ಆ್ಯಪ್ನಗರ

ಚಾಣಕ್ಯ ವಿವಿ ಮನುವಾದಿಗಳ ವಿಶ್ವವಿದ್ಯಾಲಯ ಆಗುತ್ತದೆ: ಭೂಮಿ ನೀಡುವ ನಿರ್ಧಾರಕ್ಕೆ ಸಿದ್ದರಾಮಯ್ಯ ವಿರೋಧ

ಕೆಐಎಡಿಬಿಗೆ ಸೇರಿದ ದೇವನಹಳ್ಳಿ ವಿಮಾನ ನಿಲ್ದಾಣದ ಹಿಂಭಾಗದಲ್ಲಿರುವ ಜಮೀನನ್ನು ಚಾಣಕ್ಯ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಸೆಸ್ ಸಂಸ್ಥೆಗೆ ನೀಡುವ ವಿಧೇಯಕದ ವಿರುದ್ಧ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 22 Sep 2021, 12:36 pm

ಹೈಲೈಟ್ಸ್‌:

  • ಚಾಣಕ್ಯ ವಿವಿ ಮನುವಾದಿಗಳ ವಿಶ್ವವಿದ್ಯಾಲಯ ಆಗಲಿದೆ
  • ಚಾಣಕ್ಯ ವಿವಿ ಆರೆಸ್ಸೆಸ್‌ಗೆ ಸೇರಿದವರ ಸೆಸ್ ಸಂಸ್ಥೆಯದು
  • ಕೈಗಾರಿಕಾ ಪ್ರದೇಶಕ್ಕೆ ವಶಪಡಿಸಿಕೊಂಡ ಭೂಮಿ ವಿವಿಗೆ
  • ಸರ್ಕಾರದ ಆಸ್ತಿಯನ್ನು ಮನುವಾದಿಗಳಿಗೆ ಮಾರಾಟ ಮಾಡಲಾಗಿದೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Siddaramaiah
ಬೆಂಗಳೂರು: ಚಾಣಕ್ಯ ವಿ.ವಿ ಮನುವಾದಿಗಳ ವಿಶ್ವವಿದ್ಯಾಲಯ ಆಗುತ್ತದೆ.‌ ಶ್ರೇಣೀಕೃತ ಸಮಾಜ ನಿರ್ಮಾಣ ಇವರ ಗುರಿ ಎಂದು ನನಗೆ ಅನ್ನಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ವಿಧಾನಸೌಧದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರ ಆತುರದಿಂದ ಚಾಣಕ್ಯ ವಿವಿ ವಿಧೇಯಕವನ್ನು ಧ್ವನಿ ಮತದಿಂದ ಚರ್ಚೆಗೆ ಅವಕಾಶ ಕೊಡದೆ ಅಂಗೀಕಾರ ಪಡೆದುಕೊಂಡಿದೆ. ಚಾಣಕ್ಯ ವಿವಿ ಸೆಂಟರ್ ಫಾರ್ ಎಜುಕೇಶನ್ ‌ಆಂಡ್ ಸೋಷಿಯಲ್ ಸ್ಟಡೀಸ್ ಸಂಸ್ಥೆಗೆ ಸೇರಿದ್ದು. ಈ ಸಂಸ್ಥೆಯಲ್ಲಿ ಇರುವವರು ಆರೆಸ್ಸೆಸ್‌ನವರು ಎಂದು ಆರೋಪ ಮಾಡಿದರು.
ಸಿದ್ದರಾಮಯ್ಯ ಅವರೇ ಮನೆಗೆ ಹೋಗಿ ಏನು ಮಾಡ್ತೀರಾ? ಮಾಧುಸ್ವಾಮಿ ಪ್ರಶ್ನೆಗೆ ಸದನದಲ್ಲಿ ನಗುವೋ ನಗು
ಟ್ರಸ್ಟಿಗಳ ಪೈಕಿ ಯಾರು ಕೂಡಾ ಶಿಕ್ಷಣ ಸಂಸ್ಥೆ ನಡೆಸುತ್ತಿಲ್ಲ. ಈ ಸಂಸ್ಥೆಗೆ ಬಿಜೆಪಿ ಸರ್ಕಾರ ಕ್ಯಾಬಿನೆಟ್ ನಿರ್ಣಯದ ಮೂಲಕ ಕೆಐಎಡಿಬಿಗೆ ಸೇರಿದ, ದೇವನಹಳ್ಳಿ ವಿಮಾನ ನಿಲ್ದಾಣದ ಹಿಂಭಾಗದಲ್ಲಿರುವ 116.16 ಎಕರೆ ಜಮೀನನ್ನು ಸೆಸ್ ಸಂಸ್ಥೆಗೆ ನೀಡಲು 28-4-21 ಕ್ಕೆ ಆದೇಶ ಆಗಿದೆ. ರೈತರಿಂದ ಪ್ರತಿ ಎಕರೆಗೆ 1.5 ಕೋಟಿ ಈ ಜಮೀನನ್ನು ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿದೆ. ಆದರೆ ಈ ಜಮೀನನ್ನು 50 ಕೋಟಿಗೆ ಸೆಸ್ ಸಂಸ್ಥೆಗೆ ನೀಡಿದ್ದಾರೆ. ರೈತರಿಗೆ 175 ಕೋಟಿ ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಪರಿಹಾರಕ್ಕಿಂತ ಮಾರಾಟ ಸಂದರ್ಭದಲ್ಲಿ ನಾಲ್ಕೈದು ಪಟ್ಟು ಬೆಲೆ ಹೆಚ್ಚಾಗಬೇಕು. ಇಂತಹ ಜಮೀನನ್ನು ಆರೆಸ್ಸೆಸ್‌ನವರಿಗೆ ಬಳುವಳಿಯಾಗಿ ಕೊಟ್ಟಿದ್ದಾರೆ. ನಿಯಮಾವಳಿಗಳ ಪ್ರಕಾರ ನಡೆಸಿಕೊಳ್ಳಲಿ. ಜಮೀನು ಕೊಡುವಾಗ ಮಾರುಕಟ್ಟೆ ಮೌಲ್ಯದ ಪ್ರಕಾರ ನೀಡಬೇಕು.‌ ಇದು ಮನುವಾದಿಗಳ ಯುನಿವರ್ಸಿಟಿ ಆಗುತ್ತದೆ. ಚಾಣಕ್ಯ ಮನುವಾದಿ ಕುಟುಂಬಕ್ಕೆ ಸೇರಿದವರು. ಇಂತವರ ಹೆಸರಿನಲ್ಲಿ ಅವರು ಎಂತಹ ಶಿಕ್ಷಣ ಸಂಸ್ಥೆ ತೆಗೆಯಬಹುದು? ಎಂದು ಪ್ರಶ್ನಿಸಿದರು.
'ಹೆತ್ತ ತಾಯಿಯೇ ಮತಾಂತರ ಆಗಿದ್ದಾರೆ!': ನೋವು ತೋಡಿಕೊಂಡ ಗೂಳಿಹಟ್ಟಿ ಶೇಖರ್
ಈ ವಿವಿ ಮೂಲಕ ಚಾತುವರ್ಣ ಶ್ರೇಣೀಕೃತ ವ್ಯವಸ್ಥೆ ಪುನರ್ ಸ್ಥಾಪಿಸಲು ಹೊರಟಿದ್ದಾರೆ ಎಂದು ಅನಿಸುತ್ತಿದೆ. ಸ್ಪೀಕರ್ ಕೂಡಾ ಇದಕ್ಕೆ ಮಹತ್ವ ಕೊಟ್ಟಿದ್ದಾರೆ. ಅವರು ಪಕ್ಷಾತೀತವಾಗಿ ಇರಬೇಕು. ಆದರೆ ಅವರು ನಡೆದುಕೊಂಡ ರೀತಿ ಪಕ್ಷತೀತವಾಗಿರಲಿಲ್ಲ. ಇದೊಂದು ಲೂಟಿಯಾಗಿದೆ ಹಾಗೂ ಸ್ವಜನಪಕ್ಷಪಾತವಾಗಿದೆ. ಬಿಲ್ ಭೂಮಿ ಹಂಚಿಕೆ ಆದೇಶ ರದ್ದು ಮಾಡಬೇಕು, ಖಾಸಗಿ ವಿವಿ ಮಾಡಲು ಅವಕಾಶ ಕೊಡಬಾರದು, ಅವರಿಗೆ ಯಾವುದೇ ಅರ್ಹತೆ ಇಲ್ಲ. ಸರ್ಕಾರದ ಆಸ್ತಿಯನ್ನು ಮನುವಾದಿಗಳಿಗೆ ಮಾರಾಟ ಮಾಡಿದ್ದು ಖಂಡನೀಯ. ಈ ನಿರ್ಣಯವನ್ನು ನಾವು ವಿರೋಧ ಮಾಡ್ತೀವಿ. ಹಾಗೆಯೇ ಈ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ಮಾಡ್ತೀವಿ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ನಾನು ಕೂಡ ವಿದ್ಯಾಸಂಸ್ಥೆ ನಡೆಸುತ್ತೇನೆ. ಈಗಾಗಲೇ ಇರುವ ವಿದ್ಯಾಸಂಸ್ಥೆಗಳ ವಿಸ್ತರಣೆಗಾಗಿ ಜಮೀನು ನೀಡುವುದು ಬೇರೆ. ಆದರೆ ಇಲ್ಲಿ ಸಂಸ್ಥೆಯೇ ಇಲ್ಲದವರೆಗೆ ಜಮೀನು ನೀಡಲಾಗಿದೆ ಎಂದು ಆರೋಪಿಸಿದರು.
ಶಾಸಕರು, ಉಸ್ತುವಾರಿ ಸಚಿವರು ಪೊಲೀಸರಿಗೆ ಸೂಚನೆ ಕೊಟ್ಟರೆ ಜೂಜಾಟ ನಿಯಂತ್ರಣ: ಯು.ಟಿ ಖಾದರ್
ಏರೋ ಸ್ಪೇಸ್‌ಗಾಗಿ ಜಮೀನು ತೆಗೆದುಕೊಂಡು, ಎಕರೆಗೆ ಹತ್ತು ಕೋಟಿ ಮೌಲ್ಯದ ಜಮೀನನ್ನು ಇದೀಗ ಸೆಸ್ ಸಂಸ್ಥೆಗೆ ನೀಡಲಾಗಿದೆ. ಅನುಭವ ಇರುವವರಿಗೆ ನೀಡಲಿ, ಸರ್ಕಾರಿ ಜಾಗ ನೀಡಲಿ. ಆದರೆ ಕೈಗಾರಿಕಾ ಉದ್ದೇಶದಿಂದ ವಶಪಡಿಸಿಕೊಂಡ ಜಮೀನನ್ನು ಇವರಿಗೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಡಿಕೆಶಿ ಪ್ರಶ್ನಿಸಿದರು.

ಆರೆಸ್ಸೆಸ್‌ಗೆ ಹಿಂಬಾಗಿಲಿನಿಂದ ಏಕೆ ಜಮೀನು ಕೊಡುತ್ತೀರಿ. ಕೊಡೋ ಹಾಗಿದ್ದರೆ ನೇರವಾಗಿಯೇ ಕೊಡಿ. ಇದು ಅಧಿಕಾರದ ದುರುಪಯೋಗವಾಗಿದೆ ಎಂದು ಆರೋಪ ಮಾಡಿದರು.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ