ಆ್ಯಪ್ನಗರ

ವಂಚಕ ಕಂಪನಿಯ ಐದು ಮಂದಿ ಸೆರೆ

ಅಧಿಕ ಲಾಭಾಂಶ ಅಥವಾ ಬಡ್ಡಿ ಕೊಡುವುದಾಗಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುವ ಕಂಪನಿಗಳ ವಿರುದ್ಧ ತೀವ್ರ ಸ್ವರೂಪದ ಕಾರ್ಯಾಚರಣೆ ಆರಂಭಿಸಿರುವ ಸಿಸಿಬಿ ಪೊಲೀಸರು ಜಯನಗರ ಎಐಎಂಎಂಎಸ್‌ ವೆಂಚರ್ಸ್‌ ಕಂಪನಿಯ ಐದು ಮಂದಿಯನ್ನು ಬಂಧಿಸಿದ್ದಾರೆ.

Vijaya Karnataka 12 Jan 2019, 5:00 am
ಬೆಂಗಳೂರು: ಅಧಿಕ ಲಾಭಾಂಶ ಅಥವಾ ಬಡ್ಡಿ ಕೊಡುವುದಾಗಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸುವ ಕಂಪನಿಗಳ ವಿರುದ್ಧ ತೀವ್ರ ಸ್ವರೂಪದ ಕಾರ್ಯಾಚರಣೆ ಆರಂಭಿಸಿರುವ ಸಿಸಿಬಿ ಪೊಲೀಸರು ಜಯನಗರ ಎಐಎಂಎಂಎಸ್‌ ವೆಂಚರ್ಸ್‌ ಕಂಪನಿಯ ಐದು ಮಂದಿಯನ್ನು ಬಂಧಿಸಿದ್ದಾರೆ.
Vijaya Karnataka Web cheating five arrest
ವಂಚಕ ಕಂಪನಿಯ ಐದು ಮಂದಿ ಸೆರೆ


ಜಯನಗರದ 9ನೇ ಬ್ಲಾಕ್‌ನಲ್ಲಿ ಕಚೇರಿ ಹೊಂದಿರುವ ಈ ವೆಂಚರ್ಸ್‌ ಕಂಪನಿಯಲ್ಲಿ ವಹಿವಾಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಯೂಬ್‌ ಅಲಿ ಖಾನ್‌ (41), ಇಲಿಯಸ್‌ ಫಾಷಾ (40), ಮೊಹಮದ್‌ ಮುಜಾಹಿದ್ದೀನ್‌ (41), ಮುದಾಸಿರ್‌ ಪಾಷಾ (35) ಹಾಗೂ ಮೊಹಮದ್‌ ಶಾಹೀದ್‌ (35) ಬಂಧಿತ ಆರೋಪಿಗಳು. ಇವರಿಂದ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

50 ಸಾವಿರದಿಂದ 20 ಲಕ್ಷದವರೆಗೂ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿದ್ದ ಕಂಪನಿ ಆರಂಭದ ಕೆಲವು ತಿಂಗಳು ಮಾತ್ರ ಶೇ 3ರಿಂದ 5 ಪ್ರಮಾಣದಲ್ಲಿ ಲಾಭಾಂಶ ನೀಡಿತ್ತು. ಆ ನಂತರ ಅಸಲು ಬಡ್ಡಿ ಕೊಡುವುದನ್ನು ನಿಲ್ಲಿಸಿಬಿಟ್ಟಿತ್ತು. ಇವರ ಮಾತು ನಂಬಿ ಸುಮಾರು 500 ಮಂದಿ ಹಣ ಹೂಡಿಕೆ ಮಾಡಿದ್ದರು. ಕಂಪನಿಯು ಒಟ್ಟು 65 ಕೋಟಿ ರೂ. ವಂಚಿಸಿದೆ ಎಂದು ಅಂದಾಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ