ಬಾರಿ ಉತ್ತುಂಗದಲ್ಲಿದ್ದ ಮೋದಿ ಪ್ರಭಾವವನ್ನು ಆಶ್ರಯಿಸಿತ್ತು. ಈ ಬಾರಿ ಆ ಮಟ್ಟದ ಪ್ರಭಾವ ಇಲ್ಲದಿದ್ದರೂ ಮೋದಿ ಹೆಸರಿನಲ್ಲಿ ಹಿಂದೂ ಮತಗಳನ್ನು ಒಟ್ಟಾಗಿಸುವ ಪ್ರಯತ್ನದಲ್ಲಿ ಬಿಜೆಪಿ ಇದೆ. ಬಿಜೆಪಿ ಹಿಂದೂ ಮತಗಳನ್ನು ಒಟ್ಟಾಗಿಸಲು ಪ್ರಯತ್ನಿಸಿದಷ್ಟೂ ಮುಸ್ಲಿಂ ಮತಗಳು ಕಾಂಗ್ರೆಸ್ ಪರವಾಗಿ ಒಟ್ಟಾಗುವ ಸಾಧ್ಯತೆಯೂ ಇದ್ದೇ ಇದೆ.
ಜೆಡಿಎಸ್ನಿಂದ ಸ್ಪರ್ಧಿಸಿರುವ ಅಲ್ತಾಫ್ ಖಾನ್ ಪತ್ನಿ ಬಿಬಿಎಂಪಿ ಸದಸ್ಯರು. ಈ ಕಾರಣದಿಂದ ಇವರದ್ದೇ ಆದ 15 ರಿಂದ 18 ಸಾವಿರ ಮತಗಳು ಇದ್ದೇ ಇವೆ. ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಜೆಡಿಎಸ್ನಿಂದ ಆಯ್ಕೆಯಾಗಿರುವ ಬಿಬಿಎಂಪಿ ಸದಸ್ಯ ಇಮ್ರಾನ್ ಯಾವ ಕಡೆ ವಾಲುತ್ತಾರೆ ಎಂಬುದು ನಿರ್ಣಾಯಕವಾಗಲಿದೆ. ಕೆಲ ದಿನಗಳ ಮುಂಚೆಯಷ್ಟೇ ಜಮೀರ್ರನ್ನು ಬೆಂಬಲಿಸುವುದಾಗಿ ಇವರು ಹೇಳಿದ್ದರು. ಹಲವು ವರ್ಷಗಳಿಂದ ಅಲ್ತಾಫ್ ಜತೆ ವೈರತ್ವ ಹೊಂದಿದ್ದ ಇಮ್ರಾನ್ ಇತ್ತೀಚೆಗೆ ರಾಜಿಯಾಗಿದ್ದಾರಾದರೂ, ಅಧಿಕೃತವಾಗಿ ಯಾರನ್ನು ಬೆಂಬಲಿಸುತ್ತೇನೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
Also Read: Raichur Constituency Survey
2013ರ ಫಲಿತಾಂಶ
ಜಮೀರ್ ಅಹಮದ್ (ಜೆಡಿಎಸ್) 56339
ಜಿ.ಎ.ಬಾವ (ಕಾಂಗ್ರೆಸ್) 26177
ಬಿ.ವಿ.ಗಣೇಶ್ (ಬಿಜೆಪಿ) 17720
ಉಸ್ಮಾನ್ ಬೇಗ್ (ಎಸ್ಡಿಪಿ) 2942
ಚಲಾವಣೆಯಾದ ಒಟ್ಟು ಮತಗಳು (107679)
ಅಭಿವೃದ್ಧಿಯಲ್ಲಿ ಹಿಂದೆ
ಮಧ್ಯಮವರ್ಗ, ಮೇಲ್ಮಧ್ಯಮ ವರ್ಗ ಮತ್ತು ಬಡವರು, ಅತಿ ಬಡವರು ಹೆಚ್ಚಾಗಿರುವ ಕ್ಷೇತ್ರಇದಾಗಿದೆ. ಎಂಟು ಸ್ಲಂಗಳಿವೆ. ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾದ ಪ್ರದೇಶವಾದ್ದರಿಂದ ಕಿಷ್ಕಿಂದೆಯಂತಹ ಪ್ರದೇಶಗಳೂ ಇವೆ. ಮುಖ್ಯ ರಸ್ತೆಗಳಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸಗಳು ಕಾಣುವುದು ಬಿಟ್ಟರೆ, ಒಳಗೆ ಹೋದರೆ ಅದೇ ಹಳೆಯ ಪೇಟೆ. ಇನ್ನೂ ಗ್ರಾಮೀಣ ಸೊಗಡನ್ನು ಉಳಿಸಿಕೊಂಡಿದೆ. ರಾಜಕಾರಣಿಗಳ ಲೆಕ್ಕದಲ್ಲಿ ಇದು ಮುಸ್ಲಿಂ ಮತಗಳು ಪ್ರಾಬಲ್ಯ ಇರುವ ಕ್ಷೇತ್ರ. ಆದರೆ ಇಲ್ಲಿ ಎಲ್ಲ ಸಮುದಾಯದವರೂ ಬಹಳ ಅನ್ಯೋನ್ಯವಾಗಿದ್ದಾರೆ. ಕೋಮು, ಧಾರ್ಮಿಕ ಸಂಗತಿಗಳು ಈ ಕ್ಷೇತ್ರದ ನೆಮ್ಮದಿಗೆ ಧಕ್ಕೆ ಆಗದಂತೆ ಇಲ್ಲಿನ ನಿವಾಸಿಗಳೇ ಪ್ರಜ್ಞಾವಂತರಾಗಿ ಎಚ್ಚರ ವಹಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಿಂತ ವೈಯುಕ್ತಿಕವಾಗಿ ಸಹಾಯ ಮಾಡುತ್ತ ಎಲ್ಲರನ್ನೂ ಸಮಾಧಾನಪಡಿಸಲು ಯತ್ನಿಸುವುದೇ ಜಮೀರ್ ಸ್ಟೈಲ್ ಎನ್ನುವ ಆರೋಪ ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ.
ಈ ಕ್ಷೇತ್ರ ಮೊದಲಿನಿಂದಲೂ ಹೊರಗಿನವರ ಪಾಲಾಗುತ್ತಿದೆ. ಈ ಬಾರಿ ನಾನು ಸ್ಥಳೀಯನಾಗಿರುವುದರಿಂದ ಜನರ ಒಲವು ನನ್ನ ಕಡೆಗಿದೆ.
-ಅಲ್ತಾಫ್, ಜೆಡಿಎಸ್ ಅಭ್ಯರ್ಥಿ
ನಾನು ಈ ಕ್ಷೇತ್ರಕ್ಕೆ ಮನೆ ಮಗನಂತೆ ಇದ್ದೇನೆ. ಕ್ಷೇತ್ರದ ಇಂಚಿಂಚೂ ನನಗೆ ಗೊತ್ತು. ಹೀಗಾಗಿಯೇ ಕ್ಷೇತ್ರದ ಜನ ನನಗೆ ಆಶೀರ್ವದಿಸುತ್ತಿದ್ದಾರೆ.
-ಜಮೀರ್ ಅಹಮದ್, ಕಾಂಗ್ರೆಸ್ ಅಭ್ಯರ್ಥಿ
Also Read: Gadag Constituency Survey
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಗೆದ್ದುಕೊಳ್ಳುವುದು ಜೆಡಿಎಸ್, ಕಾಂಗ್ರೆಸ್ ಎರಡೂ ಪಕ್ಷಕ್ಕೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕಳೆದ ಬಾರಿ ಜೆಡಿಎಸ್ನಿಂದ ಗೆದ್ದಿದ್ದ ಜಮೀರ್ ಅಹಮದ್ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ. ಈ ಕಾರಣಕ್ಕೇ ಇವರನ್ನು ಸೋಲಿಸಲು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಶತಾತಗತಾಯ ಪ್ರಯತ್ನ ನಡೆಸಿದ್ದಾರೆ.
ಜಮೀರ್ ಮಣಿಸಲು, ಕಾಂಗ್ರೆಸ್ನಲ್ಲಿದ್ದ ಅಲ್ತಾಫ್ ಖಾನ್ ಅವರನ್ನು ಜೆಡಿಎಸ್ಗೆ ಸೆಳೆದುಕೊಂಡು ಕಣಕ್ಕೆ ಇಳಿಸಲಾಗಿದೆ. ಬಿಜೆಪಿಯಿಂದ ಕಳೆದ ಬಾರಿಯ ಅಭ್ಯರ್ಥಿ ಬಿ.ವಿ.ಗಣೇಶ್ ಅವರಿಗೆ ಟಿಕೆಟ್ ಕೈ ತಪ್ಪಿದ್ದು ಮಾಜಿ ಉಪಮೇಯರ್ ಲಕ್ಷ್ಮೇನಾರಾಯಣ್ ಅವರಿಗೆ ಬಿಜೆಪಿ ಟಿಕೆಟ್ ಒಲಿದಿದೆ. ಕ್ಷೇತ್ರದಲ್ಲಿ ನಿರ್ಣಾಯಕ ಆಗಿರುವ ಮುಸ್ಲಿಂ ಮತಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಹಂಚಿಕೊಂಡರೆ ಹಿಂದೂ ಮತಗಳ ಕ್ರೋಡೀಕರಣದಿಂದ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಆದರೆ ಈ ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಬಿಜೆಪಿಯು ಈ ಲೆಕ್ಕಾಚಾರ ಫಲ ನೀಡುವ ಸಾಧ್ಯತೆ ಕಡಿಮೆ.
ಕಾಂಗ್ರೆಸ್ ಪಕ್ಷಕ್ಕೆ ಈ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಮತಗಳು 25 ಸಾವಿರ ಇದ್ದೇ ಇದೆ. ಜೆಡಿಎಸ್ನ ಸಾಂಪ್ರದಾಯಿಕ ಮತಗಳು ಈ ಕ್ಷೇತ್ರದಲ್ಲಿ 5 ರಿಂದ 8 ಸಾವಿರ ಮಾತ್ರ. ಉಳಿದಂತೆ ಜೆಡಿಎಸ್ನಿಂದ ಸ್ಫರ್ಧಿಸಿದವರ ವೈಯುಕ್ತಿಕ ವರ್ಚಸ್ಸೇ ಇಲ್ಲಿ ಕೆಲಸ ಮಾಡುತ್ತಿದೆ ಎನ್ನುವುದು ಈ ಹಿಂದಿನ ಚುನಾವಣೆಗಳ ಅಂಕಿ ಅಂಶ ಹೇಳುತ್ತಿದೆ. ಇನ್ನು ಬಿಜೆಪಿ ಕಳೆದ ಬಾರಿ ಉತ್ತುಂಗದಲ್ಲಿದ್ದ ಮೋದಿ ಪ್ರಭಾವವನ್ನು ಆಶ್ರಯಿಸಿತ್ತು. ಈ ಬಾರಿ ಆ ಮಟ್ಟದ ಪ್ರಭಾವ ಇಲ್ಲದಿದ್ದರೂ ಮೋದಿ ಹೆಸರಿನಲ್ಲಿ ಹಿಂದೂ ಮತಗಳನ್ನು ಒಟ್ಟಾಗಿಸುವ ಪ್ರಯತ್ನದಲ್ಲಿ ಬಿಜೆಪಿ ಇದೆ. ಬಿಜೆಪಿ ಹಿಂದೂ ಮತಗಳನ್ನು ಒಟ್ಟಾಗಿಸಲು ಪ್ರಯತ್ನಿಸಿದಷ್ಟೂ ಮುಸ್ಲಿಂ ಮತಗಳು ಕಾಂಗ್ರೆಸ್ ಪರವಾಗಿ ಒಟ್ಟಾಗುವ ಸಾಧ್ಯತೆಯೂ ಇದ್ದೇ ಇದೆ.
ಜೆಡಿಎಸ್ನಿಂದ ಸ್ಪರ್ಧಿಸಿರುವ ಅಲ್ತಾಫ್ ಖಾನ್ ಪತ್ನಿ ಬಿಬಿಎಂಪಿ ಸದಸ್ಯರು. ಈ ಕಾರಣದಿಂದ ಇವರದ್ದೇ ಆದ 15 ರಿಂದ 18 ಸಾವಿರ ಮತಗಳು ಇದ್ದೇ ಇವೆ. ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಜೆಡಿಎಸ್ನಿಂದ ಆಯ್ಕೆಯಾಗಿರುವ ಬಿಬಿಎಂಪಿ ಸದಸ್ಯ ಇಮ್ರಾನ್ ಯಾವ ಕಡೆ ವಾಲುತ್ತಾರೆ ಎಂಬುದು ನಿರ್ಣಾಯಕವಾಗಲಿದೆ. ಕೆಲ ದಿನಗಳ ಮುಂಚೆಯಷ್ಟೇ ಜಮೀರ್ರನ್ನು ಬೆಂಬಲಿಸುವುದಾಗಿ ಇವರು ಹೇಳಿದ್ದರು. ಹಲವು ವರ್ಷಗಳಿಂದ ಅಲ್ತಾಫ್ ಜತೆ ವೈರತ್ವ ಹೊಂದಿದ್ದ ಇಮ್ರಾನ್ ಇತ್ತೀಚೆಗೆ ರಾಜಿಯಾಗಿದ್ದಾರಾದರೂ, ಅಧಿಕೃತವಾಗಿ ಯಾರನ್ನು ಬೆಂಬಲಿಸುತ್ತೇನೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.
Also Read: Raichur Constituency Survey
2013ರ ಫಲಿತಾಂಶ
ಜಮೀರ್ ಅಹಮದ್ (ಜೆಡಿಎಸ್) 56339
ಜಿ.ಎ.ಬಾವ (ಕಾಂಗ್ರೆಸ್) 26177
ಬಿ.ವಿ.ಗಣೇಶ್ (ಬಿಜೆಪಿ) 17720
ಉಸ್ಮಾನ್ ಬೇಗ್ (ಎಸ್ಡಿಪಿ) 2942
ಚಲಾವಣೆಯಾದ ಒಟ್ಟು ಮತಗಳು (107679)
ಅಭಿವೃದ್ಧಿಯಲ್ಲಿ ಹಿಂದೆ
ಮಧ್ಯಮವರ್ಗ, ಮೇಲ್ಮಧ್ಯಮ ವರ್ಗ ಮತ್ತು ಬಡವರು, ಅತಿ ಬಡವರು ಹೆಚ್ಚಾಗಿರುವ ಕ್ಷೇತ್ರಇದಾಗಿದೆ. ಎಂಟು ಸ್ಲಂಗಳಿವೆ. ಕೆಂಪೇಗೌಡರ ಕಾಲದಲ್ಲಿ ನಿರ್ಮಾಣವಾದ ಪ್ರದೇಶವಾದ್ದರಿಂದ ಕಿಷ್ಕಿಂದೆಯಂತಹ ಪ್ರದೇಶಗಳೂ ಇವೆ. ಮುಖ್ಯ ರಸ್ತೆಗಳಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸಗಳು ಕಾಣುವುದು ಬಿಟ್ಟರೆ, ಒಳಗೆ ಹೋದರೆ ಅದೇ ಹಳೆಯ ಪೇಟೆ. ಇನ್ನೂ ಗ್ರಾಮೀಣ ಸೊಗಡನ್ನು ಉಳಿಸಿಕೊಂಡಿದೆ. ರಾಜಕಾರಣಿಗಳ ಲೆಕ್ಕದಲ್ಲಿ ಇದು ಮುಸ್ಲಿಂ ಮತಗಳು ಪ್ರಾಬಲ್ಯ ಇರುವ ಕ್ಷೇತ್ರ. ಆದರೆ ಇಲ್ಲಿ ಎಲ್ಲ ಸಮುದಾಯದವರೂ ಬಹಳ ಅನ್ಯೋನ್ಯವಾಗಿದ್ದಾರೆ. ಕೋಮು, ಧಾರ್ಮಿಕ ಸಂಗತಿಗಳು ಈ ಕ್ಷೇತ್ರದ ನೆಮ್ಮದಿಗೆ ಧಕ್ಕೆ ಆಗದಂತೆ ಇಲ್ಲಿನ ನಿವಾಸಿಗಳೇ ಪ್ರಜ್ಞಾವಂತರಾಗಿ ಎಚ್ಚರ ವಹಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಿಂತ ವೈಯುಕ್ತಿಕವಾಗಿ ಸಹಾಯ ಮಾಡುತ್ತ ಎಲ್ಲರನ್ನೂ ಸಮಾಧಾನಪಡಿಸಲು ಯತ್ನಿಸುವುದೇ ಜಮೀರ್ ಸ್ಟೈಲ್ ಎನ್ನುವ ಆರೋಪ ಕ್ಷೇತ್ರದಲ್ಲಿ ಸಾಮಾನ್ಯವಾಗಿದೆ.
ಈ ಕ್ಷೇತ್ರ ಮೊದಲಿನಿಂದಲೂ ಹೊರಗಿನವರ ಪಾಲಾಗುತ್ತಿದೆ. ಈ ಬಾರಿ ನಾನು ಸ್ಥಳೀಯನಾಗಿರುವುದರಿಂದ ಜನರ ಒಲವು ನನ್ನ ಕಡೆಗಿದೆ.
-ಅಲ್ತಾಫ್, ಜೆಡಿಎಸ್ ಅಭ್ಯರ್ಥಿ
ನಾನು ಈ ಕ್ಷೇತ್ರಕ್ಕೆ ಮನೆ ಮಗನಂತೆ ಇದ್ದೇನೆ. ಕ್ಷೇತ್ರದ ಇಂಚಿಂಚೂ ನನಗೆ ಗೊತ್ತು. ಹೀಗಾಗಿಯೇ ಕ್ಷೇತ್ರದ ಜನ ನನಗೆ ಆಶೀರ್ವದಿಸುತ್ತಿದ್ದಾರೆ.
-ಜಮೀರ್ ಅಹಮದ್, ಕಾಂಗ್ರೆಸ್ ಅಭ್ಯರ್ಥಿ
Also Read: Gadag Constituency Survey